No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Sunday, May 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಅದು ನನ್ನ ಪಾಲಿಗೆ ಯಕಶ್ಚಿತ್ ಮರವಾಗಿರಲಿಲ್ಲ: ನನ್ನ ಅಪ್ಪ, ನನ್ನ ದೈವವಾಗಿತ್ತು

ಪರಿಸರ ದಿನಕ್ಕೆ ಒಂದು ಕಥೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 5, 2020
in ಸಚಿನ್ ಪಾರ್ಶ್ವನಾಥ್
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅ’ಮರ’
ಹ್ಮ್ ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ಅವರ ಸಮಾಧಿ. ನೋವು ಸಂತಸ ಅಂದಾಗೆಲ್ಲ ಅಪ್ಪ ಓಡುತ್ತಿದ್ದುದು ಅಲ್ಲಿಗೆ. ನಾನು ಹುಟ್ಟಿದ್ದು ಆ ಮರದ ಕೆಳಗೆ ಅಮ್ಮನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂತೆ. ಅಪ್ಪ ಸತ್ತಿಲ್ಲ, ಸಾಯುವುದು ಇಲ್ಲ. ಮರದಿ ಮರವಾಗಿ, ಉಸಿರ ಉಸಿರಾಗಿ ಈಗಲೂ ಅಲ್ಲಿದ್ದಾರೆ. ಅಪ್ಪ ತೀರಿದಾಗ ಎಲೆಗಳ ಕಳೆದು ನಿಂತಿತ್ತು. ಅದು ಕೂಡ ನೊಂದಿತ್ತೇನೋ ಅನ್ನಿಸುತ್ತಿತ್ತು. ಒಂದಿಡೀ ವರ್ಷ ಚಿಕ್ಕ ಚಿಗುರು ಕಂಡಿರಲಿಲ್ಲ. ಊರಲ್ಲಿ ನಡೆಯುವ ಪ್ರತಿಯೊಬ್ಬರೂ ಅಪ್ಪನೊಡನೆ ಮರವು ತೀರಿತು ಎಂದವರೇ. ಅದೊಂದು ರಾತ್ರಿ ಅಪ್ಪ ಕನಸಿನಲ್ಲಿ ಬಂದು ಅದರ ಬುಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೇಳಿದಂತೆ ಭಾಸ. ವ್ಯವಸ್ಥೆ ಆಯಿತು ಮತ್ತೆ ಮರ ಮರಳಿತು. ಸಂದಿಗ್ಧತೆ ನೋಡಿ. ರೈಲು ಮಾರ್ಗಕ್ಕಾಗಿ ಆ ಮರವನ್ನು ಕಡಿದು ಹಾಕುತ್ತಾರಂತೆ.

ಬಿಳಲುಗಳ ಕಡಿದರೆ ಅಪ್ಪ ಆ ದಿನ ಊಟ ಮಾಡುತ್ತಿರಲಿಲ್ಲ. ಇನ್ನು ಮರವನ್ನು ಕಡಿದು ಬಿಟ್ಟರೆ ಅವರು ನಮ್ಮಿಂದ ಪೂರ್ತಿ ದೂರ ಆಗಿಬಿಡುತ್ತಾರೆ. ಏನಾದರೂ ಮಾಡಲೇಬೇಕು.

ಅಧಿಕಾರಿ, ಇಲಾಖೆ, ಮಂತ್ರಿ, ಕೋರ್ಟು, ಹೋರಾಟ ಎಲ್ಲವೂ ಆಯಿತು. ವೃಕ್ಷ ಕಡಿದೇ ಸಿದ್ಧ ಎಂಬುದವರ ನಿರ್ಣಯ. ಯಕಶ್ಚಿತ್ ಒಂದು ಮರಕ್ಕಾಗಿ ಊರಿಗೆ ಬರುವ ರೈಲು ತಡೆಯುತ್ತಿದ್ದಾನೆ ಅಂದುಕೊಂಡರು ಎಲ್ಲರೂ. ನನ್ನ ಪಾಲಿಗೆ ಅದು ಯಕಶ್ಚಿತ್ ಬಿಡಿ, ಮರವೂ ಅಲ್ಲ. ನನ್ನ ಅಪ್ಪ, ನನ್ನ ದೈವ. ಇನ್ನು ತಡ ಮಾಡಲು ಸಾಧ್ಯವೇ ಇಲ್ಲ. ಕಾಮಗಾರಿ ಅದಾಗಲೇ ಆರಂಭಿಸಿ ಆಗಿದೆ. ಬಂದಿರುವ ಹೊಸ ಅಧಿಕಾರಿ ತುಂಬಾ ಜೋರಂತೆ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳಲ್ಲವಂತೆ. ಏನು ಮಾಡುವುದು? ಅವರನ್ನು ಕಂಡು ಬರುವುದು ಎಂದುಕೊಂಡು ಹೊರಟೆ.

ನನ್ನ ಕಂಡು ಮತ್ತೆ ಕಛೇರಿಯ ತುಂಬೆಲ್ಲಾ ಗುಸು ಗುಸು. ಮತ್ತೆ ಬಂದ ಮರವುಳಿಸಲು ಅಂತ. ಸರ್ ನಮಸ್ತೆ.. ಪತ್ರಿಕೆಯ ಬದಿಯಲ್ಲಿ ಕಂಡ ಮುಖಕ್ಕೆ ನಮಸ್ಕಾರ ಮಾಡಿದೆ. ಹೋ ನೀವು ಮರವುಳಿಸುವವರು, ಬನ್ನಿ ಕುಳಿತುಕೊಳ್ಳಿ. ಇಷ್ಟು ಮರ್ಯಾದೆ ಆ ಜಾಗದಲ್ಲಿ ಸಿಕ್ಕಿದ್ದು ಇದೇ ಮೊದಲು. ಮಾತನಾಡಲು ಒಂದು ಧೈರ್ಯ ಬಂದಿತು. ನೀವೇನು ಮಾಡುತ್ತಿದ್ದೀರಿ ಗೊತ್ತಾ? ಸರ್ಕಾರದ ಕೆಲಸವನ್ನು, ಜನಪಯೋಗಿ ಯೋಜನೆಯನ್ನು ತಡೆದಿದ್ದೀರಿ. ಸರ್ಕಾರಿ ಮತ್ತು ಕೋರ್ಟಿನ ಸಮಯವನ್ನು ಇಷ್ಟು ವ್ಯರ್ಥ ಮಾಡಿದ್ದೀರಿ. ತಪ್ಪಲ್ಲವೇ? ನನಗೆ ಮಾತನಾಡಲು ಏನೂ ಇರಲಿಲ್ಲ. ನನ್ನ ಕನಸುಗಳೆಲ್ಲಾ ಸತ್ತು ಹೋದ ಅನುಭವ. ಅವರೇ ಮತ್ತೆ ಮಾತನಾಡಿದರು. ಆದರೆ ನನಗೆ ನಿಮ್ಮ ಹೋರಾಟ ಹಿಡಿಸಿತು. ನಿಮ್ಮಂಥ ಜನರೂ ಇದ್ದಾರೆ ಎಂದು ನಿಮ್ಮ ನೋಡಿದ ಮೇಲೆ ತಿಳಿದಿದ್ದು. ಪರಿಸರ ದಿನಕ್ಕೆ ಪುಟಗಟ್ಟಲೆ ಪಾಠ ಮಾಡುವ ನಮ್ಮ ನಡುವೆಯೇ ಕೋರ್ಟಿನ ಸಮನ್ಸ್ ಮುಂದೆಯೂ ಪಟ್ಟು ಹಿಡಿದು ಕೂತಿದ್ದೀರಿ. ಆ ದೇವರು ನಿಮ್ಮ ಸಂತತಿ ಸಾವಿರ ಮಾಡಲಿ. ನಾನು ನಿಮಗೆ ಒಂದು ಪುಟ್ಟ ಸಹಾಯ ಮಾಡಬಲ್ಲೆ. ನೀವು ಆ ಮರಕ್ಕೆ ಬದಲಾಗಿ ಬದಿಯಲ್ಲಿ ಜಾಗ ನೀಡಿದರೆ ನಾನು ಮರ ಉಳಿಸಿ ಕೊಡಬಲ್ಲೆ. ಅಬ್ಬಾ ಉಸಿರು ಬಂದಂತೆ ಆಯಿತು. ಕಣ್ಣುಗಳಲ್ಲಿ ಕಂಬನಿ ಧಾರಾಕಾರವಾಗಿ ಇಳಿಯುತ್ತಿದ್ದವು. ಕಣ್ಣೋರಿಸಿಕೊಳ್ಳಲು ಹೇಳಿ ಕುಡಿಯಲು ನೀರು ಕೊಟ್ಟರು. ನಾನು ಮರವುಳಿಸಿಲ್ಲ, ನಿಜಕ್ಕೂ ನೀವು ಉಳಿಸಿದಿರಿ. ದೇವರು ನಿಮ್ಮಂಥವರಲ್ಲಿ ಇದ್ದು ನಮ್ಮನ್ನು ಕಾಯುತ್ತಾರೆ ಎಂದೆ. ತುಂಬಾ ದೊಡ್ಡ ಮಾತು. ನಾನು ದೇವರಲ್ಲ. ನಿಮ್ಮ ಅಭಿಮಾನಿ ಅಂದುಕೊಳ್ಳಿ. ಚಿಕ್ಕ ಸಮಸ್ಯೆ ಇದೆ. ಬದಲಿ ಜಾಗವನ್ನು ನಾಳೆಯೊಳಗೆ ನೀವು ತಿಳಿಸಲೇಬೇಕು. ನಾನು ನಾಳೆ ಸಂಜೆ ಮೇಲಿನ ಕಛೇರಿಗೆ ಹೋಗಿ ಅದಕ್ಕೆ ಅನುಮತಿ ತರಬೇಕು. ಸರಿ ಎಂದು ನಮಸ್ಕರಿಸಿ ಹೊರಟೆ.

ಇಡೀ ರಾತ್ರಿ ಒಂದಿನಿತೂ ಮಲಗಲಿಲ್ಲ. ಮನೆಯ ಹೊರಗೆ ಕಾಲಿಟ್ಟಾಗ ಮುಳ್ಳೊಂದು ಕಾಲಡಿಗೆ ಸಿಕ್ಕಿತು. ಚುರುಕ್ ಎಂದಿತು. ರಕ್ತ ಬಸಿಯುತ್ತಿದ್ದ ಸೀಳಿದ ಅಂಗಾಲಿಗೆ ಬಟ್ಟೆ ಕಟ್ಟಿಕೊಂಡು ಮರದಡಿ ಬಂದೆ. ಮರದಿಂದ ನಮ್ಮವರು ದೂರವಾದರು, ಊರ ಜನ ಮಾತನಾಡಿಸುವುದು ಬಿಟ್ಟರು, ಲಕ್ಷಾಂತರ ರೂಪಾಯಿ ಹಣ ವ್ಯರ್ಥ ಆಯಿತು, ಕೋರ್ಟು ಕಛೇರಿ ಅಂತ ಕಾಲವೂ ಕಳೆದು ಹೋಗಿದೆ, ಈಗ ಕಾಲ ಗಾಯ, ಮುಂದೊಂದು ದಿನ ಮರವುರುಳಿ ಮನೆಯ ಮೇಲೆ ಬಿದ್ದರೆ…. ಅಂಗೈಯಗಲ ಜಾಗದಲ್ಲಿ ಬದಲಿ ಜಾಗವನ್ನು ಎಲ್ಲಿಂದ ನೀಡಬೇಕು? ಮನದ ತುಂಬಾ ಹಿಂದೆಂದೂ ಕಾಣದ ಪ್ರಶ್ನೆಗಳು. ನಿರ್ಧಾರಕ್ಕೆ ಬಂದಿದ್ದೆ ಇವತ್ತಿಗೆ ಆರು ವರ್ಷಗಳ ಹಿಂದೆ. ಮನೆಯಂಗಳದ ತುದಿಯಲ್ಲಿ ರೈಲು ಓಡುತ್ತಲೇ ಇದೆ.. ಮರದ ಬದಿಗೆ, ಅಪ್ಪನ ಸಮಾಧಿಯ ಮೇಲೆ..


Get In Touch With Us info@kalpa.news Whatsapp: 9481252093

Tags: FatherKannadaNewsWebsiteLatestNewsKannadaSachin ParshwanathTreeworld environment dayಮರವಿಶ್ವ ಪರಿಸರ ದಿನಸಚಿನ್ ಪಾರ್ಶ್ವನಾಥ್
Share202Tweet123Send
Previous Post

ವೇದ ಪುರಾಣಗಳಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಏನು ಉಲ್ಲೇಖವಿದೆ ಗೊತ್ತಾ?

Next Post

ಸೋಮಿನಕೊಪ್ಪ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಧಾರುಣ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಸೋಮಿನಕೊಪ್ಪ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಧಾರುಣ ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
A Colorful Memorable Brahmakalshotsava at Padubidri

A Colorful Memorable Brahmakalshotsava at Padubidri

May 23, 2026
ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

May 23, 2026
ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

May 23, 2026
ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

May 23, 2026
ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

May 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL