Tuesday, June 3, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ವೇದ ಪುರಾಣಗಳಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಏನು ಉಲ್ಲೇಖವಿದೆ ಗೊತ್ತಾ?

June 5, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವೇದಗಳು ಇಂದು ಯಾವುದೇ ಒಂದು ಗುಂಪಿನ ಸ್ವತ್ತಾಗಿಲ್ಲ. ಪ್ರಪಂಚದಾದ್ಯಂತ ವಿದ್ವಾಂಸರುಗಳು ಅವುಗಳ ಆಂತರ್ಯವನ್ನು ಭೇದಿಸಲು ಪ್ರಯತ್ನಪಟ್ಟಿದ್ದಾರೆ. ವೇದಗಳಲ್ಲಿರುವ ವೈಜ್ಞಾನಿಕ ವಿಷಯಗಳನ್ನು ಆಧುನಿಕ ವಿಜ್ಞಾನ ವಿಷಯಗಳ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಒರೆಗಲ್ಲಿಗೆ ಹಚ್ಚಲಾಗಿದೆ (ನೋಡಿ: `History of Science, Philosophy and Culture in Indian Civilzation’ ಸಂಪುಟಗಳು. ಸಂ.ಡಿ.ಪಿ. ಚಟ್ಟೋಪಾಧ್ಯಾಯ).

ನಾವು ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಇಲ್ಲಿಯ ಮೂಲ ಜನಾಂಗಗಳು, ಸಸ್ಯ ಹಾಗೂ ಪ್ರಾಣಿಸಂಪತ್ತು, ಜನರ ಚಲನವಲನಗಳು, ಶಿಲಾಯುಗದ ಕಾಲದಿಂದ ಇಲ್ಲಿಯವರೆಗಾಗಿರುವ ಸಾಮಾಜಿಕ ವಿಕಾಸ, ವಿಭಿನ್ನ ಭಾಷಾ ಸಂಸ್ಕೃತಿಗಳು, ವೈದಿಕ ನಾಗರಿಕತೆ, ಜೈನ, ಬೌದ್ಧ ಧರ್ಮದ ಕಾಣಿಕೆಗಳು, ಹೊಸಧರ್ಮಗಳ ಪ್ರಭಾವ- ಇವೆಲ್ಲವುಗಳ ಕಡೆ ಗಮನ ಹರಿಸಬೇಕು. ಎಷ್ಟೇ ಭಿನ್ನತೆ ವೈವಿಧ್ಯತೆಗಳಿದ್ದರೂ ಭಾರತೀಯ ಸಂಸ್ಕೃತಿಯಲ್ಲಿ ಇನ್ನೂ ಏಕತೆ ಉಳಿದುಕೊಂಡಿದೆ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ.

ವೇದಗಳ ಕಾಲದಿಂದ ಇಲ್ಲಿಯವರೆಗೂ ಭಾರತದ ಬಹುಪಾಲು ಜನರು ಕೃಷಿಕರೇ. ಗೋವು ಮತ್ತಿತರ ಸಾಕುಪ್ರಾಣಿಗಳು ಇನ್ನೂ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಆಧ್ಯಾತ್ಮ ಭಾರತದ ಹೃದಯವಾಗಿದೆ. ಶ್ರೀಸಾಮಾನ್ಯನ ಜೀವನಧರ್ಮ ಹಾಗೂ ಜಾನಪದದಲ್ಲಿ ವೇದೋಪನಿಷತ್ತುಗಳ ಪರಿಮಳವಿದೆ. (ಯಕ್ಷಗಾನ, ಬಯಲು ನಾಟಕ, ಹರಿಕಥೆಗಳು, ತೀರ್ಥಯಾತ್ರೆಗಳು, ಅತಿಥಿ ಸತ್ಕಾರ, ಸಂಪ್ರದಾಯಗಳು, ನಂಬಿಕೆಗಳು, ಗಾದೆಗಳು ಇತ್ಯಾದಿ) ಯಾವುದೇ ದೇವರಿಗೆ ಮಾಡಿದ ಪೂಜೆಯಾಗಲಿ ಅದು ಒಂದೇ ದೇವರಿಗೆ ಸಲ್ಲುತ್ತದೆಂಬ ನಂಬಿಕೆ. ವೇದಘೋಷಗಳು ಇಂದೂ ಅಲ್ಲಲ್ಲಿ ಕೇಳಿಬರುತ್ತವೆ. ವೃಕ್ಷಪೂಜೆ, ವೃಕ್ಷ ಜಾನಪದಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದಲೇ ಎ.ಸಿ. ಬೋಸ್ ಅವರು ಈ ಕೆಳಗಿನಂತೆ ಹೇಳಿದ್ದಾರೆ (ನೋಡಿ ಅನಕೃ, 1962. ‘ಭಾರತೀಯ ಸಂಸ್ಕೃತಿ ದರ್ಶನ): ‘‘ನಮ್ಮ ಸಂಸ್ಕೃತಿಯ ಮೂಲ ನಮ್ಮ ಅಮೃತಮಯವಾದ, ಅಜೇಯ ತತ್ವವಾದ ವೇದಗಳು. ನಮ್ಮ ಸಂಸ್ಕೃತಿಯ ಬೆಳವಣಿಗೆ ಬಂದಿರುವುದು ವೇದಗಳ ನೀತಿಯಲ್ಲಿ ಜೀವಿಸಿದ ನಮ್ಮ ದೇಶದ ಮಹಾನುಭಾವರುಗಳ ಮಹಿಮೆಯಿಂದ.

ವೇದಗಳಲ್ಲಿ ಯಾವುದೇ ಜಾತಿಭೇದಗಳಿಲ್ಲ. ಸ್ತ್ರೀ ಸಮಾನತೆಗೆ ಇವು ಹೆಸರಾಗಿದೆ. ‘ಏಕದೈವತ್ವವನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿರುವುವು ವೇದಗಳು. ಇಲ್ಲಿ ಕಾಡಿನ ದೇವತೆ ‘ಅರಣ್ಯಾನಿ. ಮರಗಳಿಂದ ಹಿಡಿದು ಜೀವಿಗಳಲ್ಲೂ ದೈವತ್ವವನ್ನು ಕಾಣುವ ಪ್ರಯತ್ನ ಇಲ್ಲಿದೆ. ಪ್ರಾರ್ಥನೆಗಳಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬುದಿದೆಯೇ ಹೊರತು ಸ್ವಾರ್ಥವಿಲ್ಲ. (ಅಥರ್ವ ವೇದದ ಕಾಲಕ್ಕೆ ಬಂದಾಗ ಅನೇಕ ಜಾನಪದ ಬದಲಾವಣೆಗಳಿವೆ).

ವೃಕ್ಷ ಪೂಜಾ ಪದ್ಧತಿ, ಮಾನವ ಸಮಾಜದಲ್ಲಿ ಹೇಗೆ ಪ್ರಾರಂಭವಾಯಿತೆಂಬುದನ್ನು ಸರಿಯಾಗಿ ಊಹಿಸುವುದು ಕಷ್ಟವಾಗುತ್ತದೆ. ದೇವಾಲಯಗಳ ಮುಂದೆ ಬೆಳೆಸಿಕೊಂಡವು ಪವಿತ್ರ ವೃಕ್ಷಗಳಾದವೇ? ಪಿತೃ ಸಮಾಧಿಗಳ ಮೇಲೆ ಬೆಳೆಸಿಕೊಂಡವು ಪವಿತ್ರ ವೃಕ್ಷಗಳಾದವೇ? ಅಥವಾ ಆದಿಮಾನವನಿಗೆ ಆಶ್ರಯ, ಹಣ್ಣು ಹಂಪಲುಗಳನ್ನು ಪೂರೈಸಿದ್ದುದರಿಂದಲೋ ಅಥವಾ ಅವುಗಳ ಹೆದರಿಕೆಯಾಗುವಷ್ಟು ಬೃಹದಾಕಾರಗಳು ಅವುಗಳಲ್ಲಿ ದೈವವನ್ನು ಕಾಣಲು ಪ್ರಯತ್ನಿಸುವಂತೆ ಪ್ರೇರೇಪಿಸಿತೋ- ಹೇಳುವುದು ಕಷ್ಟ. ಇವುಗಳ ಬಗ್ಗೆ ಹೆಚ್ಚು ಚರ್ಚಿಸಬಹುದೇ ಹೊರತು, ತೀರ್ಮಾನಗಳನ್ನು ಕೊಡುವುದು ಸುಲಭವಲ್ಲ.
ಒಟ್ಟಿನಲ್ಲಿ ವೇದಗಳ ಕಾಲದಿಂದ ಇಲ್ಲಿಯವರೆಗೂ ಮರಗಳು ಮತ್ತು ಅವುಗಳ ಉತ್ಪನ್ನಗಳು ನಮ್ಮ ಜೀವನ ಹಾಗೂ ಜಾನಪದದಲ್ಲಿ ಹಾಸುಹೊಕ್ಕಾಗಿವೆ.

ಇಂದಿನ ಜಾಗತಿಕ ಉಷ್ಣೀಕರಣ ಹಾಗೂ ಸಸ್ಯಾಗಾರ ಪರಿಣಾಮಕ್ಕೆ (Global warming and Green house effect) ಕಾಡುಗಳು ಹಾಗೂ ಮರಗಳ ವಿನಾಶವೂ ಒಂದು ಕಾರಣ. ವೇದಗಳ ಕಾಲದಿಂದ ಇಲ್ಲಿಯವರೆಗೂ ಜಾತಕರ್ಮ, ಉಪನಯನ, ವಿವಾಹ, ಅಂತ್ಯಸಂಸ್ಕಾರ ಮೊದಲಾದ ಕರ್ಮಗಳಿಗೆ ಮರಗಳ ಭಾಗಗಳು ಮತ್ತು ಅವುಗಳ ಉತ್ಪನ್ನಗಳು ಬೇಕೆಬೇಕು. ವೇದಗಳ ಕಾಲದಲ್ಲಿ ಮನೆ ಕಟ್ಟುವ ಜಾಗದಲ್ಲಿ ಅರಳಿಮರವಿರಬಾರದೆಂಬುದಿತ್ತು. ಗೃಹ ಪ್ರವೇಶವಿತ್ತು. ಋಗ್ವೇದದಲ್ಲಿ 30 ಜಾನಪದ ಕಲೆಗಳನ್ನು ಹೆಸರಿಸಲಾಗಿದೆ. (ಹಾಡು, ಕವಿತೆ, ನೃತ್ಯ, ಗೀತ, ಕೊಳಲೂದುವುದು, ಕೊಂಬು ಊದುವುದು, ಶಂಖನಾದ, ನಗಾರಿ ಬಾರಿಸುವುದು, ಕೋಲಾಟ, ವಾಸ್ತುಶಿಲ್ಪ ಇವು ಮುಖ್ಯವಾದವು (ಹನುಮಂತರಾವ್, 1947).

ನೇಯ್ಗೆ, ಒಡವೆ ತಯಾರಿಕೆ, ಕಸೂತಿ ಕೆಲಸ, ಹೂ ಕಟ್ಟುವುದು. ರಥಗಳ ತಯಾರಿಕೆ, ಹಗ್ಗ ತಯಾರಿಸುವುದು, ಕಮ್ಮಾರ, ಚಮ್ಮಾರ ಹಾಗೂ ಕುಂಬಾರರ ಕಲೆಗಳು, ಬಿಲ್ಲು ತಯಾರಿಸುವುದು (ತಾಳೆ ಮರ ಇಲ್ಲವೇ ಬಿದಿರಿನಿಂದ), ಸಂಗೀತ (ಮೃದಂಗ, ಕೊಳಲು ಮತ್ತು ಕರ್ಕರಿ ಎಂಬ (ತಂತಿವಾದ್ಯ) ಕೊಳಲು-ಬಿದಿರಿನ ವಾಟೆಯಿಂದ, ಮೃದಂಗ ಮರಗಳಿಂದ ತಯಾರಾಗುತ್ತಿತ್ತು. ಯುದ್ಧ ಕಲೆಗಳಲ್ಲಿ ಬಿಲ್ಲು ತಯಾರಿಸುವುದು, ಕುದುರೆ ಪಳಗಿಸುವುದು, ಯಾಗ ಕಾಲದಲ್ಲಿ ಕಥೆಗಳನ್ನು ಹೇಳುತ್ತಿದ್ದುದು, ವಿವಾಹ ಕಾಲದಲ್ಲಿ ನೃತ್ಯ, ಸಂಗೀತ, ಗೂಡಾರ್ಥವಿರುವ ಮಂತ್ರಗಳು, ಬ್ರಹ್ಮೋದ್ಯವೆಂಬ ಒಗಟುಗಳು ಇವೆಲ್ಲಾ ಜಾನಪದ ಅಂಶಗಳೇ. ನಾಟ್ಯ ಮಾಡುವ ಗಂಡಸರು ‘ನೃತ್ಯರು ಹೆಂಗಸರು ‘ನೃತ್ಯಗಳು. ಹಾಸ್ಯರೂಪದ ನೃತ್ಯವೂ (ಹನುಮಂತರಾವ್, 1947) ಒಂದು ಜಾನಪದ ವಿಶೇಷತೆ (ಋ. 10.18.3) ಮರಗಳಿಂದ ಪಡೆದ ಸುರೆಯಪಾನ, ಸೋಮರಸದ ವಿಷಯಗಳು ಸಸ್ಯ ಜಾನಪದ ಅಂಶಗಳೇ. ಇಂದ್ರ ಅತಿಪಾನಿ, ಶಿವ ಸಾವಿರ ಔಷಧಗಳನ್ನು ಬಲ್ಲ ‘ಭೇಷಜ. ಅಂತ್ಯಕ್ರಿಯೆಯಲ್ಲಿ ಗಾಲಿಗಳಿಲ್ಲದ ರಥ (ಚಟ್ಟ) ಉಪಯೋಗಗೊಳ್ಳುತ್ತಿತ್ತು. ಇದು ಬಿದಿರಿನ ಗಳುಗಳಿಂದ ತಯಾರಾಗುತ್ತಿದ್ದವು. ಇಂದಿಗೂ ಈ ಜಾನಪದ ಅಂಶ ಮುಂದುವರೆದಿದೆ.

(ನಾಳೆ: ವೃಕ್ಷಗಳಲ್ಲಿ ದೈವತ್ವವನ್ನು ಕಾಣುವ ಪವಿತ್ರ ಸಂಸ್ಕೃತಿ ನಮ್ಮದು)


Get In Touch With Us info@kalpa.news Whatsapp: 9481252093

Tags: Dr Gururaj PoshettihalliGlobal warmingKannadaNewsWebsiteLatestNewsKannadanatureTreeVedasಜಾಗತಿಕ ಉಷ್ಣೀಕರಣಡಾ.ಗುರುರಾಜ ಪೋಶೆಟ್ಟಿಹಳ್ಳಿಭಾರತೀಯ ಸಂಸ್ಕೃತಿವೃಕ್ಷವೇದಗಳು
Previous Post

ಆಶಾ ಫೌಂಡೇಶನ್ ಸಂಸ್ಥೆಯಿಂದ ಬಡವರಿಗೆ ದಿನಸಿ, ತರಕಾರಿಗಳ ವಿತರಣೆ

Next Post

ಅದು ನನ್ನ ಪಾಲಿಗೆ ಯಕಶ್ಚಿತ್ ಮರವಾಗಿರಲಿಲ್ಲ: ನನ್ನ ಅಪ್ಪ, ನನ್ನ ದೈವವಾಗಿತ್ತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅದು ನನ್ನ ಪಾಲಿಗೆ ಯಕಶ್ಚಿತ್ ಮರವಾಗಿರಲಿಲ್ಲ: ನನ್ನ ಅಪ್ಪ, ನನ್ನ ದೈವವಾಗಿತ್ತು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ | ತುಘಲಕ್ ಆಡಳಿತಕ್ಕೆ ಉದಾಹರಣೆ | ಶಾಸಕ ಚನ್ನಬಸಪ್ಪ

June 3, 2025

SPMECPI ಹೂಡಿಕೆ ಯೋಜನೆ | ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತ ಪರಿಕಲ್ಪನೆಯ ಫಲ

June 3, 2025

ಅರಣ್ಯ ಸಂರಕ್ಷಣೆ, ಸಂವರ್ಧನೆಗೆ ಕುಂಬ್ಳೆ ಬಲ | ಈಶ್ವರ ಖಂಡ್ರೆ

June 3, 2025

Cycle Rally Organized by South Western Railway, Mysuru Division on World Bicycle Day

June 3, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಹಿಂದೂ ಮುಖಂಡರ ಹಳೆಯ ಭಾಷಣಗಳ ವಿರುದ್ಧ ಪ್ರಕರಣ | ತುಘಲಕ್ ಆಡಳಿತಕ್ಕೆ ಉದಾಹರಣೆ | ಶಾಸಕ ಚನ್ನಬಸಪ್ಪ

June 3, 2025

SPMECPI ಹೂಡಿಕೆ ಯೋಜನೆ | ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತ ಪರಿಕಲ್ಪನೆಯ ಫಲ

June 3, 2025

ಅರಣ್ಯ ಸಂರಕ್ಷಣೆ, ಸಂವರ್ಧನೆಗೆ ಕುಂಬ್ಳೆ ಬಲ | ಈಶ್ವರ ಖಂಡ್ರೆ

June 3, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!