ಕಲ್ಪ ಮೀಡಿಯಾ ಹೌಸ್
ಹೊಸನಗರ: ತಾಲೂಕಿನ ಮಾರುತಿಪುರ ಶಾಲೆಯಲ್ಲಿದ್ದ 300ಕ್ಕೂ ಹೆಚ್ಚು ಜೊತೆ ಮಕ್ಕಳ ಸಮವಸ್ತ್ರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು, ಶಾಸಕ ಹೆಚ್.ಹಾಲಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಮಕ್ಕಳಿಗೆ ಹಂಚಲು ಸಮವಸ್ತ್ರವನ್ನ ಸಂಗ್ರಹಿಸಿಡಲಾಗಿತ್ತು. ಆ ಕೊಠಡಿಗೆ ಬೆಂಕಿ ಬಿದ್ದು ಅಷ್ಟು ಸಮವಸ್ತ್ರಗಳು ಸುಟ್ಟು ಕರಕಲಾಗಿವೆ.
ಘಟನೆ ಹಿನ್ನೆಲೆ:
ಜೂ.18ರ ಶುಕ್ರವಾರ ಶಾಲೆಯ ಮುಖ್ಯೋಪಾಧ್ಯಾಯರು 300 ಜೊತೆ ಮಕ್ಕಳ ಸಮವಸ್ತ್ರವನ್ನು ಶಾಲೆ ಆಫೀಸ್ ರೂಮ್ನಲ್ಲಿ ಜೋಡಿಸಿ, ಸಂಜೆ 4ಗಂಟೆಯ ಹೊತ್ತಿಗೆ ಕಚೆರಿಯ ಕೆಲಸ ಮುಗಿಸಿ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಶಾಲೆಯ ಆಫೀಸ್ ರೂಮ್ ಬಾಗಿಲು ತೆಗೆದಾಗ ಮಕ್ಕಳ ಎಲ್ಲಾ ಸಮವಸ್ತ್ರಗಳು, ಶಾಲೆಯ ಚೇರ್ಗಳು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದ್ದು, ಕೊಠಡಿಯ ತುಂಬ ಹೊಗೆ ಆವರಿಸಿಕೊಂಡಿತ್ತು ಎಂದು ತಿಳಿದುಬಂದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪನವರು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರೌಢಶಾಲೆಯಲ್ಲಿ ಎರಡು ವರ್ಷಗಳ ಹಿಂದೆಯೂ ಇದೇರೀತಿ ಬೆಂಕಿ ಹಚ್ಚಿದ ಪ್ರಕರಣ ನಡೆದಿತ್ತು. ಆ ಸಂದರ್ಭದಲ್ಲಿ ಹಲವು ವಸ್ತುಗಳು ಬೆಂಕಿಗೆ ಹಾನಿಯಾಗಿತ್ತು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post