ಕಲ್ಪ ಮೀಡಿಯಾ ಹೌಸ್ | ಹಾಸನ |
ಆರಂಭದ ದಿನದಿಂದ ಬುಧವಾರ ಮುಂಜಾನೆ ವರೆಗೆ 8,84,503 ಜನರು ಹಾಸನಾಂಬೆ #Hasanamba ದರ್ಶನ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ #Minister Krishna Bairegowda ತಿಳಿಸಿದರು.
ಸಿಎಂ ಎದುರು ಈ ಮಾಹಿತಿ ನೀಡಿದ ಅವರು, ಕಳೆದ ವರ್ಷ 1 ದಿನ 1 ಲಕ್ಷ ಜನ ಬಂದಿದ್ದರೆ, ಈ ಬಾರಿ 2 ಲಕ್ಷ ಬಂದಿದ್ದಾರೆ ವಿವರಿಸಿದರು.
ಕಳೆದ 3 ದಿನಗಳಿಂದ ಸರಾಸರಿ 2 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಧರ್ಮದರ್ಶನ ಪೂರ್ಣಗೊಳ್ಳಲು 10 ಗಂಟೆ ಸಮಯ ತೆಗೆದು ಕೊಳ್ಳುತ್ತಿತ್ತು. ಈ ವರ್ಷ ಹೆಚ್ಚು ಜನ ಬಂದರೂ 5 ಗಂಟೆ ಮೀರಿಲ್ಲ ಎಂದು ವಿವರಿಸಿದರು.
ಶಕ್ತಿ ಯೋಜನೆ #Shakti Scheme ಕಾರಣದಿಂದ ಹಾಸನಾಂಬೆ ದರ್ಶನಕ್ಕೆ ಬಹುತೇಕ ಶ್ರಮಿಕ ವರ್ಗ ಹಾಗೂ ಶೇ.70 ಮಹಿಳೆಯರು, ಬರುತ್ತಿದ್ದಾರೆ. ದೂರದ ಊರಿ ನಿಂದಲೂ ಮಹಿಳೆಯರೇ ಬರುತ್ತಿದ್ದಾರೆ ಎಂದು ಸಿಎಂ ಗಮನಕ್ಕೆ ತಂದರು.
ಭಕ್ತರಿಗೆ ನೀರು ಮಜ್ಜಿಗೆ, ಶೌಚಾಲಯ, ಮಳೆಗೆ ತೊಂದರೆ ಆಗದಂತೆ ಜರ್ಮನ್ ಟೆಂಟ್ ಹಾದ್ದೇವೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದರು.
ದರ್ಶನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದ್ವಿಗುಣ ವಾಗಿರುವುದರಿಂದ ಸರಾಸರಿ 3-4 ಗಂಟೆ ಸಮಯ ತೆಗೆದು ಕೊಳ್ಳುತ್ತದೆ. ಆದರೆ ಎಲ್ಲರಿಗೂ ಸುಗಮವಾಗಿ ದರ್ಶನ ಆಗುತ್ತಿದೆ ಎಂದು ತಿಳಿಸಿದರು.
ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಮಂಗಳವಾರ ಶೇ.80 ರಷ್ಟು ಮಹಿಳೆಯರು ದರ್ಶನ ಪಡೆದಿದ್ದಾರೆ. ಭಕ್ತರಿಗೆ ಬೇಕಿರುವ ಮೂಲಭೂತ ಸೌಕರ್ಯಗಳ ಜೊತೆಗೆ ಮಳೆ-ಬಿಸಿಲಿಂದ ರಕ್ಷಣೆ ಪಡೆಯಲು ಜರ್ಮನ್ ಟೆಂಟ್ ಹಾಕಲಾಗಿದೆ. ಈ ಬಾರಿ ಶ್ರೀ ಸಾಮಾನ್ಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಹಳ ಶಿಸ್ತು ಬದ್ಧವಾಗಿ ದರ್ಶನಕ್ಕೆ ಕ್ರಮ ವಹಿಸಲಾಗಿದೆ.
ತಮ್ಮ ಸೂಚನೆ ಮೇರೆಗೆ ಸಾಮಾನ್ಯ ಜನರಿಗೆ ದರ್ಶನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post