No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ಸಂಪಾದಕೀಯ: ರಾಜ್ಯ ಜೆಡಿಎಸ್’ಗೆ ದತ್ತ ಸಾರಥಿಯಾಗಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 26, 2019
in Editorial
0
ಸಂಪಾದಕೀಯ: ರಾಜ್ಯ ಜೆಡಿಎಸ್’ಗೆ ದತ್ತ ಸಾರಥಿಯಾಗಲಿ

file image

Share on FacebookShare on TwitterShare on WhatsApp

ಯಾವುದೇ ಪಕ್ಷವನ್ನು ಮುನ್ನಡೆಸಲು ಉತ್ತಮ ನಡವಳಿಕೆ, ಸಂಘಟನಾಶಕ್ತಿ, ಮಾತುಗಾರಿಕೆ, ತಾರ್ಕಿಕ ಕೌಶಲ ಇತ್ಯಾದಿ ಮುಖ್ಯ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಸದ್ಯ ಪ್ರಸ್ತಾಪಿತವಾಗಿರುವ ಹೆಸರುಗಳೆಂದರೆ ಮಧು ಬಂಗಾರಪ್ಪ ಮತ್ತು ದತ್ತ

ಎರಡನ್ನೂ ಪಕ್ಷದ ಆಯಾಮದಿಂದಲೇ ಪರಿಶೀಲನೆ ಮಾಡುವುದು ಒಳಿತು. ಮಧು ಬಂಗಾರಪ್ಪ, ಒಮ್ಮೆ ಶಾಸಕರಾಗಿ ಅನುಭವವಿದೆ. ಪಕ್ಷ ಸಂಘಟನೆಯ ಬಗ್ಗೆ ತೀವ್ರತರ ಮನೋಧರ್ಮ ಕಂಡುಬರುವುದಿಲ್ಲ. ಏಕೆಂದರೆ ಅವರು ಶಾಸಕರಾಗುವ ಹೊತ್ತಿನಲ್ಲಿ ತಂದೆಯವರ ನೆರಳು ಅಧಿಕವಾಗಿತ್ತು. ಕೌಟುಂಬಿಕ ಅನುಕಂಪ ಅಗಾಧವಾಗಿತ್ತು.

ಶಾಸಕರಾಗಿದ್ದ ಅವಧಿಯಲ್ಲಿ ಜನಾನುರಾಗಿಯಾಗಿ ಶ್ರಮಿಸಿದ್ದಾರೆ. ಅದು ಸೊರಬದ ಜನತೆಗೆ ಮಾತ್ರ ಸೀಮಿತ. ಜನರ ಪ್ರೀತಿ ಗಳಿಸುವಲ್ಲಿ ಅವರಿಗೆ ಫುಲ್ ಮಾರ್ಕ್ಸ್‌ ಸಿಗುತ್ತದೆ. ಆದರೆ ಅದು ಸೊರಬದ ವ್ಯಾಪ್ತಿ ದಾಟಲು ಅಸಮರ್ಥವಾಯಿತೆನ್ನಬಹುದು.

ಬಂಗಾರಪ್ಪನವರ ಜನಪ್ರಿಯತೆ ಸಾರ್ಥಕವಾಗಿ ಒಂದು ಸಲ ಈರ್ವರು ಪುತ್ರರಿಗೂ ಫಲ ನೀಡಿದೆ. ಆದರೆ ನಂತರದ ಅವಧಿಗೆ ಸ್ವಸಾಮರ್ಥ್ಯವನ್ನು ತೋರಿ ಚುನಾವಣೆ ಎದುರಿಸುವ ಸಂಪ್ರದಾಯಕ್ಕೆ ಬದ್ಧರಾಗಿರಬೇಕು. ಅಂತಹ ಸಾಮರ್ಥ್ಯ ಮಧು ಅವರಿಗೆ ಇತ್ತು. ಆದರೆ ಮೋದಿ ಹವಾದಲ್ಲಿ ತೇಲಿ ಹೋಯಿತು.
ಹೀಗಾಗಿ ಅವರ ಜಾರಿದ ಭವಿಷ್ಯವನ್ನು ಹಿಡಿತಕ್ಕೆ ತರುವ ನಿಟ್ಟಿನಲ್ಲಿ ಮೈತ್ರಿ ರಾಜಕೀಯ ಸನ್ನಿವೇಶ ಬಳಸಿಕೊಳ್ಳಲು ಹವಣಿಸಿದ್ದುದು ಉಚಿತವೇ. ಆದರೆ ಮತ್ತೆ ಮೋದಿ ಹವಾ ಎದುರು ಲೋಕಸಭೆಯ ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಮಧು ಅವರನ್ನು ಅಗ್ನಿ ಪರೀಕ್ಷೆಗೊಳಪಡಿಸಲಾಯಿತು.

ಮತದಾರರು ಬಹಳ ಜಾಣರು. ಸ್ಥಳೀಯ ಸಂಸ್ಥೆಗಳಿಗೆ, ವಿಧಾನಸಭೆಗೆ ಹಾಗೂ ಲೋಕಸಭೆಗೆ ಯಾವ ಯಾವ ಪಕ್ಷಗಳನ್ನು ಬೆಂಬಲಿಸಬೇಕು ಎಂಬ ಪ್ರಜ್ಞಾಧಾರಕರು.

ಕಾಂಗ್ರೆಸ್’ಗೆ ಸ್ವಯಂಕೃತಾಪರಾಧದಿಂದ ಅಭ್ಯರ್ಥಿಗಳ ಕೊರತೆ, ಜೆಡಿಎಸ್’ಗೆ ಹೊಳೆಯಲ್ಲಿ ಸಿಕ್ಕ ಹುಲ್ಲುಕಡ್ಡಿಯಂತೆ ಸಿಕ್ಕರು ಮಧು. ಆದರೆ ಮತದಾರ ಬೇರೆಯ ವರಸೆ ತೋರಿಸಿದ. ಇದಕ್ಕೆ ರಾಜಕೀಯ ಪಕ್ಷಗಳು ಮುತ್ಸದ್ದಿಗಳು(?) ಹಣ, ಹೆಂಡ ಆಕರ್ಷಣೆ ಅಂತ ಮಾಮೂಲಿ ಹಣೆಪಟ್ಟಿ ಕೊಡುವುದು ರೂಢಿಯಾಗಿ ಬಿಟ್ಟಿದೆ.

ಏನೇ ಇರಲಿ ಜೆಡಿಎಸ್’ಗೆ ಅಧ್ಯಕ್ಷ ಪಟ್ಟ ನೀಡುವ ಮಾನದಂಡದಲ್ಲಿ ಮಧು ಕೊಂಚ ಮತ್ತೆ ನಿರಾಸೆ ಹುಟ್ಟಿಸುತ್ತಾರೆ ಎನ್ನಬಹುದು. ಅವರು ರಾಜ್ಯಮಟ್ಟದಲ್ಲಿ ಇನ್ನೂ ಹೆಸರು ಗಳಿಸಬೇಕಿದೆ. ನೋಡೌಟ್, ಅವರು ಮಾನವೀಯ ಸಂಬಂಧಗಳನ್ನು ಚೆನ್ನಾಗಿ ಸ್ಥಾಪಿಸುವ ಕೌಶಲಿಗ. ಆದರೆ ಸದ್ಯ ಜೆಡಿಎಸ್’ಗೆ ಹಿಂದುಳಿದ ವರ್ಗಗಳ ಅಭ್ಯರ್ಥಿ ಹೆಡ್ ಆಗಬೇಕೆಂಬ ವಾಂಛೆ ಹಿಂದೆ ಎಂದೂ ವ್ಯಕ್ತಪಟ್ಟಿರಲಿಲ್ಲ. ಸಾಮರ್ಥ್ಯವಿರುವ ವಿಶ್ವನಾಥ್ ಅವರನ್ನೇ ಮೂಲೆಗುಂಪು ಮಾಡಿದ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಅಭ್ಯರ್ಥಿಗೂ ಅದೇ ಗತಿ ಎಂಬುದು ನಿಸ್ಸಂಶಯ.

ಮಧು ಅವರಿಗೆ ರಾಜಕೀಯ ಪುನರ್ಜನ್ಮ ಕೊಡುವುದೇ ಆದರೆ ಅವರನ್ನು ತಕ್ಷಣ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಅಥವಾ ಆಯ್ಕೆ ಮಾಡುವ ಬುದ್ಧಿವಂತಿಕೆ ತೋರಿಸಿದರೆ ದೇವೇಗೌಡರ ಹಿರಿತನಕ್ಕೆ ಹೊಳಪು ಬರುತ್ತದೆ. ಆದ್ದರಿಂದ ಮಧು ಅವರು ಮುಂದೊಂದು ದಿನ ಪಟ್ಟಕ್ಕೆ ಕೂರಬಹುದು. ಈಗ ಪಕ್ವರಾಗಿಲ್ಲ.

ಮುಂದಿನ ಆಯ್ಕೆ ಯಾರು?
ಇದಕ್ಕೆ ಉತ್ತರ ಹುಡುಕುವಲ್ಲಿ ತುಸು ಬೌದ್ಧಿಕ ಕಸರತ್ತೇ ಬೇಕಿದೆ. ದತ್ತರವರು ದೀರ್ಘಕಾಲ ರಾಜಕೀಯದಲ್ಲಿ ಹಿರಿಯ ಗೌಡರ ಆಪ್ತವಲಯದಲ್ಲಿ ಬೆರೆತವರು. ಮೊದಲಿಗೇ ಯಾವುದೇ ಸ್ಥಾನಮಾನಕ್ಕೆ ಆಸೆ ಪಡದೇ ನಿಷ್ಠರಾಗಿ ತಮ್ಮ ರಾಜಕೀಯದ ಮಹತ್ವದ ವರ್ಷಗಳನ್ನು ತೇಯ್ದವರಾಗಿದ್ದಾರೆ.
ತಾನಾಗೇ ಹಿರಿಯ ಗೌಡರ ಆತ್ಮೀಯತೆಯ ಧ್ಯೋತಕವಾಗಿ ವಿಧಾನ ಪರಿಷತ್ತು ಪ್ರವೇಶಿಸಿದರು. ಸದನದಲ್ಲಿ ವಾಗ್ಮಿಗಳಾಗಿ ಜನರ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ವಕ್ತಾರರಾಗಿ ಪಕ್ಷದ ಇಮೇಜನ್ನು ಕುಂದು ಗೆಡಿಸದೇ ಕಾಯ್ದವರು. ಮೇಲಾಗಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಜ್ಞಾನವುಳ್ಳ ಮೇಧಾವಿ. ಅವರು ಎಂಎಲ್ ಸಿ ಆಗಿ ಸಿಕ್ಕ ಅವಕಾಶವನ್ನು ದುಂದುಗೆಡಿಸದೇ ಪಕ್ಷದ ಬೆಳೆವಣಿಗೆ ಮತ್ತು ವ್ಯಾಪಕ ಜನಾಭಿಪ್ರಾಯ ಒಲಿದು ಬರುವಂತೆ ಪ್ರಯತ್ನಿಸಿದವರು.

ಸರಳ ಹಾಗೂ ನೇರ ಬದುಕಿನಿಂದಾಗಿ ಪಾರದರ್ಶಕವಾದ ನಡೆಗಳ ಫಲಿತಾಂಶವೇ ಅವರನ್ನು ಕಡೂರು ಕ್ಷೇತ್ರದ ಶಾಸಕರನ್ನಾಗಿಸಿತು, ಇದೆಲ್ಲ ಇತಿಹಾಸ.
ಆದರೆ ಇತಿಹಾಸ ಮರೆತವ ಭವಿಷ್ಯ ರೂಪಿಸಿಕೊಳ್ಳಲಾರ. ಈಗ ದತ್ತ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಜಾತೀಯ ಮಸೆತಕ್ಕೆ ಸಿಕ್ಕು ವಿಫಲರಾದರು. ಆ ಸೋಲು ಅವರ ಸೇವೆಗಲ್ಲ, ಜನರ ತಪ್ಪು ಆಲೋಚನೆಗಷ್ಟೆ.

ಪ್ರತಿಯೊಬ್ಬರ ಮನೆ ಮನಕ್ಕೆ ತಲುಪುತ್ತಿದ್ದ ದತ್ತಣ್ಣ ಸೋತರು ಎಂಬ ಸಂಗತಿ ಇಡೀ ಜೆಡಿಎಸ್’ಗೆ ಅಚ್ಚರಿ. ಹೊಳಪು ಕಳೆದುಕೊಂಡ ಈಗಿನ ಅಲ್ಪಮತದ ಸಂಕೇತವಾಗಿರಬಹುದು. ಈಗ ಮತ್ತೆ ದತ್ತಣ್ಣನವರಿಗೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷಗಿರಿಯಿದೆ.

ಅವರ ಬುದ್ಧಿಮತ್ತೆಗೆ ಸವಾಲಾದ ಈ ಸ್ಥಾನವನ್ನು ಅವರು ಬಳಸಲಿಲ್ಲವೆ? ಲೋಕಸಭೆಗೆ ಕೇವಲ ಒಂದೇ ಅಭ್ಯರ್ಥಿ ಆಯ್ಕೆ. ಇದು ಪಕ್ಷದ ಒಟ್ಟು ನೀತಿಯ ಬಗ್ಗೆ ಆದ ವಿಫಲತೆ ಹೊರತು ಪ್ರಚಾರ ಸಮಿತಿಯ ಕ್ಷಮತೆಯನ್ನು ಸಂದೇಹಿಸುವಂತಿಲ್ಲ. ಏಕೆಂದರೆ ಅಭ್ಯರ್ಥಿ ಮತ್ತು ಕ್ಷೇತ್ರ ಈ ಎರಡೂ ಹೊಂದಾಣಿಕೆಯಾಗದಿರುವ ಬಗ್ಗೆ ಚುನಾವಣೋತ್ತರ ಮೈತ್ರಿ ಪಕ್ಷಗಳ ನಾಯಕರ ಕಚ್ಚಾಟಗಳನ್ನು ದೊಡ್ಡ ಕಾರಣವನ್ನಾಗಿ ನೋಡಬೇಕಾಗುತ್ತದೆ.

ಈಗ ಅನುಭವದ ಹಿನ್ನೆಲೆಯಲ್ಲಿ ದತ್ತಣ್ಣ ಪಕ್ಷ ಸಂಘಟನೆಯಲ್ಲಿ ನವೀನ ಚಟುವಟಿಕೆಯನ್ನೇ ಪಾದಯಾತ್ರೆ ಸ್ವರೂಪದಲ್ಲಿ ಕೈಗೊಂಡಿದ್ದಾರೆ. ಇದೊಂದು ಅವರ ಅವಿರತ ಸೃಜನಶೀಲ ಮನಸ್ಸಿಗೆ ಹಿಡಿದ ಕನ್ನಡಿ. ರಾಜ್ಯವ್ಯಾಪೀ ತಲಸ್ಪರ್ಶಿ, ಭಾವಸ್ಪರ್ಶಿ ಮತ್ತು ಬಹುಸ್ಪರ್ಶಿ ಆಲೋಚನೆ ಯಾವುದೇ ಪಕ್ಷದ ಸಂಘಟನಕಾರನಿಗೆ ಮಾದರಿಯಾಗುವಂತಿದೆ. ಈ ನಿಟ್ಟಿನಲ್ಲಿ ವೈಎಸ್’ವಿ ದತ್ತ ಅವರು ಪ್ರಸ್ತುತ ರಾಜ್ಯ ಜೆಡಿಎಸ್ ಸಾರಥ್ಯ ವಹಿಸಲು ಸೂಕ್ತರಾಗಿದ್ದಾರೆ. ಮಧು ಅವರು ಬಹು ಆಯಾಮದಲ್ಲಿ ತಮ್ಮನ್ನೇ ತಾವು ಬೆಳೆಸಿಕೊಳ್ಳಬೇಕಿದೆ. ದತ್ತ ಅವರು ಅಂತಹ ಆಯಾಮಗಳಲ್ಲಿ, ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.

ದತ್ತಣ್ಣ ಅವರು ಕಡೂರು ಶಾಸಕರಾಗಿದ್ದಾಗ ಹರಿಜನ ಕೇರಿಯಲ್ಲಿ ಸ್ಚಚ್ಛತಾ ಆಂದೋಲನದ ಸಂಕೇತವಾಗಿ ಶೌಚಾಲಯ ಸ್ವಚ್ಛತೆಯನ್ನ ಕೈಗೊಂಡಿದ್ದಿದು ಸುದ್ದಿಯಾಗಿತ್ತು. ಅಂದರೆ ಶಾಸಕ ಸಾರ್ವಜನಿಕ ಸ್ವತ್ತಾಗಿ ಕಾರ್ಯತತ್ಪರನಾಗಬೇಕು ಎಂಬುದನ್ನ ತಮ್ಮ ನಡವಳಿಕೆಯಲ್ಲೇ ತೋರಿಸಿದ್ದರು.ಅವರ ಬಗ್ಗೆ ಜನಜನಿತವಾದ ಸಂಗತಿಯೆಂದರೆ. ಕ್ಷೇತ್ರದ ಯಾರೇ ಆಗಲಿ ಮೊಬೈಲ್ ಮೂಲಕ ಸಂಪರ್ಕಿಸಿದರೆ ಅದು ಮಿಸ್ಡ್ ಕಾಲ್ ಆದಮೇಲೆ ತಾವೇ ಪ್ರತಿಯಾಗಿ ಉತ್ತರಿಸುತ್ತಿದ್ದರು. ಯಾವ ಶಾಸಕರು ಈ ರೀತಿ ಸ್ಪಂದಿಸುತ್ತಿದ್ದಾರೆ ನಾವು ಭೂತಗನ್ನಡಿ ಹಿಡಿದು ನೋಡಬೇಕು.

ಹೀಗಾಗಿ ದತ್ತ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಎಂಬುದನ್ನು ಜೆಡಿಎಸ್ ಪಕ್ಷ ಮನಗಾಣುವಂತಾಗಲಿ ಎಂದು ಹಾರೈಸೋಣ.

ಸಂಪಾದಕೀಯ: ಡಾ.ಸುಧೀಂದ್ರ

Tags: EditorialH D DevegowdaJDSKannada ArticleKarnataka politicsMadhu BangarappaState PresidentY S V Dattaಜಾತ್ಯತೀತ ಜನತಾದಳಜೆಡಿಎಸ್ಮಧು ಬಂಗಾರಪ್ಪರಾಜಕೀಯವೈಎಸ್’ವಿ ದತ್ತಸಂಪಾದಕೀಯ
Share196Tweet123Send
Previous Post

ಬೆಂಗಳೂರಿಗೆ ಶರಾವತಿ ನೀರು: ಚಳವಳಿಯ ಸ್ವರೂಪದ ಬಗ್ಗೆ ಚರ್ಚೆ

Next Post

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

ಭಜನಾ ಸಾಮ್ರಾಟ್ ವೆಂಕಟರಾಮಯ್ಯ ಕೊಡುಗೆ ಅವಿಸ್ಮರಣಿಯ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ

ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ

April 22, 2026
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

April 22, 2026
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ: ಶಿಕ್ಷಣ ಸಚಿವ ಮಧುಬಂಗಾರಪ್ಪ

April 22, 2026
ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

ಮೇ 15ರೊಳಗೆ ಶಿವಮೊಗ್ಗದ ಈ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ | ಕೆ.ಈ. ಕಾಂತೇಶ್ ಎಚ್ಚರಿಕೆ

April 22, 2026
ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

ಮುಸ್ಲಿಂರನ್ನು ಓಲೈಸುವ ಹಠ ಕಾಂಗ್ರೆಸ್ ಪಕ್ಷ ಇನ್ನೂ ಬಿಟ್ಟಿಲ್ಲ : ಕೆ.ಎಸ್. ಈಶ್ವರಪ್ಪ ದೂರು

April 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL