ಕಲ್ಪ ಮೀಡಿಯಾ ಹೌಸ್ | ಹೊನ್ನಾವರ |
ಇಲ್ಲಿನ ಗುಣವಂತೆಯಲ್ಲಿ ಇತ್ತೀಚೆಗೆ ನಡೆದ ಕವಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ನೂತನ ಪ್ರಸಂಗವಾದ ಸತ್ಯ ಹರಿಶ್ಚಂದ್ರ ಪೌರಾಣಿಕ ಯಕ್ಷಗಾನ ಪ್ರಸಂಗ ಸುಮಾರು ನಾಲ್ಕು ವರೆ ಗಂಟೆಗಳ ಕಾಲ ಮನೋಜ್ಞವಾಗಿ ಮೂಡಿ ಬಂದು, ಕಲಾರಸಿಕರ ಗಮನ ಸೆಳೆಯಿತು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯಿಂದ ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಂಭು ಹೆಗಡೆ ಬಯಲು ರಂಗಮAದಿರದಲ್ಲಿ ಹೊಸ ಹಾದಿಯಲ್ಲಿ ಈ ಪ್ರಸಂಗ ಸತ್ಯ ಹರಿಶ್ಚಂದ್ರ ಪ್ರದರ್ಶನಗೊಂಡಿತು.

Also read: ಮತ್ತೆ ಅಪರಿಚಿತರ ಗುಂಡಿನ ದಾಳಿ | ಪಾಕಿಸ್ಥಾನದ ಡಾನ್ ಅಮೀರ್ ಟಿಪು ಫಿನಿಶ್ | ವೀಡಿಯೋ ನೋಡಿ
ಹಿಮ್ಮೇಳನದಲ್ಲಿ ಅನಂತ ಹೆಗಡೆ ದಂತಳಿಗೆ, ಮೂರುರು ನರಸಿಂಹ ಹೆಗಡೆ ಹಾಗೂ ರಾಮನ್ ಹೆಗಡೆ ಮೂರುರು ಸಹಕರಿಸಿದರು ಎಂದು ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post