ನವದೆಹಲಿ: ಪಾಕಿಸ್ಥಾನದ ಪರಿಧಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿ ಬಂದಿರುವ ಭಾರತೀಯ ವಾಯು ಸೇನೆಯ ಕಾರ್ಯವನ್ನು ಮೆಚ್ಚಿಕೊಂಡು ಬೆಂಬಲಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾಬ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಮಾತನಾಡಿರುವ ಅವರು, ನಾವು ನಮ್ಮ ಸೈನಿಕಬಲದ ಪ್ರಯತ್ನವನ್ನು ಮೆಚ್ಚುತ್ತೇವೆ. ಅವರಿಗೆ ಯಾವತ್ತೂ ನಮ್ಮ ಬೆಂಬಲವಿದೆ. ಮತ್ತೊಂದು ಒಳ್ಳೆಯ ವಿಚಾರವೆಂದರೆ ಈ ಆಕ್ರಮಣ ಉಗ್ರವಾದವನ್ನು ಹಾಗೂ ಉಗ್ರವಾದಿಗಳನ್ನು ಹತ್ತಿಕ್ಕಿ ಸ್ವಚ್ಛವಾಗಿದ್ದು ಕಾರ್ಯವಾಗಿದೆ. ಕೇವಲ ಉಗ್ರರು ಮತ್ತು ಸವರ ನೆಲೆಗಳ ಮೇಲೆಯೇ ಗುರಿಮಾಡಲಾಗಿದೆ ಎನ್ನುವುದು ಸ್ವಾಗತಾರ್ಹ. ಇಂತಹ ಸಾಧನೆ ಮಾಡಿರುವ ಸೇನೆಯನ್ನು ನಾವು ಬೆಂಬಲಿಸುತ್ತೆವೆ ಎಂದಿದ್ದಾರೆ.
Discussion about this post