ಸಾಗರ: ಇಲ್ಲಿನ ಕರ್ನಾಟಕ ಸೋಶಿಯಲ್ ಮೂಮೆಂಟ್ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧನಿಗೆ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
65 ರ ಅಸುಪಾಸಿನ ವೃದ್ಧ ಮೊನ್ನೆ ಬೆಳ್ಳಂಬೆಳಗ್ಗೆ ಗಾಂಧಿನಗರದ ಕಂಬಳಿಯರ ಕೇರಿ ಬಳಿ ಕಾಣಿಸಿದ್ದಾರೆ. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೋಶಿಯಲ್ ಟೀಂನ ಇಮ್ರಾನ್ ಸಾಗರ್ ಅವರಿಗೆ ಸುದ್ಧಿ ಮುಟ್ಟಿಸಿದರು.

108 ಆಂಬುಲೆನ್ಸ್’ನಲ್ಲಿ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೆಲುಗು-ಕನ್ನಡ ಮಾತನಾಡುವ ಇವರು, ಹೆಸರು ವಿಳಾಸದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.
ಬಿಜೆಪಿ ಅಲ್ಪ ಸಂಖ್ಯಾತ ಮುಖಂಡ ಭಾಷಾ ಸಾಬ್, ಡಿಎಸ್’ಎಸ್ ನಾಗರಾಜ್, ಇಸ್ಮಾಯಿಲ್ ಈ ಸಂದರ್ಭದಲ್ಲಿ ಸಹಕರಿಸಿದರು.








Discussion about this post