Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಅಶೇಷ ಗುಣಗಳ ಪವಿತ್ರ ಜೈನ ಧರ್ಮದ ಸಾಮ್ರಾಟ ವರ್ಧಮಾನ ಮಹಾವೀರರು

ಮಹಾವೀರರ ಇತಿಹಾಸ ಸಂಕ್ಷಿಪ್ತಗೊಳಿಸಿ ಒಂದಿಡೀ ಧರ್ಮವನ್ನು ತೆರೆ ಮರೆಗೆ ಸರಿಸುವ ಪ್ರಯತ್ನ

April 4, 2023
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  |

ಅದು ಗಂಡಕಿ ನದಿಯ ತೀರ. ತೇಲಿ ಬರುವ ತಣ್ಣನೆಯ ಗಾಳಿ ಅಂದು ಸಂಭ್ರಮ ಹೊತ್ತು ತಂದಿತ್ತು. ವೈಶಾಲಿಯ ಒಡೆಯನ ಮನದನ್ನೆ ಹದಿನಾರು ಸುಂದರ ಸ್ವಪ್ನಗಳ ಕಂಡಿದ್ದಳು. ಅರಮನೆಯ ಪಂಡಿತರ ಭಿನ್ನವಿಸಲಾಗಿ ಮಾತೆಯ ಒಡಲಿನಲ್ಲಿ ಜಗವಾಳೋ ಅಹಿಂಸೆಯ ಪ್ರಭು ಜನಿಸಲಿದ್ದಾರೆ, ಆ ಕನಸುಗಳೆಲ್ಲವೂ ಆ ಪುಣ್ಯ ಕ್ಷಣದ ಸೂಚನೆ ಎಂದರು. ಮೊದಲೇ ಮಹಾರಾಜ, ಈಗ ಇಂತಹ ಸುದ್ದಿ, ಕೇಳಬೇಕೇ? ಇಡೀ ದೇಶವೇ ಬಣ್ಣ ಕಟ್ಟಿ ಆಡಂಬರ ಹೊತ್ತು ನಿಂತಿತು. ಎಲ್ಲೆಡೆ ಸಂಭ್ರಮ. ಅದು ಹೇಗೆ ನವಮಾಸಗಳನ್ನು ಜೀಕಿದರೋ ತಿಳಿಯದು.

ಅದಾಗಲೇ ಹಿಂದಿನ ತೀರ್ಥಂಕರರಾದ ಪಾರ್ಶ್ವನಾಥರು ಜನಿಸಿ ಸರಿ ಸುಮಾರು ಮೂರು ಶತಮಾನಗಳು ಕಳೆದಿದ್ದವು. ವೈಶಾಲಿಯ ರಾಜದಂಪತಿಗಳೀರ್ವರೂ ಪಾರ್ಶ್ವನಾಥ ತೀರ್ಥಂಕರರ ಪರಮ ಭಕ್ತರಾಗಿದ್ದರು. ಅಂತಹ ಕುಟುಂಬದಲ್ಲಿ ಧರ್ಮದ ಮುಂದಿನ ಪ್ರತಿನಿಧಿ ಜನಿಸುತ್ತಿದ್ದರು. ಅಂದು ಚೈತ್ರ ಶುಕ್ಲ ತ್ರಯೋದಶಿ. ಈಗಿನ ಬಿಹಾರದ ಕುಂದಲಪುರದಲ್ಲಿ ಮಹಾರಾಜ ಸಿದ್ದಾರ್ಥ ಮತ್ತು ಮಹಾರಾಣಿ ತ್ರಿಶಲಾದೇವಿಯರ ಸುಪುತ್ರನಾಗಿ ವರ್ಧಮಾನರ ಜನುಮವಾಯಿತು.
ಈ ಶಿಶು ಗರ್ಭಲಂಕಾರ ಮಾಡಿದ ಕ್ಷಣದಿಂದ ದೇಶವು ಅನನ್ಯ ಅಭಿವೃದ್ಧಿ ಹೊಂದುತ್ತಿದೆ ಆದ್ದರಿಂದ ರಾಜಕುವರನಿಗೆ ವರ್ಧಮಾನ ಎಂದು ನಾಮಕರಣ ಮಾಡಿ ಎಂದು ಮಹಾರಾಜರು ಆನಂದದಿಂದ ಸೂಚಿಸಿದರು. ಬಾಲ್ಯವೂ ಸಹ ಅನ್ಯರಂತೆ ಇರದೇ ಧೈರ್ಯ, ನಿಸ್ವಾರ್ಥ ಎದ್ದು ಕಾಣುತ್ತಿದ್ದವು. ಜ್ಞಾನದ ಪ್ರತಿರೂಪವಾಗಿದ್ದ ಬಾಲಕನಿಗೆ ಸ್ವಯಂ ಇಂದ್ರನೇ ಬಂದು ಆಚಾರ್ಯರಾದರು. ವರ್ಷಗಳು ಉರುಳಿ ವರ್ಧಮಾನರು ಯೌವ್ವನದ ಹಂತ ತಲುಪಿದಾಗ ರಾಜಕುಲದಲ್ಲಿ ಸಂತಸವೇನೋ ಊರ್ಜಿಸಿತು. ಆದರೆ ತರುಣನೊಳಗೆ ವೈಚಾರಿಕತೆಯ ಹಸಿವು ಮುಗಿಲು ಮುಟ್ಟಿತ್ತು. ಭೌತಿಕ ಜಗತ್ತನು ಮೀರಿ ಎಲ್ಲಾ ನೋವು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಿ ಹೋಗುವ ಆಸಕ್ತಿ ತನ್ಮೂಲಕ ಹೆಚ್ಚಿತ್ತು. ಸ್ವರ್ಣ ಶರೀರಿಯ ಮನದನ್ನೆಯಾಗಲು ಕನ್ಯಾಮಣಿಗಳ ಪ್ರಸ್ತಾಪ ಬರತೊಡಗಿದವು. ಅಂತೆಯೇ ವರ್ಧಮಾನರು ಯಶೋಧೆಯನ್ನು ವಿವಾಹವಾದರು. ನಂತರದಲ್ಲಿ ಪುತ್ರಿ ಪ್ರಿಯದರ್ಶಿನಿಯ ಜನನವಾಯಿತು. ಸುಂದರ ರಾಜಸಂಸಾರ, ರಾಜ್ಯ, ಪ್ರಜೆಗಳು ಇವೆಲ್ಲವನ್ನೂ ಮೀರಿ ಅಲೌಕಿಕತೆಯ ಕಡೆಗೆ ಸದಾಕಾಲ ಯುವರಾಜನ ಗಮನ.

ಕೊನೆಗೂ ಅಣ್ಣ ನಂದಿವರ್ಧನ ಅಣತಿ ಪಡೆದು ಮೋಕ್ಷ ಅರಸಿ ಹೊರಟರು. ಅಪರಿಚಿತ ಸಾಮಾನ್ಯನಿಗೆ ಏನೆಲ್ಲಾ ಕಷ್ಟಗಳು ಎದುರಾಗುತ್ತಾವೋ ಅದರ ನೂರು ಪಟ್ಟು ಹಿಂಸೆ ನೋವುಗಳನ್ನು ಎದುರಿಸಿದರು. ಕಾಲಡಿಯ ನೆಲಕ್ಕೆ ಪಾದ ಸೋಕಿಸದ ರಾಜಪುತ್ರ ಬರಿಗಾಲಿನಲ್ಲಿ ದೇಶವನ್ನು ಸುತ್ತಿದರು. ಜನರು ಇವರನ್ನು ಮಾಟಗಾರನಂತೆ, ಕಳ್ಳನಂತೆ, ಗುಪ್ತಚರನಂತೆ ಅಷ್ಟೆ ಏಕೆ ಮರುಳನಂತೆ ನೋಡಿ ನಾನಾ ತರಹದ ಶಿಕ್ಷೆ ನೀಡಿದರು. ಅನ್ನ, ನೀರು, ನಿದ್ರೆ, ಬಟ್ಟೆಗಳ ತೊರೆದ ಜಿನಾಸಕ್ತನಿಗೆ ಯಾವ ಗೋಜು? ಅದೆಲ್ಲಾ ತಾಕಲೂ ಇಲ್ಲ. ಹೀಗೆ ಹನ್ನೆರಡು ವರ್ಷಗಳು ಬೇಕಾಯಿತು. ಬಿಹಾರದ ಜೃಂಬಿಕದಲ್ಲಿ ಕೇವಲಜ್ಞಾನ ಪ್ರಾಪ್ತವಾಯಿತು. ವರ್ಧಮಾನರು ಮಹಾವೀರರಾದರು. ಇಂದಿನ ಸ್ಥಿತಿ ಹೇಗಿದೆ ಎಂದರೆ ಮಹಾವೀರರ ಬೋಧನೆಗಳು ಯಾರದೋ ಹೇಳಿಕೆಗಳಾಗಿವೆ, ಅವರ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ, ಒಂದಿಡೀ ಧರ್ಮದ ಐತಿಹಾಸಿಕ ಮಹತ್ವವನ್ನು ತೆರೆ ಮರೆಗೆ ಸರಿಸಲಾಗಿದೆ. ಭಗವಾನರ ಸಂಪೂರ್ಣ ಚರಿತೆ, ಬೋಧನೆ ಮತ್ತು ಪರಿಣಾಮಗಳನ್ನು ಸಧ್ಯದಲ್ಲೇ ತಿಳಿಸುವ ಪ್ರಯತ್ನ ನಡೆಯಲಿದೆ. ಮಹಾವೀರ ಜಯಂತಿಯ ಶುಭಾಶಯಗಳು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Gandaki riverJainKannada News WebsiteLatest News KannadaMahavira JayantiSachin ParshwanathSpecial ArticleVardhamana Mahaviraಕೇವಲಜ್ಞಾನಗಂಡಕಿ ನದಿಜಿನಾಸಕ್ತಮಹಾವೀರ ಜಯಂತಿವರ್ಧಮಾನ ಮಹಾವೀರಸಿದ್ದಾರ್ಥ
Previous Post

ಜೆಡಿಎಸ್‌ಗೆ ರಾಜ್ಯದ ಜನರ ಬಹುಮತ ಖಚಿತ: ಶಾಸಕ ಬಂಡೆಪ್ಪ ಖಾಶೆಂಪುರ್ ವಿಶ್ವಾಸ

Next Post

ನಮ್ಮ ಸ್ಥಾನವನ್ನು ನಿಮಗೆ ನೀಡುತ್ತೇವೆ! ರಾಹುಲ್ ಗಾಂಧಿಗೆ ಆಹ್ವಾನ ನೀಡಿರುವುದು ಯಾರು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಮ್ಮ ಸ್ಥಾನವನ್ನು ನಿಮಗೆ ನೀಡುತ್ತೇವೆ! ರಾಹುಲ್ ಗಾಂಧಿಗೆ ಆಹ್ವಾನ ನೀಡಿರುವುದು ಯಾರು ಗೊತ್ತಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!