ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತ ನಂತರ ಹೂಳುವುದು ಅಥವಾ ಸುಟ್ಟು ನಾಶ ಮಾಡುವ ಬದಲಿಗೆ ಕಣ್ಣು ಇಲ್ಲದವರಿಗೆ ದಾನ ಮಾಡಿದರೆ ಅಂಧ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ಸರ್ವೆ ಇಲಾಖೆ ಅಧಿಕಾರಿ ಕೃಷ್ಣ ಪ್ರಸಾದ್ ಕರೆ ನೀಡಿದರು.
ತಾಲೂಕು ಸರ್ವೆ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದು ಸರಕಾರಿ ಸರ್ವೆ ನೌಕರರು ಮರಣದ ನಂತರ ನೇತ್ರದಾನ ಸಹಿ ಮಾಡಿದ ಪತ್ರವನ್ನು ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿಗೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಸರ್ವೆ ನೌಕರರು ಒಟ್ಟಾಗಿ ಇದೆ ಮೊದಲ ಬಾರಿಗೆ ನೇತ್ರ ದಾನ ಮಾಡಲು ಮುಂದಾಗಿದ್ದು, ಉಳಿದ ನೌಕರರಿಗೆ ಮಾದರಿಯಾಗಿದ್ದಾರೆ. ಕಣ್ಣು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆಗೆ ಸಂಪರ್ಕ ಬೆಳಸಲು ಕಣ್ಣು ಪ್ರಮುಖ ಸಾಧನ. ಇಂತಹ ಕಣ್ಣುಗಳನ್ನು ಮರಣದ ನಂತರ ಸುಟ್ಟು ನಾಶ ಮಾಡುವುದರ ಬದಲಿಗೆ ಅಂಧರಿಗೆ ನೀಡಿ ಅವರ ಬಾಳಗೆ ಬೆಳಕಾಗುವ ಮೂಲಕ ದಾರಿ ದೀಪವಾಗ ಬಹುದು. ಇಂತಹ ಪವಿತ್ರ ಕೆಲಸವನ್ನು ನಾವು ನಮ್ಮ ಸಿಬ್ಬಂದಿ ಸ್ವತಃ ಇಂದು ಕಣ್ಣು ದಾನ ಪತ್ರಕ್ಕೆ ಸಹಿ ಮಾಡಿದ್ದೇವೆ ಎಂದರು.
ಸರ್ವೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಸರ್ವೆ ಮಾಡಲಾಗುತ್ತದೆ. ಆರ್’ಟಿಸಿ ಹಿಂಭಾಗದಲ್ಲೇ ಸರ್ವೆ ಸ್ಕೆಚ್ ಇರುವಂತೆ ಮಾಡಲಾಗುತ್ತದೆ. ಇಂತಹ ಕೆಲಸಗಳನ್ನು ನಮ್ಮನ್ನು ನಾವು ತೊಡಗಿಸಿಕೊಂಡು ಕೆಲಸವನ್ನು ಮಾಡುತ್ತೇವೆ ಎಂದರು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ ಮಾತನಾಡಿ, ಸತ್ತ ನಂತರ ಕಣ್ಣುಗಳನ್ನು ದಾನ ಮಾಡುವುದರಿಂದ ಅಂಧಕಾರದಲ್ಲಿರುವವರ ಬಾಳಿನಲ್ಲಿ ಬೆಳಕು ನೀಡಿದ ಪುಣ್ಯ ಸಿಗುತ್ತದೆ. ಜಗತ್ತನ್ನೇ ಕಾಣದ ಅಂಧಕಾರದಲ್ಲಿರುವ ವ್ಯಕ್ತಿಗಳಿಗೆ ನೇತ್ರದಾನದ ಮೂಲಕ ನೆರವಾಗುವುದು ಪುಣ್ಯದ ಕೆಲಸ. ಇಂತಹ ಪುಣ್ಯದ ಕೆಲಸವನ್ನು ತಾಲೂಕು ಸರ್ವೆ ಅಧಿಕಾರಿಗಳು ಮಾಡುತ್ತಿರುವುದು ಉತ್ತಮವಾದ ಕಾರ್ಯ. ಸರ್ಕಾರಿ ಸರ್ವೆ ನೌಕರರು ಮರಣದ ನಂತರ ನೇತ್ರದಾನ ಮಾಡಲು ಪತ್ರಕ್ಕೆ ಸಹಿ ಹಾಕಿದ್ದಾರೆ. ಇದೆ ತರಹ ಎಲ್ಲ ಕಡೆಯಲ್ಲೂ ಆದರೆ ಅಂಧ ವ್ಯಕ್ತಿಗಳು ಇಲ್ಲವಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ. ಬಸವರಾಪ್ಪ, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಗಂಗಾಧರ ಮಾತನಾಡಿದರು.
ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ಟಿಎಚ್’ಓ ಪ್ರೇಮಸುಧಾ, ಆರೋಗ್ಯ ಸಹಾಯಕ ಕುದಾಪುರ ತಿಪ್ಪೇಸ್ವಾಮಿ, ತಾಲೂಕು ಸರ್ವೆ ಇಲಾಖೆ ಕೃಷ್ಣೇಗೌಡ, ಬಾಬುರೆಡ್ಡಿ, ನಾಗಭೂಷಣ್, ಬಿ.ಎಂ. ಮಂಜುನಾಥ, ಪ್ರಸನ್ನ, ಎ. ಉಮೇಶ, ಶಿವಪ್ರಕಾಶ್, ನಾಗೇಶ್, ರೇಖಾ, ಲಲಿತಮ್ಮ, ಮೋಹನ್ ಕುಮಾರ್, ಬಾಲರಾಜ್ ಜಯಣ್ಣ, ಕಾಂತರಾಜ ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post