ಕಲ್ಪ ಮೀಡಿಯಾ ಹೌಸ್ | ಹಾಸನ |
ವಿಶ್ವವಿಖ್ಯಾತ ಬೇಲೂರು #Belur ಶ್ರೀ ಚನ್ನಕೇಶವ ಸ್ವಾಮಿಯವರ ಬ್ರಹ್ಮ ರಥೋತ್ಸವ ಎಪ್ರಿಲ್ 10ರಂದು ನಡೆಯಲಿದ್ದು, ಎಪ್ರಿಲ್ 2ರಿಂದ 15ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕುರಿತಂತೆ ದೇವಾಲಯದ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದು, ಎಪ್ರಿಲ್ 2ರಿಂದ 15ರವರೆಗೂ ರಥೋತ್ಸವದ #Rathotsava ಕಾರ್ಯಕ್ರಮಗಳು ನಡೆಯಲಿವೆ ಎಂದದಿದ್ದಾರೆ.
Also Read>> ಸೊರಬ | ಶೀಗೇಹಳ್ಳಿ ಸಮೀಪ ಅರಣ್ಯಕ್ಕೆ ಬೆಂಕಿ | ಅಪಾರ ಪ್ರಾಕೃತಿಕ ಸಂಪತ್ತು ನಾಶ
ಯಾವತ್ತು ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಎಪ್ರಿಲ್ 2: ಶ್ರೀಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ರಾತ್ರಿ ಅನುಜ್ಞೆ, ಮೃತ್ತಿಕಾ ಸಂಗ್ರಹ ಪೂರ್ವಕ ಅಂಕುರಾರ್ಪಣ, ಅಧಿವಾಸರ, ರಕ್ಷಾ ಬಂಧನ ಹಾಗೂ ದಿವ್ಯ ಶಾರದಾಲಂಕಾರೋತ್ಸವ.
ಎಪ್ರಿಲ್ 3: ರಾತ್ರಿ-ನಿಶ್ಚಿತಾರ್ಥ ಪೂರ್ವಕ ದಿವ್ಯ ಕಲ್ಯಾಣೋತ್ಸವ ಮತ್ತು ಗರುಡ ಪ್ರತಿಷ್ಠೆ.
ಎಪ್ರಿಲ್ 4: ಹಗಲು- ಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ, ಭೇರಿತಾಡನ ಮತ್ತು ದಿವ್ಯ ಚಂದ್ರಮಂಡಲಾರೋಹಣೋತ್ಸವ.
ಎಪ್ರಿಲ್ 5: ಹಗಲು- ಸೂರ್ಯಮಂಡಲಾರೋಹಣೋತ್ಸವ, ರಾತ್ರಿ- ದಿವ್ಯ ಅನಂತಪೀಠಾರೋಹಣೋತ್ಸವ(ಶೇಷವಾಹನ).
ಎಪ್ರಿಲ್ 6: ಹಗಲು- ದಿವ್ಯ ಅನಂತ ಪೀಠಾರೋಹಣೋತ್ಸವ(ಶೇಷವಾಹನ) ನಾಗವಲ್ಲಿ ಮಹೋತ್ಸವ, ರಾಮನವಮಿ ಉರುಟಣೆ, ರಾತ್ರಿ- ದಿವ್ಯ ಹಂಸಾರೋಹಣೋತ್ಸವ ಮತ್ತು ದಿವ್ಯ ಬೆಳ್ಳಿ ಮಂಟಪೋತ್ಸವ.
ಎಪ್ರಿಲ್ 7: ಹಗಲು- ಹಂಸಾರೋಹಣೋತ್ಸವ, ಕನಕಾಂದೋಳಿಕಾರೋಹಣೋತ್ಸವ ಮತ್ತು ದಿವ್ಯ ಪುಷ್ಪ ಮಂಟಪಾರೋಹಣೋತ್ಸವ, ರಾತ್ರಿ ವಿದ್ಯುತ್ ದೀಪಾಲಂಕೃತವಾದ ದಿವ್ಯ ಬೆಳ್ಳಿ ಮಂಟಪೋತ್ಸವ.
ಎಪ್ರಿಲ್ 8: ಹಗಲು- ಪುಷ್ಪ ಮಂಟಪಾರೋಹಣೋತ್ಸವ, ರಾತ್ರಿ- ಪ್ರಭಾ ಸಮೇತ ಗರುಢಾರೋಹಣೋತ್ಸವ ಮತ್ತು ದಿವ್ಯ ಹನುಮಂತೋತ್ಸವ.
ಎಪ್ರಿಲ್ 9: ಪ್ರಹ್ಲಾದ ಪರಿಪಾಲನೋತ್ಸವ ಮತ್ತು ಕುಂಕುಮ ವಸಂತ ಪೂರ್ವಕ ದಿವ್ಯ ಗರುಡೋತ್ಸವ.
ಎಪ್ರಿಲ್ 10: ಶ್ರೀಯವರ ದಿವ್ಯ ಬ್ರಹ್ಮ ರಥೋತ್ಸವ(ಬೆಳಗ್ಗೆ 10.30ರಿಂದ 11 ರ ಒಳಗೆ ಸಲ್ಲುವ ಶುಭ ಮಿಥುನ ಲಗ್ನ ಶುಭಾಂಶದಲ್ಲಿ).
ಎಪ್ರಿಲ್ 11: ಹಗಲು- ನಾಡಿನ ದಿವ್ಯ ರಥೋತ್ಸವ ಮತ್ತು ಶಾಂತಿ ಉತ್ಸವ ಹನುಮಮತಾರೋಹಣೋತ್ಸವ. ರಾತ್ರಿ- ದಿವ್ಯ ಡೋಲೋತ್ಸವ.
ಎಪ್ರಿಲ್ 12: ಹಗಲು- ಅಶ್ವಾರೋಹಣ ಪೂರ್ವಕ ಲಕ್ಷ್ಮೀ ಪ್ರಣಯ ಕಲಹ, ಸಂಧಾನ ಸೇವೆ, ಅವಭೃತ, ದಿವ್ಯ ಪೂರ್ಣಾಹುತಿ ಮತ್ತು ಫಣಿಮಾಲೆ, ರಾತ್ರಿ- ದಿವ್ಯ ತೆಪ್ಪೋತ್ಸವ.
ಎಪ್ರಿಲ್ 13: ಹಗಲು- ಮಹಾಭಿಷೇಕ, ಪುಷ್ಪಯಾಗ. ರಾತ್ರಿ- ದಿವ್ಯ ಸಿಂಹಾರೋಹಣೋತ್ಸವ ಮೂಲಬಲಿ.
ಎಪ್ರಿಲ್ 14: ಹಗಲು- ಗಜಾರೋಹಣ, ರಾತ್ರಿ-ಭಜಾಮ್ಯಹಂ. ದಿವ್ಯ ಮೋಹಿನಿ ಅಲಂಕಾರೋತ್ಸವ.
ಎಪ್ರಿಲ್ 15: ರಾತ್ರಿ- ಶಯನೋತ್ಸವ.
ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ, ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಮುಜರಾಯಿ ಹಾಗೂ ವಕ್ಫ್ ಸಚಿವರಾದ ರಾಮಲಿಂಗರೆಡ್ಡಿ, ಕರ್ನಾಟಕ ರಾಜ್ಯ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕರುಗಳಾದ ಎಚ್.ಡಿ. ರೇವಣ್ಣ, ಎಚ್.ಕೆ. ಸುರೇಶ್, ಡಾ. ಸಿ.ಎನ್. ಬಾಲಕೃಷ್ಣ, ಎ. ಮಂಜು, ಸಿಮೆಂಟ್ ಮಂಜು, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಶಾಸಕರುಗಳಾದ ಮಧು ಜಿ. ಮಾದೇಗೌಡ, ಕೆ. ವಿವೇಕಾನಂದ, ಡಾ. ಸೂರಜ್ ರೇವಣ್ಣ, ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post