Friday, August 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಅಷ್ಟಮಂಗಲಕ್ಕೆ ವಿಧಾನಗಳು ಅನೇಕ: ರಾಘವೇಶ್ವರ ಶ್ರೀ

September 18, 2024
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಅಷ್ಟಮಂಗಲಕ್ಕೆ ಹಲವು ಆಯಾಮಗಳಿದ್ದು, ಇದರಲ್ಲಿ ಕಾಲ, ದೇಶ, ಶ್ವಾಸ, ದಶಾ, ಸ್ಪøಷ್ಟಾಂಗ, ಪೃಚ್ಛಕ ನಿಂತ ದಿಕ್ಕು, ಪ್ರಶ್ನಾಕ್ಷರಗಳು, ಪೃಚ್ಛಕನ ಸ್ಥಿತಿ, ಪೃಚ್ಛಕನ ಚೇಷ್ಟೆ, ಭಾವ, ನೋಟ, ವಸ್ತ್ರ, ತಾಂಬೂಲ, ಅನುಭವಕ್ಕೆ ಬರುವ ಸಕಲ ಸಂಗತಿಗಳು ಇದರಲ್ಲಿ ಸೇರುತ್ತವೆ. ಇವೆಲ್ಲವನ್ನೂ ದೈವಜ್ಞ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮುಂಬೈ- ಪುಣೆ, ದೊಂಬಿವಿಲಿ ಮತ್ತು ಚೆನ್ನೈ ವಲಯದ ಸರ್ವಸೇವೆ ಸ್ವೀಕರಿಸಿ, 59ನೇ ದಿನವಾದ ಮಂಗಳವಾರ ಕಾಲ ಮಾಲಿಕೆಯ ಪ್ರವಚನ ಅನುಗ್ರಹಿಸಿದರು.
ಅಷ್ಟಮಂಗಲದಲ್ಲಿ ದೈವಜ್ಞನಿಗೆ ಏನಾಗುತ್ತಿದೆಯೋ ಅದನ್ನು ಪ್ರಚ್ಛಕನಿಗೆ ಅನ್ವಯಿಸುವುದು ದಶಾ ಎನಿಸಿಕೊಳ್ಳುತ್ತದೆ. ಅಂತೆಯೇ ಸ್ಪøಷಾಂಗ, ಪೃಚ್ಛಕ ನಿಂತ ರಾಶಿ, ಪೃಚ್ಚಕ ನಿಂತ ದಿಕ್ಕು, ಪ್ರಶ್ನಾಶ್ನರಗಳ ಮೂಲಕವೂ ಭವಿಷ್ಯವನ್ನು ವಿಶ್ಲೇಷಿಸಬಹುದು ಎಂದರು.

Also read: ಸೆ.19ರಂದು ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಪ್ರಸಾರ

ಇನ್ನು ಪೃಚ್ಛಕನ ಸ್ಥಿತಿ ಕೂಡಾ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಶುಭಕಾರ್ಯಗಳಿಗೆ ಬಲಗಾಲನ್ನು ಮುಂದಿಟ್ಟು ಹೋಗಬೇಕು. ಆದರೆ ಅಷ್ಟಮಂಗಲದಲ್ಲಿ ಎಡಗಾಲು ಮುಂದಿಟ್ಟು ಬಂದರೆ ಶುಭ ಎಂದು ಸೂಚಿಸಿದರು.

ದೈವಜ್ಞ ಹೊರಡುವ ಕಾಲಹೋರ ಕೂಡಾ ಅಷ್ಟಮಂಗಲದಲ್ಲಿ ಪ್ರಮುಖವಾಗುತ್ತದೆ. ಅಂತೆಯೇ ಶಕುನಗಳನ್ನು ನೋಡಿಕೊಳ್ಳಬೇಕು. ಇವು ವಾಸ್ತವ ದಿಕ್ಕುಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಶ್ನೆಚಿಂತನೆ ವೇಳೆ ತಂದಿದುವ ಪೂಜಾ ಸಾಮಗ್ರಿಗಳು ಕೂಡಾ ಮಹತ್ವ ಹೊಂದಿವೆ. ಉದಾಹರಣೆಗೆ ಅಷ್ಟಮಂಗಲಕ್ಕೆ ತಂದಿಡುವ ದೀಪದ ಪಾತ್ರೆ ಮನೆಯ, ಎಣ್ಣೆ/ತುಪ್ಪ ದೇಹದ, ಬತ್ತಿ ಆತ್ಮಕದ, ಜ್ಞಾಲೆ ಆಯಸ್ಸನ್ನು, ಶುದ್ಧಿ/ಅಶುದ್ಧಿಯು, ಸುಖ- ದುಃಖವನ್ನು ಸೂಚಿಸುತ್ತಿದೆ ಎಂದು ವಿವರಿಸಿದರು.
ಬುಧವಾರ ನಡೆಯುವ ಕೆಕ್ಕಾರು ರಾಮದೇವರ ಅನಾವರಣಕ್ಕೆ ಪೀಠಿಕೆ ಎಂಬಂತೆ ಕೆಕ್ಕಾರು ಊರಿಗೆ ಸಂಬಂಧಿಸಿದ ಅನಾವರಣ ಇಂದು ಆಗಿದೆ. ಗುರವಹ ಭಟ್ಟರ ಮನೆಯ ಅನಾವರಣ ಅನೇಕ ಗುರುಗಳನ್ನು ನೀಡಿದ ಮನೆ. ಸಮಾಜವನ್ನು ಬೆಳಗಿದ ಇಬ್ಬರು ಗುರುಗಳನ್ನು ಕೊಟ್ಟ ಮನೆ. ದೊಡ್ಡಗುರುಗಳು ಬರೆದ ಪತ್ರದಲ್ಲಿ ಇದರ ಉಲ್ಲೇಖವಿದೆ. ಮನೆಯ ಮಗುವನ್ನು ಸಮಾಜಕ್ಕೆ ನೀಡುವುದು ಸುಲಭವಲ್ಲ. ಅದು ಕಠಿಣ ನಿರ್ಧಾರ. 32ನೇ ಗುರುಗಳ ಕಾಲದಲ್ಲಿ ಮಠ ಅತ್ಯಂತ ಉಚ್ಛ್ರಾಯಸ್ಥಿತಿಗೆ ತಲುಪಿತ್ತು. 33ನೇ ಪೀಠಾಧಿಪತಿಗಳು ಅದ್ಭುತ ಯೋಗಶಕ್ತಿ ಹೊಂದಿದ್ದವರು ಎಂದು ಬಣ್ಣಿಸಿದರು.

ಮಹಾತ್ಮರು ಹುಟ್ಟುವ ಕುಲ ಪುಣ್ಯ ಪಡೆಯುತ್ತದೆ. ತಾಯಿ ಸಾಥ್ರ್ಯಕ್ಕೆ ಪಡೆಯುತ್ತಾಳೆ. ಭೂಮಿಯೂ ಧನ್ಯವಾಗುತ್ತದೆ. ಗುರವಹ ಮನೆ ಎರಡಕ್ಕಿಂತ ಹೆಚ್ಚು ಗುರುಗಳನ್ನು ಕೊಟ್ಟ ಮನೆ ಎನ್ನುವುದನ್ನು ಸೂಚಿಸುತ್ತದೆ. ಗುರುಗಳನ್ನು ನೀಡಿದ್ದಲ್ಲದೇ ಎಲ್ಲರೂ ಗುರುಸೇವೆಯನ್ನು ಸಮರ್ಪಣಾ ಮನೋಭಾವದಿಂದ ಮಾಡುತ್ತಾ ಬಂದಿದ್ದಾರೆ. ಮನೆಯನ್ನೇ ಮಠಕ್ಕೆ ಬಿಟ್ಟುಕೊಟ್ಟ ಮನೆ. ಎಂದು ಹೇಳಿದರು.

ವಿಜ್ಞಾನ ಶಾಸ್ತ್ರದ ವಿಚಾರದಲ್ಲಿ ತಲೆ ಹಾಕಬಾರದು. ಶಾಸ್ತ್ರದಲ್ಲಿ ಹೇಳಿರುವುದು ಕಂದಾಚಾರ ಎನ್ನುವುದನ್ನು ವಿಜ್ಞಾನ ನಿರೂಪಿಸಿದ ಮೇಲೆ ಅದರ ವಿರುದ್ಧ ಮಾತನಾಡಲಿ. ಶಾಸ್ತ್ರವನ್ನು ಇಲ್ಲ ಎನ್ನಲು ಬೇಕಾದ ಜ್ಞಾನ ನಮ್ಮ ಆಧುನಿಕ ವಿಜ್ಞಾನ ಇಲ್ಲ ಎಂಬ ಮಾತ್ರಕ್ಕೆ ಅದು ಕಂದಾಚಾರ ಎಂದು ಹೇಳಲಾಗದು ಎಂದು ಎಚ್ಚರಿಸಿದರು.
ಗುರುಗಳನ್ನು ನೀಡಿದ ಮನೆಗಳಿಗೆ ಮಾನ್ಯತೆ ನೀಡುವ ಪರಿಪಾಠ ಸಮಾಜದಲ್ಲಿ ಬೆಳೆಯಬೇಕು. ಸಮದೃಷ್ಟಿ ಅಥವಾ ಸಮದರ್ಶಿತ್ವ ಗುರುಗಳಿಗೆ ಅಗತ್ಯ ಎಂದು ಸೂಚಿಸಿದರು.

ಗುರುಮನೆ ಕೃತಿಯ ಲೋಕಾರ್ಪಣೆಯನ್ನು ಪರಮಪೂಜ್ಯರು ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.

ಚಾತುರ್ಮಾಸ್ಯ ಸೀಮೋಲ್ಲಂಘನೆ

ಅಶೋಕೆಯ ಗುರುದೃಷ್ಟಿಯಲ್ಲಿ 60 ದಿನಗಳ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರ ಚಾತುರ್ಮಾಸ್ಯ ಬುಧವಾರ ಸೀಮೋಲ್ಲಂಘನದೊಂದಿಗೆ ಸಂಪನ್ನಗೊಳ್ಳಲಿದೆ. ಪರಮಪೂಜ್ಯರು 12 ಗಂಟೆಗೆ ಗಂಗಾವಳಿ ನದಿ ದಾಟಿ ಪೂಜೆ ಸಲ್ಲಿಸುವ ಮೂಲ ವ್ರತ ಸಂಪನ್ನಗೊಳ್ಳಲಿದೆ. ಬಳಿಕ ಅಶೋಕೆಯ ಶ್ರೀ ಮಲ್ಲಿಕಾರ್ಜುನನ ದರ್ಶನ ಪಡೆದು, 1.30ಕ್ಕೆ ಧರ್ಮಸಭೆ ನಡೆಯಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Previous Post

ಸೆ.19ರಂದು ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಪ್ರಸಾರ

Next Post

ಭಾರತೀಯ ನ್ಯಾಯ ಸಂಹಿತೆಯಡಿ ಸಾರ್ವಜನಿಕ ಸೇವೆ ರೂಪದಲ್ಲಿ ಶಿಕ್ಷೆ: ನ್ಯಾ. ವಿಪುಲ್ ತೇಜ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಾರತೀಯ ನ್ಯಾಯ ಸಂಹಿತೆಯಡಿ ಸಾರ್ವಜನಿಕ ಸೇವೆ ರೂಪದಲ್ಲಿ ಶಿಕ್ಷೆ: ನ್ಯಾ. ವಿಪುಲ್ ತೇಜ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು | ಆಗಸ್ಟ್ 9ರಂದು ಯುವ ಕಲಾವಿದೆ ಗ್ರಿಷಾ ಭರತನಾಟ್ಯ ರಂಗಪ್ರವೇಶ

August 8, 2025

ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಎಬಿವಿಪಿ ಪಣ | ಆ.12: ‘ಮೈಸೂರು ಚಲೋ’ ಚಳುವಳಿ

August 8, 2025

ಶಿವಮೊಗ್ಗ : ಐಡಿ ಕಾರ್ಡ್ ಇಲ್ಲದೇ, ದಾಖಲೆ ಇಲ್ಲದೇ ವ್ಯಾಪಾರ ಮಾಡಿದ್ರೆ ಕ್ರಮಕೈಗೊಳ್ಳಿ | ಶಾಸಕ ಚೆನ್ನಿ ಸೂಚನೆ

August 8, 2025

ಚಹಾಪುಡಿಗೆ 24 ರೂ. ಹೆಚ್ಚು ಪಡೆದ ತಪ್ಪಿಗೆ ಭಾರೀ ದಂಡ ಪಾವತಿ ಪಾವತಿಸುವಂತಾಯ್ತು! ಏನಿದು ಕೇಸ್?

August 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು | ಆಗಸ್ಟ್ 9ರಂದು ಯುವ ಕಲಾವಿದೆ ಗ್ರಿಷಾ ಭರತನಾಟ್ಯ ರಂಗಪ್ರವೇಶ

August 8, 2025

ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಎಬಿವಿಪಿ ಪಣ | ಆ.12: ‘ಮೈಸೂರು ಚಲೋ’ ಚಳುವಳಿ

August 8, 2025

ಶಿವಮೊಗ್ಗ : ಐಡಿ ಕಾರ್ಡ್ ಇಲ್ಲದೇ, ದಾಖಲೆ ಇಲ್ಲದೇ ವ್ಯಾಪಾರ ಮಾಡಿದ್ರೆ ಕ್ರಮಕೈಗೊಳ್ಳಿ | ಶಾಸಕ ಚೆನ್ನಿ ಸೂಚನೆ

August 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!