No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ನಾಡಿಶಾಸ್ತ್ರ ವಿಶಿಷ್ಟ ಜ್ಞಾನ: ರಾಘವೇಶ್ವರ ಶ್ರೀ

kalpa News by kalpa News
September 17, 2024
in ಉತ್ತರ ಕನ್ನಡ
0
ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಕೇವಲ ನಮ್ಮ ಶ್ವಾಸವನ್ನು ತಿಳಿದುಕೊಂಡು ಇಡೀ ನಮ್ಮ ಜೀವನದ ಭವಿಷ್ಯ ಹೇಳುವ ಅಪೂರ್ವ ಕೌಶಲ ನಮ್ಮದಾಗಿತ್ತು. ಆದರೆ ಪೂರ್ವಜರು ನೀಡಿದ ಇಂಥ ಮಹತ್ವದ ಶಾಸ್ತ್ರಗಳನ್ನು ನಾವು ಮರೆತಿರುವುದು ದುರದೃಷ್ಟಕರ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಸೋಮವಾರ ಕಾಲ ಸರಣಿಯ ಪ್ರವಚನ ಅನುಗ್ರಹಿಸಿದರು.
ಜೀವನಕ್ಕೆ ಶ್ವಾಸ ಎಷ್ಟು ಮುಖ್ಯವೋ ಜೌತಿಷಕ್ಕೂ ಅಷ್ಟೇ ಮುಖ್ಯ. ಆದರೆ ಇಂದು ಜೌತಿಷದಲ್ಲಿ ಶ್ವಾಸದ ಚಿಂತನೆ ಆಗುವುದಿಲ್ಲ. ಶ್ವಾಸವಿಜ್ಞಾನ ಬೆಳೆಯಬೇಕು. ಇದರ ಪ್ರಯೋಗ ಮಾಡುತ್ತಾ ಹೋದರೆ ನಾವೇ ದಿಕ್ಸೂಚಿಗಳಾಗಬಹುದು ಎಂದರು.

ಪ್ರಾಣ ಅಪಾನಗಳು ನಮ್ಮ ಇಡೀ ಜೀವನವನ್ನು ನಡೆಸುವ, ನಿಯಂತ್ರಿಸುವ ಶಕ್ತಿಗಳು. ಪ್ರಾಣವನ್ನು ಧೀರ್ಘ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅಪಾನವನ್ನು ವೃದ್ಧಿಸುವುರಿಂದ ಸ್ಥೂಲವಾಗುತ್ತಾ ಹೋಗುತ್ತಾರೆ. ನಮ್ಮ ಪ್ರಾಣಾಪಾನದ ಮೂಲಕ ನಮ್ಮ ಭವಿಷ್ಯವನ್ನೂ ತಿಳಿದುಕೊಳ್ಳಬಹುದು ಎಂದರು.

ಭಾನುವಾರ ಶ್ವಾಸಾನುಕೂಲವಾಗದಿದ್ದರೆ ದೇಹದಲ್ಲಿ ವೇದನೆ, ಸೋಮವಾರ ಕಲಹ, ಮಂಗಳವಾರ ಮರಣ, ಬುಧವಾರ ದೂರಪ್ರಯಾಣ, ಗುರುವಾರ ಶ್ವಾಸಾನುಕೂ ಇಲ್ಲದಿದ್ದರೆ ರಾಜ್ಯಕ್ಕೆ ಆಪತ್ತು ಬರಬಹುದು. ಶುಕ್ರವಾರ ಕಾರ್ಯಹಾನಿ, ಶನಿವಾರ ಪರನಾಶ, ಕೃಷಿನಾಶ, ಭೂ ವಿವಾದಕ್ಕೆ ಕಾರಣವಾಗುತ್ತದೆ ಎಂದರು.
ಎಂಟು ಭಾನುವಾರ ಶ್ವಾಸ ಪ್ರತಿಕೂಲವಾದರೆ ಗುರುವಿಗೆ ಜೀವಕ್ಕೆ ಅಪಾಯ ಅಥವಾ ತನಗೆ ದೊಡ್ಡ ವ್ಯಾಧಿ ಬರುವ ಸೂಚನೆ. ಎಂಟು ಸೋಮವಾರ ಹೀಗಾದರೆ ಮಕ್ಕಳಿಗೆ ಆಪತ್ತು, ಮಂಗಳವಾರ ಬಂಧನಯೋಗ, ಬುಧವಾರದ ಶ್ವಾಸ ಪ್ರತಿಕೂಲ ಬಂದರೆ ಸಾವು ಎಂಬ ಅರ್ಥ, ಗುರುವಾರ ಗುರುವಿನ ನಿಶ್ಚಯ ಮೃತ್ಯು, ಶುಕ್ರವಾರ ಧನಕ್ಷಯ, ಶನಿವಾರ ಗೃಹಣಿ ಅಥವಾ ಗೃಹನಾಶ ಎಂದು ವಿಶ್ಲೇಷಿಸಿದರು.

ಮಹತ್ವದ ವಿಷಯಕ್ಕೆ ಹೊರಡುವಾಗ ನಾಡಿ ಎಡಕ್ಕಿರಬೇಕು. ಬಲಕ್ಕಿದ್ದರೆ ಅಶುಭ. ಪ್ರವೇಶ ಮಾಡುವಾಗ ನಾಡಿ ಬಲಕ್ಕಿದ್ದರೆ ಶುಭ. ಯೋಗಸಾಧನೆಗೆ ಮಧ್ಯನಾಡಿ ಪ್ರಶಸ್ತ. ಆತ್ಮಸಾಧನೆ, ಮುಕ್ತಿಗೆ ಪ್ರಯತ್ನ ಮಾಡಲು ಇದು ಅಗತ್ಯ ಎಂದರು.

ಶ್ವಾಸದಲ್ಲಿ ಪಂಚಭೂತಗಳ ವಿಷಯವಿದೆ. ಶ್ವಾಸ ಎಲ್ಲಿದೆ ಎನ್ನುವುದನ್ನು ತಿಳಿದುಕೊಂಡರೆ ಫಲವನ್ನು ತಿಳಿದುಕೊಳ್ಳಬಹುದು. 6 ಅಂಗುಲದ ಶ್ವಾಸ ಪೃಥ್ವಿ, 12 ಅಂಗುಲ ಜಲ, 8 ಅಂಗುಲವಿದ್ದರೆ ಅಗ್ನಿ, ಆರು ಅಂಗುಲ ಇದ್ದರೆ ವಾಯು, 3 ಅಂಗುಲ ಇದ್ದರೆ ಆಕಾಶ. 16 ಅಂಗುಲಕ್ಕಿಂತಲೂ ಹೆಚ್ಚು ಧೀರ್ಘ ಶ್ವಾಸ ಹೊಂದಿರುವರಿದ್ದಾರೆ ಎಂದು ವಿವರಿಸಿದರು.
ಗರ್ಗಾಚಾರ್ಯರು ಜ್ಯೌತಿಷದ ಮೇರುಶಿಖರ ಇದ್ದಂತೆ. ಯಾದವರ ಕುಲಗುರುಗಳು. ಸೂರ್ಯಚಂದ್ರರು 11ನೇ ಮನೆಯಲ್ಲಿ ಬಂದರೆ ಬದುಕಿನ ಕತ್ತಲನ್ನು ಕೂಡಾ ಬಗೆಹರಿಸುವ ಸಾಮಥ್ರ್ಯ ಇದೆ ಗರ್ಗಾಚಾರ್ಯರು ಹೇಳಿದ್ದರು.

ಇಂದಿನ ಅನಾವರಣ ಬಗ್ಗೆ ಪ್ರಸ್ತಾವಿಸಿ, ಅಷ್ಟಮ ರಾಘವೇಶ್ವರ ಭಾರತೀಸ್ವಾಮೀಜಿಯವರು ನಮ್ಮ ಪರಂಪರೆಯ 33ನೇ ಯತಿಗಳು. ತಮ್ಮ ಮುಕ್ತಿಯ ದಿನವನ್ನು ಮೊದಲೇ ಕಂಡುಕೊಂಡಿದ್ದು, ಶಿಷ್ಯರನ್ನು ಕರೆದು ಕೊನೆಯ ಮಂತ್ರಾಕ್ಷತೆಯನ್ನೂ ಅನುಗ್ರಹಿಸಿದ್ದರು. ಮುಕ್ತಿಗಾಗಿ ಕಾಶಿಗೆ ಹೋಗಲು ಸಮಯವಿಲ್ಲ. ದಕ್ಷಿಣ ಕಾಶಿ ಎನಿಸಿದ ಗೋಕರ್ಣಕ್ಕೆ ಹೋಗಲು ಮಾತ್ರ ಸಮಯಾವಕಾಶವಿದೆ ಎಂದು ತಿಳಿದುಕೊಂಡು, ಉತ್ತರಾಧಿಕಾರಿಗಳಿಗೆ ಅಧಿಕಾರ ವಹಿಸಿ, ರಾಮಮುದ್ರೆಯನ್ನು ನಂಬಿ ಬದುಕಿ ಎಂದು ಶಿಷ್ಯರಿಗೆ ಆಶೀರ್ವಾದ ಮಾಡಿ ಹೊರಟಾಗ ಇಡೀ ಮಠವೇ ಕತ್ತಲಾಯಿತು ಎಂದು ಮಠದ ದಿನಚರಿಯಲ್ಲಿ ಉಲ್ಲೇಖವಿದೆ.

ಇದು ಮಹಾನಿರ್ಯಾಣದ ಕಾಲ. ಗೋಕರ್ಣದ ಸಮಾಧಿ ಇಂದಿಗೂ ಜಾಗೃತಸ್ಥಾನವಾಗಿ ಮುಂದುವರಿದಿದೆ. ಅವರ ಜೀವನದಲ್ಲಿ ಇಂಥ ಹಲವು ಘಟನೆಗಳು ನಡೆದವು. ಜಗತ್ತಿಗೆ ದಾರಿ ತೋರಿಸುವ ಗುರುಗಳಿಗೇ ಕಣ್ಣಿಲ್ಲ ಎಂದು ಯಾರೋ ಆಡಿಕೊಂಡದ್ದನ್ನು ಕೇಳಿ ಘೋರ ತಪಸ್ಸು ಮಾಡಿ ಕಣ್ಣನ್ನು ಮರಳಿ ಪಡೆದುಕೊಂಡಿದ್ದರು. ಕಣ್ಣಿಲ್ಲದೇ ಕಾಡಿನಲ್ಲಿ ಏಕಾಂಗಿಯಾಗಿ ತಪಸ್ಸು ಮಾಡಿ ಮೂರೇ ತಿಂಗಳಲ್ಲಿ ದೃಷ್ಟಿಯನ್ನು ಮರಳಿ ಪಡೆದವರು ಎಂದು ಬಣ್ಣಿಸಿದರು.

ಕೊಲ್ಲೂರಿನ ಪೂಜಾಪದ್ಧತಿ ಅವರಿಂದ ನಿರೂಪಿತವಾದದ್ದು. ಕೊಲ್ಲೂರು ಪೂಜಾಪದ್ಧತಿ ಅವರ ಅಪೂರ್ವ ಗ್ರಂಥ. ಕೇವಲ ಶಾಟಿಯಿಂದ ಆನೆಯನ್ನು ನಿಯಂತ್ರಿಸಿದ ಮಹಾತ್ಮ. ಅವರ ಬದುಕನ್ನು ನೋಡಿದರೆ, ದಾಖಲೆಗಳನ್ನು ಗಮನಿಸಿದರೆ, ಅವರೊಬ್ಬ ಅಸಾಧಾರಣ ತಪಃಸಿದ್ಧರು, ಮೋಕ್ಷಪರರು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.

https://kalpa.news/wp-content/uploads/2024/04/VID-20240426-WA0008.mp4

ಮುಕ್ರಿ ಸಮಾಜ ಮತ್ತು ಸವಿತಾ ಸಮಾಜದ ವತಿಯಿಂದ ಸ್ವರ್ಣಪಾದುಕಾಪೂಜೆ ನೆರವೇರಿತು. ಶ್ರೀಮಠದ ಪರಂಪರೆಯ 33ನೇ ಗುರುಗಳಾದ ಅಷ್ಟಮ ರಾಘವೇಶ್ವರ ಭಾರತೀಸ್ವಾಮಿಗಳ ಜೀವನ- ಸಾಧನೆ, ಅವರ ಅಧ್ಯಯನ ಗ್ರಂಥಗಳು, ಪತ್ರಗಳು, ದಿನಚರಿಯ ಅನಾವರಣವನ್ನು ಚಂದ್ರಶೇಖರ ಬಡಗಣಿ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ | ಹೇಗಿದೆ ಸಿದ್ಧತೆ?

Next Post

ಇಂಜಿನೀಯರ್‍ಸ್ ದಿನಾಚರಣೆ | ಸರ್. ಎಮ್. ವಿಶ್ವೇಶ್ವರಯ್ಯರಿಗೆ ಗೌರವಂದನೆ | ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ

kalpa News

kalpa News

Next Post
ಇಂಜಿನೀಯರ್‍ಸ್ ದಿನಾಚರಣೆ | ಸರ್. ಎಮ್. ವಿಶ್ವೇಶ್ವರಯ್ಯರಿಗೆ ಗೌರವಂದನೆ | ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ

ಇಂಜಿನೀಯರ್‍ಸ್ ದಿನಾಚರಣೆ | ಸರ್. ಎಮ್. ವಿಶ್ವೇಶ್ವರಯ್ಯರಿಗೆ ಗೌರವಂದನೆ | ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL