ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ತಪ್ಪು ಗುಂಪಿನ ರಕ್ತವನ್ನು ನೀಡಿದ ಪರಿಣಾಮ ಬಾಣಂತಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶಾರದಾ ದೊಡ್ಡಮನಿ(31) ಮಹಿಳೆಯೊಬ್ಬರು ಹೆರಿಗೆಗಾಗಿ ದಾಖಲಾಗಿದ್ದರು. ಹೆರಿಗೆ ವೇಳೆ ಮಹಿಳೆಗೆ ರಕ್ತಸ್ರಾವವಾಗಿದ್ದು, #Bleeding ಆಕೆಗೆ ರಕ್ತ ನೀಡುವ ಅವಶ್ಯಕತೆಯಿತ್ತು. ಈ ವೇಳೆ ಮಹಿಳೆಯದ್ದು ಎ ಪಾಸಿಟಿವ್ ಗುಂಪಿನ ರಕ್ತವಾಗಿದೆ. ಆದರೆ, ಇದಕ್ಕೆ ಬದಲಾಗಿ ಆಕೆಗೆ ಬಿ ಪಾಸಿಟಿವ್ ಗುಂಪಿನ ರಕ್ತವನ್ನು ನೀಡಲಾಗಿದೆ. ಇದರ ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದಾರೆ.
ಇದೇ ವೇಳೆ ಮಹಿಳೆ ಜಿಲ್ಲಾಸ್ಪತ್ರೆಗೆ ದಾಖಲಾಗುವ ಮುನ್ನವೇ ಆಕೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಮೂವರ ಅಮಾನತು
ಪ್ರಕರಣದಲ್ಲಿ ಆಚಾತುರ್ಯ ಎಸಗಿ ಮಹಿಳೆಯ ಸಾವಿಗೆ ಕಾರಣವಾಗಿದ್ದಾರೆ ಎಂಬ ಆರೋಪದಲ್ಲಿ ಮೂವರು ಸ್ಪಾರ್ಟ್ ನರ್ಸ್ ಹಾಗೂ ಬ್ಲಡ್ ಬ್ಯಾಂಕ್ ತಂತ್ರಜ್ಞರನ್ನು ಅಮಾನತು ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ಶಾರದ ಅವರು ಬಬಲೇಶ್ವರ ತಾಲೂಕಿನ ದಡಮಟ್ಟಿ ಗ್ರಾಮದವರಾಗಿದ್ದು, ಫೆ.23 ರಂದು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ವೈದ್ಯರು ತಪ್ಪಾದ ರಕ್ತದ ಗುಂಪಿನ ರಕ್ತ ವರ್ಗಾವಣೆಯನ್ನು ಮನಗಂಡ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಾರ್ಚ್ 18 ರಂದು ಮೃತರಾದರು.
ಖಾಸಗಿ ಆಸ್ಪತ್ರೆಗೆ ದಾಖಲಾದ 15 ದಿನಗಳಲ್ಲಿ ಮಹಿಳೆ ಚೇತರಿಸಿಕೊಂಡಿದ್ದಾಳೆ. ಆದರೆ, ಶ್ವಾಸಕೋಶದ ಸೋಂಕು, ಕಡಿಮೆ ರಕ್ತದೊತ್ತಡ, ದೀರ್ಘಕಾಲದ ಚರ್ಮ ರೋಗ, ನ್ಯುಮೋನಿಯಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದರಿಂದ ಆರೋಗ್ಯ ಹದಗೆಟ್ಟಿತು.
ತಪ್ಪು ರಕ್ತದ ಗುಂಪು ಮಾತ್ರ ಆಕೆಯ ಸಾವಿಗೆ ಕಾರಣವಲ್ಲ ಎಂದು ಡಾ. ಶಿವಾನಂದ್ ಮಾಸ್ತಿಹೊಳಿ ಪ್ರತಿಪಾದಿಸಿದರು. ಮೃತ ಮಹಿಳೆಯ ಕುಟುಂಬಸ್ಥರು ಯಾವುದೇ ಅಧಿಕಾರಿಗಳು ಅಥವಾ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post