No Result
View All Result
‘Z’ Launches ‘Dilfluencer Moments’: Attention That Builds Brand Love | A New Media Format for Marketers
English Articles

‘Z’ Launches ‘Dilfluencer Moments’: Attention That Builds Brand Love | A New Media Format for Marketers

by ಕಲ್ಪ ನ್ಯೂಸ್
January 29, 2026
0

Kalpa Media House  |  Bengaluru  | ‘Z’, India's leading Content and Technology Powerhouse, today announced the launch of 'Dilfluencer Moments' –...

Read moreDetails
Silent Skin Damage in Winter: Children at Higher Risk Than Adults, Doctors Warn

Silent Skin Damage in Winter: Children at Higher Risk Than Adults, Doctors Warn

January 23, 2026
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
  • Advertise With Us
  • Grievances
  • About Us
  • Contact Us
Friday, January 30, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ರಾಮಚಂದ್ರಾಪುರ ಮಠ-ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು: ರಾಘವೇಶ್ವರ ಶ್ರೀ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 16, 2024
in ಉತ್ತರ ಕನ್ನಡ
0
ರಾಮಚಂದ್ರಾಪುರ ಮಠ-ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು: ರಾಘವೇಶ್ವರ ಶ್ರೀ

ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಶ್ರೀಗಳ ಆಶೀರ್ವಾದ ಪಡೆದರು.

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ರಾಮಚಂದ್ರಾಪುರ ಮಠ #Ramachandrapura Mutt (ಆದ್ಯ ರಘೂತ್ತಮ ಮಠ) ಹಾಗೂ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara Shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಗೋಕರ್ಣ ದೇವಾಲಯ ಮತ್ತು ಶ್ರೀಮಠದ ನಡುವಿನ ಸಂಬಂಧದ ಬಗೆಗಿನ ದಾಖಲೆಗಳ ಅನಾವರಣದ ಬಳಿಕ ಆಶೀರ್ವಚನ ನೀಡಿದರು.
ಗೋಕರ್ಣ ಮಂಡಲಾಚಾರ್ಯತ್ವ ಮತ್ತು ಮಹಾಬಲೇಶ್ವರನ ವಿಧಿವತ್ತಾದ ಅರ್ಚನೆಯ ಎರಡು ಅನುಜ್ಞೆಯನ್ನು ಶಂಕರರು ನಮ್ಮ ಮಠದ ಪ್ರಥಮಾಚಾರ್ಯರಾದ ವಿದ್ಯಾನಂದರಿಗೆ ನೀಡಿದರು. ಶ್ರೀಸಂಸ್ಥಾನ ಮಹಾಬಲೇಶ್ವರ ದೇವಸ್ಥಾನ ಎನ್ನಲಾಗುತ್ತದೆ. ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ಪಡಸಾಲೆಯಲ್ಲಿ ಮಠ ಇತ್ತು. ದೇವಾಲಯ ನಿರ್ವಹಣೆಗಾಗಿಯೇ ಇತ್ತು. ಪೂರ್ವಾಚಾರ್ಯರ ಸಮಾಧಿಗಳೂ ಇಲ್ಲೇ ಇದ್ದವು. ಮಹಾಬಲೇಶ್ವರ ದೇವಾಲಯದ ವ್ಯವಸ್ಥೆಗಾಗಿಯೇ ಮಠದಲ್ಲಿ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಪದ್ಧತಿ ಇತ್ತು. 33ನೇ ಯತಿಗಳು ಒಂದು ತಿಂಗಳು ಇಲ್ಲೇ ಇದ್ದು, ರಥವನ್ನು ದುರಸ್ತಿ ಮಾಡಿಸಿದ ನಿದರ್ಶನಗಳಿವೆ ಎಂದು ವಿವರಿಸಿದರು.

ಧನಮೂಲ ಅಲ್ಲ; ಪ್ರತಿಷ್ಠೆಗಾಗಿ ಅಲ್ಲ. ದೇವರ ಸೇವೆಗೆ ನಾವು ಇರುವವರು. ಅವನ ಇಚ್ಛೆಯಂತೆ ಆಗಲಿ. ನಿಶ್ಚಿಂತೆಯಿಂದ ಪ್ರತೀಕ್ಷೆ ಮಾಡೋಣ. ಪೂರ್ವಪರಂಪರೆಗೆ ಅನುಸಾರವಾಗಿ ಪೂಜೆ, ಉತ್ಸವಗಳು ನಡೆಯಬೇಕು. ದೇವಹಿತ, ಕಿಂಕರಹಿತ ಭಕ್ತಹಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಇಂದು ಅನಾವರಣಗೊಂಡಿರುವ ಈ ದಾಖಲೆಗಳು ಪ್ರಶ್ನಾತೀತ ಎಂದು ಹೇಳಿದರು.

ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಗುರಿಕ್ಕಾರರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ರಾಮದೇವರ ಪರವಾಗಿ ಸಂಸ್ಥಾನ. ಸಂಸ್ಥಾನದ ಪರವಾಗಿ ಇರುವವರು ಗುರಿಕ್ಕಾರರು. ಆಶೀರ್ವಾದ ಮಾತ್ರ ಅವರಿಗೆ ಸಲ್ಲುವ ಸಂಭಾವನೆ. ಅತ್ಯಂತ ನಿಷ್ಠೆ- ಶ್ರದ್ಧೆಯಿಂದ ಮುಪ್ಪನ್ನೂ ಮರೆತು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುತ್ತಾರೆ. ಜೊಸ ತಲೆಮಾರಿನಲ್ಲಿ ಗುರಿಕ್ಕಾರರಾಗಲು ಹಿಂಜರಿಕೆ ಕಾಣುತ್ತಿದೆ. ಜಾಂಬವಂತರಿಗೆ ಹನುಮಂತನಂತೆ ಯುವಕರು ಈ ಕಾರ್ಯಕ್ಕೆ ಸಜ್ಜಾಗಬೇಕು ಎಂದು ಸೂಚಿಸಿದರು.
ಮಠದ ಧರ್ಮಧ್ವಜವನ್ನು ಎತ್ತರಕ್ಕೆ ಎತ್ತಿಹಿಡಿಯುವವರು ಬೇಕು. ಸಮಾಜದ ಹೊಸ ತಲೆಮಾರಿನವರು ಇದಕ್ಕೆ ಸಜ್ಜಾಗಬೇಕು. ಗುರಿಕ್ಕಾರರ ವೈಯಕ್ತಿಕ ಶ್ರೇಯಸ್ಸಿಗಾಗಿ ಗಣಪತಿ ಹವನ, ಆಂಜನೇಯ ಹವನ, ನವಗ್ರಹ ಹವನ ನಡೆಸಲಾಗಿದೆ. ಹೆಚ್ಚು ಸೇವೆ ಮಾಡುವ ಶಕ್ತಿ ಬರುವಂತೆ ಹರಸಿ ಇದನ್ನು ನೆರವೇರಿಸಲಾಗುತ್ತಿದೆ ಎಂದರು.

Also read: ಈದ್ ಮಿಲಾದ್ | ಖಾಕಿ ಭದ್ರಕೋಟೆಯಾಗಿದೆ ನಾಗಮಂಗಲ | ಹೇಗಿದೆ ನೋಡಿ ಭದ್ರತೆ?

ಮಠದ ಶ್ರೀಮುದ್ರೆಯ ಸಾಠಿ, ಸಂಸ್ಥಾನದ ಹಸ್ತಾಕ್ಷರದ ಸನ್ನದು, ರಜತ ರಕ್ಷೆ ನಿಮ್ಮನ್ನು ಅಧಿಕರಿಸುವಂಥದ್ದು. ಶಕ್ತಿ ತುಂಬುವಂಥದ್ದು. ಸಮಾಜವನ್ನು ಮುನ್ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮಾಜದಲ್ಲಿ ಶ್ರೀಸಂಸ್ಥಾನದವರ ಪರವಾಗಿ ಸ್ವರ್ಣಪಾದುಕೆ ಸಂಚಾರ ನಡೆಯುತ್ತಿದೆ. ಸ್ವರ್ಣಪಾದುಕೆಗೆ ನಿಗದಿಪಡಿಸಿದ್ದ ಕಾಣಿಕೆಯನ್ನು ಈ ಬಾರಿ ರದ್ದುಪಡಿಸಿ, ಐಚ್ಛಿಕವಾಗಿ ಕಾಣಿಗೆ ಸಮರ್ಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚು ಹೆಚ್ಚು ಜನರಿಗೆ ವಿವಿವಿ ಬಗ್ಗೆ ಮಾಹಿತಿ ಈ ಮೂಲಕ ತಲುಪಬೇಕು ಎಂದು ಆಶಿಸಿದರು.
ಅಷ್ಟಮಂಗಲ ಚಿಂತನೆ ಮುಂದುವರಿಸಿದ ಶ್ರೀಗಳು, ಪ್ರತಿಯೊಬ್ಬರೂ ಬೆಳಿಗ್ಗೆ ಶ್ವಾಸಪರೀಕ್ಷೆ ಮಾಡಿಕೊಂಡು ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ವಾಮನಾಡಿ, ಮಧ್ಯನಾಡಿ, ಕ್ಷಿಣ ನಾಡಿ, ಇಡಾ, ಇಂಗಳ, ಸುಷುನ್ಮಾ ಅಥವಾ ಸೋಮ, ಅಗ್ನಿ, ಸೂರ್ಯನಾಡಿಯಲ್ಲಿ ಶ್ವಾಸ ಇರಬಹುದು. ಇದರಿಂದ ನಮ್ಮ ಮರಣದ ವರೆಗಿನ ಪ್ರತಿ ಅಂಶಗಳನ್ನು ತಿಳಿದುಕೊಳ್ಳಬಹುದು. ಇದನ್ನು ದೈವಜ್ಞರು ಹೆಚ್ಚಾಗಿ ಬಳಕೆ ಮಾಡುತ್ತಿಲ್ಲ. ಇದರ ಬಳಕೆ ಹೆಚ್ಚಬೇಕು ಎಂದು ಆಶಿಸಿದರು.

ದೈವಜ್ಞರು ಕೂಡಾ ತಮ್ಮ ಶ್ವಾಸದ ಮೂಲಕ ತನ್ನ ಜೀವನದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಶುಭವಾರಗಳಲ್ಲಿ ಉಸಿರು ಎಡಕ್ಕೆ ಇದ್ದರೆ ಶುಭ. ಸೋಮ, ಬುಧ, ಶುಕ್ರವಾರಗಳಂದು ಉಸಿರು ಬಲಕ್ಕೆ ಇದ್ದರೆ ಅಶುಭ. ಭಾನು, ಮಂಗಳ, ಶನಿವಾರದಂದು ಶ್ವಾಸ ಬಲಕ್ಕಿದ್ದರೆ ಶುಭ. ಶ್ವಾಸ ಸ್ವಸ್ಥವಾಗಿದ್ದರೆ ಆರೋಗ್ಯದ ಸೂಚಕ. ಲಾಭ, ಅನುಕೂಲಗಳನ್ನು, ಸುಭೋಜನವನ್ನು ಕೂಡಾ ಇದು ಸೂಚಿಸುತ್ತದೆ. ಜೀವನಕ್ಕೆ ಬೇಕಾದ ಎಲ್ಲವೂ ಸಾಧನೆಯಾಗುತ್ತದೆ ಎನ್ನುವುದಕ್ಕೆ ಇದು ಸೂಚನೆ. ಶ್ವಾಸ ಕೆಟ್ಟಿತು ಎಂದಾದರೆ ಊಟ ಕೆಡುತ್ತವೆ ಎಂಬ ಅರ್ಥ. ಕಲಹಗಳು ಏರ್ಪಡುತ್ತವೆ. ಒಳ್ಳೆಯ ನಿದ್ದೆ ಬರುವುದಿಲ್ಲ. ಶರೀರದಿಂದ ಕಶ್ಮಲಗಳು ಹೋಗುವುದಿಲ್ಲ ಎಂದು ವಿಶ್ಲೇಷಿಸಿದರು.

ಭಾನುವಾರ ಶ್ವಾಸಾನುಕೂಲವಾಗದಿದ್ದರೆ ದೇಹದಲ್ಲಿ ವೇದನೆ, ಸೋಮವಾರ ಕಲಹ, ಮಂಗಳವಾರ ಮರಣ, ಬುಧವಾರ ದೂರಪ್ರಯಾಣ, ಗುರುವಾರ ಶ್ವಾಸಾನುಕೂ ಇಲ್ಲದಿದ್ದರೆ ರಾಜ್ಯಕ್ಕೆ ಆಪತ್ತು ಬರಬಹುದು. ಶುಕ್ರವಾರ ಕಾರ್ಯಹಾನಿ, ಶನಿವಾರ ಪರನಾಶ, ಕೃಷಿನಾಶ, ಭೂ ವಿವಾದಕ್ಕೆ ಕಾರಣವಾಗುತ್ತದೆ ಎಂದರು.

http://kalpa.news/wp-content/uploads/2024/04/VID-20240426-WA0008.mp4

ಎಂಟು ಭಾನುವಾರ ಶ್ವಾಸ ಪ್ರತಿಕೂಲವಾದರೆ ಗುರುವಿಗೆ ಜೀವಕ್ಕೆ ಅಪಾಯ ಅಥವಾ ತನಗೆ ದೊಡ್ಡ ವ್ಯಾಧಿ ಬರುವ ಸೂಚನೆ. ಎಂಟು ಸೋಮವಾರ ಹೀಗಾದರೆ ಮಕ್ಕಳಿಗೆ ಆಪತ್ತು, ಮಂಗಳವಾರ ಬಂಧನಯೋಗ, ಬುಧವಾರದ ಶ್ವಾಸ ಪ್ರತಿಕೂಲ ಬಂದರೆ ಸಾವು ಎಂಬ ಅರ್ಥ, ಗುರುವಾರ ಗುರುವಿನ ನಿಶ್ಚಯ ಮೃತ್ಯು, ಶುಕ್ರವಾರ ಧನಕ್ಷಯ, ಶನಿವಾರ ಗೃಹಣಿ ಅಥವಾ ಗೃಹನಾಶ ಎಂದು ವಿಶ್ಲೇಷಿಸಿದರು.

ಮಹತ್ವದ ವಿಷಯಕ್ಕೆ ಹೊರಡುವಾಗ ನಾಡಿ ಎಡಕ್ಕಿರಬೇಕು. ಬಲಕ್ಕಿದ್ದರೆ ಅಶುಭ. ಪ್ರವೇಶ ಮಾಡುವಾಗ ನಾಡಿ ಬಲಕ್ಕಿದ್ದರೆ ಶುಭ. ಯೋಗಸಾಧನೆಗೆ ಮಧ್ಯನಾಡಿ ಪ್ರಶಸ್ತ. ಆತ್ಮಸಾಧನೆ, ಮುಕ್ತಿಗೆ ಪ್ರಯತ್ನ ಮಾಡಲು ಇದು ಅಗತ್ಯ ಎಂದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಶ್ರೀಗಳ ಆಶೀರ್ವಾದ ಪಡೆದರು. 34ನೇ ಗುರುಗಳ ಪೂರ್ವಾಶ್ರಮ ಪರಂಪರೆಯ ವಿನಾಯಕ ರಮಣಿ ಭಟ್ ಗೋಕರ್ಣದ ದಾಖಲೆಗಳನ್ನು ಅನಾವರಣಗೊಳಿಸಿದರು. ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಳ್ಳೇರಿಯಾ ಮಂಡಲದ ಪ್ರಧಾನ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಗುರಿಕ್ಕಾರರ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್, ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news                     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaweshwara shriRamachandrapura muttUttara Kannadaಗೋಕರ್ಣರಾಮಚಂದ್ರಾಪುರ ಮಠಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ
Share196Tweet123Send
Previous Post

ಈದ್ ಮಿಲಾದ್ | ಖಾಕಿ ಭದ್ರಕೋಟೆಯಾಗಿದೆ ನಾಗಮಂಗಲ | ಹೇಗಿದೆ ನೋಡಿ ಭದ್ರತೆ?

Next Post

ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋಮಾತೆ ಮಹಾತಾಯಿ: ಚಿದಾನಂದಗೌಡ ಅಭಿಪ್ರಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋಮಾತೆ ಮಹಾತಾಯಿ: ಚಿದಾನಂದಗೌಡ ಅಭಿಪ್ರಾಯ

ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋಮಾತೆ ಮಹಾತಾಯಿ: ಚಿದಾನಂದಗೌಡ ಅಭಿಪ್ರಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 30, ಶುಕ್ರವಾರ | ಅಮೃತ ಕಾಲ ಎಷ್ಟೊತ್ತಿಗೆ?

January 30, 2026
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು – ಟುಟಿಕೊರಿನ್ ನಡುವೆ ಎರಡು ವಿಶೇಷ ರೈಲುಗಳು

ರಾಜ್ಯದಿಂದ ಹೊರಡುವ ಹಲವು ವಿಶೇಷ ರೈಲುಗಳ ಸೇವೆ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

January 29, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಬೆಂಗಳೂರು-ವಿಜಯಪುರ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಯಾವತ್ತು? ಸಮಯವೇನು?

January 29, 2026
ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ | ದುಬೈ ರಾಯಲ್ಸ್’ಗೆ ಭರ್ಜರಿ ಜಯ

ವಿಶ್ವ ಲೆಜೆಂಡ್ಸ್ ಪ್ರೊ ಟಿ20 ಲೀಗ್ | ದುಬೈ ರಾಯಲ್ಸ್’ಗೆ ಭರ್ಜರಿ ಜಯ

January 29, 2026
ಶೀಘ್ರವೇ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಬೇಕು: ತೀ.ನಾ. ಶ್ರೀನಿವಾಸ್ ಒತ್ತಾಯ

ಶೀಘ್ರವೇ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಬೇಕು: ತೀ.ನಾ. ಶ್ರೀನಿವಾಸ್ ಒತ್ತಾಯ

January 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL