ಕಲ್ಪ ಮೀಡಿಯಾ ಹೌಸ್ | ಯಾದಗಿರಿ/ಹುಬ್ಬಳ್ಳಿ |
ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಪ್ರಾಯೋಗಿಕ ನಿಲುಗಡೆಯನ್ನು ಮುಂದಿನ ಆರು ತಿಂಗಳ ಅವಧಿಗೆ ಮುಂದುವರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.
ಈ ಕುರಿತಂತೆ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದ್ದು, ಇದರಂತೆ, ರೈಲು ಸಂಖ್ಯೆ 22691 ಕೆಎಸ್ಆರ್ ಬೆಂಗಳೂರು – ಹಜರತ್ ನಿಜಾಮುದ್ದೀನ್ ರಾಜಧಾನಿ ಡೈಲಿ ಎಕ್ಸ್ ಪ್ರೆಸ್ ಜುಲೈ 27, 2025 ರಿಂದ ತನ್ನ ಯಾದಗಿರಿ ನಿಲ್ದಾಣದ ನಿಲುಗಡೆಯನ್ನು ಮುಂದುವರಿಸಲಿದೆ.
ಹಾಗೆಯೇ, ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – ಕೆಎಸ್ಆರ್ ಬೆಂಗಳೂರು ರಾಜಧಾನಿ ಡೈಲಿ ಎಕ್ಸ್ ಪ್ರೆಸ್ ಜುಲೈ 26, 2025 ರಿಂದ ಯಾದಗಿರಿಯಲ್ಲಿ ತನ್ನ ನಿಲುಗಡೆಯನ್ನು ಮುಂದುವರಿಸಲಿದೆ.
ಈ ಪ್ರಾಯೋಗಿಕ ನಿಲುಗಡೆಯ ಮುಂದುವರಿಕೆಯು ಯಾದಗಿರಿ ಮತ್ತು ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ದೆಹಲಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ಗುಂತಕಲ್ ನಿಲ್ದಾಣದಲ್ಲಿ ಹುಬ್ಬಳ್ಳಿ – ಚೆನ್ನೈ ಎಕ್ಸ್ ಪ್ರೆಸ್’ನ ಸಮಯ ಪರಿಷ್ಕರಣೆ
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17313) ರೈಲಿನ ಗುಂತಕಲ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸಮಯವನ್ನು ದಕ್ಷಿಣ ಮಧ್ಯ ರೈಲ್ವೆಯು ಪರಿಷ್ಕರಿಸಿದೆ. ಈ ರೈಲು, ಇದುವರೆಗೆ ಗುಂತಕಲ್ ನಿಲ್ದಾಣಕ್ಕೆ ಬೆಳಗಿನ ಜಾವ 03:00 ಗಂಟೆಗೆ ಆಗಮಿಸಿ, 03:05 ಗಂಟೆಗೆ ನಿರ್ಗಮಿಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜುಲೈ 25, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು ಗುಂತಕಲ್ ನಿಲ್ದಾಣಕ್ಕೆ 03:05 ಗಂಟೆಗೆ ಆಗಮಿಸಿ, 03:10 ಗಂಟೆಗೆ ನಿರ್ಗಮಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post