ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾದ ಕಾವಲಿಯಂತಾಗಿದ್ದ ಉಕ್ಕಿನ ನಗರಿ ಭದ್ರಾವತಿಯಲ್ಲಿ #Bhadravathi ಇಂದು ಸಂಜೆ ವರ್ಷದ ಮೊದಲ ಮಳೆಯ #Rain ಸಿಂಚನವಾಗಿದ್ದು, ಜನರ ಮೊಗದಲ್ಲಿ ನಗು ಕಾಣಿಸಿಕೊಂಡಿದೆ.
ಸಂಜೆ ವೇಳೆಗೆ ಭದ್ರಾವತಿ ನಗರ ಹಾಗೂ ಹೊರವಲಯದಲ್ಲಿ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ಹರಿಯುವಷ್ಟು ಮಟ್ಟಿಗೆ ವರುಣ ಕೃಪೆ ತೋರಿದ್ದ.
ಭೂಮಿ ಎಷ್ಟು ಕಾದಿದೆ ಎಂದರೆ ಮಳೆ ಸುರಿದ ಕೆಲವೇ ಕ್ಷಣಗಳಲ್ಲಿ ಒಣಗಿಹೋಗಿತ್ತು. ಇಷ್ಟು ಅಲ್ಪ ಪ್ರಮಾಣದ ಮಳೆ ಬಂದ ಪರಿಣಾಮ ಸೆಖೆಯು ಹೆಚ್ಚಾಗುತ್ತದೆ ಎಂಬ ಆತಂಕವೂ ಸಹ ಜನರಲ್ಲಿ ಮೂಡಿದೆ.
Also read: ಜಪಾನ್: ತೈವಾನ್ನಲ್ಲಿ ಪ್ರಬಲ ಭೂಕಂಪ | ನಾಲ್ವರು ಸಾವು
ಬಿಸಿಲಿನ ಬೇಗೆಯಿಂದ ಬೆಂದಿರುವ ಜನರು ಅಲ್ಪವಾದರೂ ಸಹ ಸುರಿದ ಮಳೆಯಲ್ಲಿ ನೆನೆದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದುದು ಕಂಡು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post