ಕಲ್ಪ ಮೀಡಿಯಾ ಹೌಸ್ | ಗಾಂಧಿನಗರ |
ಭಾರತದಂತಹ ದೇಶದ ಪ್ರಧಾನಿಯಾಗಿದ್ದರೇನಂತೆ ತಂದೆ-ತಾಯಿಗೆ ನೀಡುವ ಗೌರವ, ನಿರ್ವಹಿಸಬೇಕಾದ ಕರ್ತವ್ಯದಲ್ಲಿ ಯಾವುದೇ ಚ್ಯುತಿ ಬರಬಾರದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಇಂದು ವಿಶ್ವಕ್ಕೇ ಸಾರಿ ಹೇಳಿದ್ದಾರೆ.
ಹೌದು… ತಮ್ಮ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಮಗನಾಗಿ ಕರ್ತವ್ಯ ನಿರ್ವಹಿಸಿದ ಪ್ರಧಾನಿ ಮೋದಿ ಇಂದು ತಮ್ಮ ನಡೆಯಿಂದ ಮೂರು ಪಾಠಗಳಲ್ಲಿ ಜಗತ್ತಿಗೆ ಹೇಳಿದ್ದಾರೆ.
ಘಟನೆ-1(ಕರ್ಮ ಸಿದ್ದಾಂತ):
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಆರಂಭದಿಂದಲೂ, ಮೊನ್ನೆ ಮೊನ್ನೆ ತಮ್ಮ ತಾಯಿಯವರನ್ನು ಕೊನೆಯ ಬಾರಿ ಭೇಟಿಯಾದಾಗಲೂ ಮಗನಿಗೆ ಆ ಮಹಾತಾಯಿ ಬೋಧನೆ ಮಾಡಿದ್ದು ಕರ್ಮ ಸಿದ್ದಾಂತ.
ಹೌದು… ಎಲ್ಲಕ್ಕಿಂತಲೂ ವಹಿಸಿಕೊಂಡ ಕರ್ತವ್ಯವೇ ಮುಖ್ಯವಾದುದು. ಬಾಧ್ಯತೆ ನಿರ್ವಹಿಸುವುದು ಎಷ್ಟು ಮುಖ್ಯವೋ, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಜಾಗ್ರತೆ ವಹಿಸುವುದೂ ಸಹ ಅಷ್ಟೇ ಮುಖ್ಯ ಎಂದು ಹೀರಾಬೆನ್ ಅವರು ಮೋದಿಯವರಿಗೆ ಹೇಳಿಕೊಟ್ಟಿದ್ದರಂತೆ.
ಇAದು ಅದನ್ನು ಅಕ್ಷರಶಃ ಮೋದಿ ನಿರ್ವಹಿಸಿದ್ದಾರೆ. ಹೌದು… ತನ್ನ ತಾಯಿಯ ನಿಧನದ ಸುದ್ಧಿ 6 ಗಂಟೆಗೆ ತಿಳಿದ ನಂತರ 7.30ರ ವೇಳೆಗೆ ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿಯವರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿ, ತಮ್ಮ ಅಂತಿಮ ಕರ್ತವ್ಯ ನಿರ್ವಹಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡ ದುಃಖ ಮನದಲ್ಲಿ ಮಡುಗಟ್ಟಿದ್ದರೂ ಸಹ ಆಕೆಯ ಅಂತ್ಯಸAಸ್ಕಾರ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಪ್ರಧಾನಿಯವರು.
ಸೆಕ್ಟರ್ 30ರ ರುದ್ರಭೂಮಿಯಲ್ಲಿ ತಮ್ಮ ತಾಯಿಯವರು ಅಂತ್ಯಸಂಸ್ಕಾರ ನಡೆಸಿದ ಪ್ರಧಾನಿಯವರು, ಕೆಲವೇ ನಿಮಿಷಗಳ ಬಿಡುವು ಪಡೆದು, ಅಲ್ಲಿಂದ ನೇರವಾಗಿ ಗುಜರಾತ್ ರಾಜಭವನಕ್ಕೆ ತೆರಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೋದಿಯವರು ಪಾಲ್ಗೊಳ್ಳಬೇಕಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕವೇ ಭಾಗವಹಿಸಿ ತಮ್ಮ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ತಾಯಿ ಅಗಲಿ ಕೆಲವೇ ಗಂಟೆಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಮೋದಿಯವರ ಧೀಮಂತ ವ್ಯಕ್ತಿತ್ವ ಇಡಿಯ ವಿಶ್ವಕ್ಕೇ ಮಾದರಿಯಾಗಿದೆ. ಕರ್ಮಯೋಗದ ಪಾಠ ಮಾಡಿದ್ದ ತಾಯಿಯ ಮಾತಿನಂತೆ ಅಕ್ಷರಶಃ ನಡೆದುಕೊಳ್ಳುತ್ತಿರುವ ಮೋದಿಯವರ ನಡೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ.
ಘಟನೆ-2(ತಂದೆ-ತಾಯಿಗೆ ಗೌರವ ನೀಡುವ ಕರ್ತವ್ಯ):
ತಮ್ಮ ತಾಯಿಯವರು ಇಹಲೋಕ ತ್ಯಜಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಗಾಂಧಿ ನಗರಕ್ಕೆ ಆಗಮಿಸಿದ ಮೋದಿಯವರು ಮಗನಾಗಿ ನಿರ್ವಹಿಸಬೇಕಾದ ಕರ್ತವ್ಯವನ್ನು ಚಾಚೂ ತಪ್ಪದೇ ನಡೆಸಿದ್ದಾರೆ.
ಗಾಂಧಿ ನಗರದ ನಿವಾಸಕ್ಕೆ ಆಗಮಿಸಿದ ಪ್ರಧಾನಿಯವರು ಅಂತಿಮ ನಮನ ಸಲ್ಲಿಸಿದ ನಂತರ, ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಡುವ ವೇಳೆ ಶೂ ಅಥವಾ ಚಪ್ಪಲಿ ಧರಿಸದೇ ಬರಿ ಕಾಲಿನಲ್ಲಿ ನಡೆದೇ ಸಾಗಿದರು.
ಬಹಳಷ್ಟು ಮಂದಿಗೆ ಸಣ್ಣ ಮಟ್ಟದ ಹೆಸರು ಗಳಿಸಿದಾಕ್ಷಣ ಎಲ್ಲ ಸಂಬAಧ, ಮಾನವೀಯತೆ ಹಾಗೂ ಸಿದ್ದಾಂತಗಳನ್ನು ಗಾಳಿಗೆ ತೂರಿ ಅಹಂಕಾರದಿಂದ ಮೆರೆಯುತ್ತಾರೆ. ಆದರೆ, ಭಾರತದಂತಹ ಬೃಹತ್ ದೇಶಕ್ಕೆ ಎರಡು ಬಾರಿ ಪ್ರಧಾನಿಯಾಗಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ, ತಾಯಿಯ ಮುಂದೆ ಕೇವಲ ಮಗನಾಗಿ ನಿರ್ವಹಿಸಬೇಕಾದ ಕರ್ತವ್ಯವನ್ನು ಮಾಡಿದ್ದಾರೆ.
ಮನೆಯಿಂದ ಅಂತಿಮ ಯಾತ್ರೆ ಆರಂಭವಾದಾಗಿನಿಂದ ಎಲ್ಲ ವಿಧಿವಿಧಾನ ಮುಕ್ತಾಯವಾಗುವವರೆಗೂ ಬರಿಗಾಲಿನಲ್ಲೇ ನಡೆದುಕೊಂಡು ಹೋಗುವ ತಾಯಿ ದೇವರಿಗೆ ಸಾಕ್ಷಾತ್ ದೇವರಿಗೆ ನೀಡುವ ಗೌರವವನ್ನೇ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಘಟನೆ-3(ಸರಳ ವಿಧಿವಿಧಾನ):
ಸಣ್ಣಪುಟ್ಟ ಕಾರ್ಯಕ್ರಮಗಳು ನಡೆದರೇ ಅಥವಾ ಪುಡಾರಿಗಳೇನಾದರೂ ಸತ್ತರೆ ದೊಡ್ಡ ಮಟ್ಟದ ಯಾತ್ರೆ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ.
ಆದರೆ, ನಮ್ಮ ದೇಶದ ಪ್ರಧಾನಿಯವರ ತಾಯಿ ಇಂದು ಮೃತರಾಗಿದ್ದಾರೆ. ಆದರೆ, ಅವರ ಅಂತಿಮ ಯಾತ್ರೆ ಹಾಗೂ ಅಂತ್ಯಸAಸ್ಕಾರ ಎಷ್ಟು ಸರಳವಾಗಿ ನಡೆದಿದೆ ಎಂದರೆ ಇದು ಮಾತ್ರ ಇಡಿಯ ವಿಶ್ವಕ್ಕೇ ಮಾದರಿ.
ಈ ಅಂತಿಮ ಯಾತ್ರೆಯಿಂದ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೇವಲ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಾರ್ವಜನಿಕರ ಅಂತಿಮ ದರ್ಶನಕ್ಕೂ ಸಹ ಅವಕಾಶ ಕಲ್ಪಿಸಿರಲಿಲ್ಲ.
ಅಂತಿಮ ಯಾತ್ರೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು. ಪ್ರಧಾನಿಯವರು ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ ಯಾತ್ರೆ ಸಾಗುವ ಮಾರ್ಗವನ್ನು ಆ ವೇಳೆಗೆ ಮಾತ್ರ ರಸ್ತೆ ಬಂದ್ ಮಾಡಲಾಗಿತ್ತು. ಯಾತ್ರೆ ಸಾಗಿದ ನಂತರ ಯಥಾ ಪ್ರಕಾರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ರುದ್ರಭೂಮಿಯಲ್ಲೂ ಸಹ ಎಲ್ಲವೂ ಸಿದ್ಧವಾಗಿತ್ತು. ಅಲ್ಲಿಗೆ ಆಗಮಿಸಿದ ನಂತರ ಅತ್ಯಂತ ಸರಳವಾಗಿ, ಶಾಸ್ತೊçÃಕ್ತವಾಗಿ ವಿಧಿವಿಧಾನಗಳನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಿದರು ಪ್ರಧಾನಿಯವರು.
ಈ ಮೂರು ಘಟನೆಗಳ ಮೂಲಕ ಪ್ರಧಾನಿ ಮೋದಿಯವರು ತಮ್ಮ ತಾಯಿ ಹೇಳಿಕೊಟ್ಟ ನೈತಿಕ ಪಾಠಗಳನ್ನು ಅತ್ಯಂತ ಚಾಚೂ ತಪ್ಪದೇ ಪಾಲಿಸುವ ಮೂಲಕ ಅಗಲಿದ ದಿವ್ಯಾತ್ಮಕ್ಕೆ ಗೌರವ ಪೂರ್ವಕ ವಿದಾಯ ನೀಡಿದ್ದಾರೆ.
ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ
ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ
ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ
ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ
ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ
ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ
ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ
ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ
ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ದೇಶದ ಪ್ರಧಾನಿಯವರ ಮಾತೃಶ್ರೀ ಅಂತ್ಯಕ್ರಿಯೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post