ಕಲ್ಪ ಮೀಡಿಯಾ ಹೌಸ್ | ಹಾರನಹಳ್ಳಿ |
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಖಂಡಿಸಿ ಶಿವಮೊಗ್ಗ ಗ್ರಾಮಾಂತರದ ಹಾರನಹಳ್ಳಿಯಲ್ಲಿ ಯುವಾ ಬ್ರಿಗೇಡ್ ವತಿಯಿಂದ ನಿನ್ನೆ ಸಂಜೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಾಂಗ್ಲಾದೇಶದಲ್ಲಿ ಭಾರತೀಯರ ಮೇಲೆ ಹಲ್ಲೆ-ಹತ್ಯೆ ನಡೆಸುತ್ತಿರುವುದು ಮಾತ್ರವಲ್ಲದೇ ಹಿಂದೂ ದೇವಸ್ಥಾನಗಳನ್ನು ಕೆಡವಿ ಭಾರತೀಯರನ್ನು ಹಿಂಸಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಬಾಂಗ್ಲಾ ಸರ್ಕಾರವನ್ನು ಆಗ್ರಹಿಸಿ, ಕೂಡಲೇ ಭಾರತೀಯರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಬಾಂಗ್ಲಾದೇಶದಲ್ಲಿ ಭಾರತೀಯರಿಗೆ ರಕ್ಷಣೆ ಒದಗಿಸುವಲ್ಲಿ ಬಾಂಗ್ಲಾ ಸರ್ಕಾರ ವಿಫಲವಾದಂತೆ ತೋರುತ್ತಿದೆ ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಹಿಂದೂ ಧಾರ್ಮಿಕ ದೇವಸ್ಥಾನಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಹಿಂದೂಗಳ ಮೇಲೆ ಹಲ್ಲೆ ಎಂದು ಒತ್ತಾಯಿಸಲಾಯಿತು.
ಹಾರನಹಳ್ಳಿ ಕುಂಸಿ ರಸ್ತೆ ಗೌಡ್ರು ಅಂಗಡಿಯಿಂದ ಬಸ್ ನಿಲ್ದಾಣದವರೆಗೂ ನಡೆದ ಶಾಂತಿಯುತ ಪಂಜಿನ ಪ್ರತಿಭಟನಾ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಈ ಪ್ರತಿಭಟನೆಯಲ್ಲಿ ಆರ್’ಎಸ್’ಎಸ್ ಜಿಲ್ಲಾ ಸಂಚಾಲಕರಾದ ಹಳ್ಳಿಕಟ್ಟೆ ಮಂಜಣ್ಣ ಆಯನೂರು, ಸುರೇಶ್ ಶೆಟ್ಟರು, ಪ್ರದೀಪ್ ಮುದವಾಲಾ, ಹಾರನಹಳ್ಳಿ ಅಭಿಲಾಷ್, ಸೃಜನ್ ಹುಬ್ಬನಹಳ್ಳಿ, ಮಹೇಶ್ ಹುಬ್ಬಾನಹಳ್ಳಿ, ರಾಮರಾವ್ ಕೋರೆ, ಪ್ರದೀಪ್ ಭಜರಂಗದಳ, ಕಿರಣ್ ಕಸಬಾ, ಬಸವರಾಜ್, ಎಸ್.ಎಂ. ಶರತ್, ಆರ್. ಪ್ರವೀಣ್, ಸುರೇಶ್ ಸಂಕೆದೇವನಕೊಪ್ಪ, ದರ್ಶನ, ಕೆದರೋಜಿ ಮತ್ತು ಪರಿವಾರದ ಎಲ್ಲಾ ಕಾರ್ಯಕರ್ತರು ಹಾಗೂ ನೂರಾರೂ ಸಂಖ್ಯೆಯ ಹಿಂದೂ ಬಾಂಧವರು ಪಾಲ್ಗೊಂಡಿದ್ದರು.
(ವರದಿ: ಪ್ರಮೋದ್, ಹಾರನಹಳ್ಳಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post