ಕಲ್ಪ ಮೀಡಿಯಾ ಹೌಸ್
ಹೊಸಪೇಟೆ: ಆದಿಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡ್ಗಿ ಹೊಸಪೇಟೆ ಅರ್ಪಿಸುವ ಶಂಕರ ತತ್ವ ಮಾಸಿಕ ಚಿಂತನದ ನುಡಿ ತೋರಣ ಸಂಭ್ರಮ ಕಾರ್ಯಕ್ರಮ ನಗರದ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ನಡೆಯಿತು.
ಬ್ರಾಹ್ಮಣ ಸಮಾಜದ ಮುಖಂಡರು ಧಾರ್ಮಿಕ, ಸಾಮಾಜಿಕ ಕಾಳಜಿಯ ಕಮಲಾಪುರದ ಭಾಸ್ಕರ್ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರ ತತ್ವ ಮತ್ತು ಸಂಗೀತ ಭಾರತಿ ಸಂಸ್ಥೆಯ ಮಾಸಿಕ ಚಿಂತನಾ ಸಮಾರಂಭದ ಮತ್ತು ಸಾಧನೆ ಬಗ್ಗೆ ತಿಳಿಸಿದರು.
ಒಹುಮುಖ ಪ್ರತಿಭೆ (ಕಲಾವಿದ, ಸಾಹಿತಿ, ಚಲನಚಿತ್ರ ನಿರ್ದೇಶಕ, ನಾಟಕಗಾರ) ಬೆಳಗಾಂ ಜಿಲ್ಲೆಯ ರಾಯಭಾಗ್ನವರಾದ ಅವಳೆಕುಮಾರ್ ಅವರಿಗೆ ಆದಿಗುರು ಶಂಕರಾಚಾರ್ಯ ಪ್ರಶಸ್ತಿ ಮತ್ತು ಸಮಾಜ ಸೇವಾ ಭಾರ್ಗವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯುವ ಸಾಹಿತಿಗಳಿಗೆ, ಕಲಾವಿದರಿಗೂ ಸಹ ಅವರ ಸಾಧನೆ ಮೆಚ್ಚಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಗದೀಶ್ ಬೆನ್ನೂರು ಅವರ ಪಡ್ಲಗಿಯೊಳಗಿನ ಕನಸು ಪುಸ್ತಕ ಬಿಡುಗಡೆ ಮಾಡಲಾಯಿತು. ಉಪನ್ಯಾಸಕ ದಯಾನಂದ ಕಿನ್ನಾಳ್ ಅವರು ಸಾಹಿತಿ ಜಗದೀಶ್ ಅವರ ಬಗ್ಗೆ ಪರಿಚಯ ಮಾಡಿ ಅವರು ಬರೆದಂತ ಪಡ್ಲಿಗಿಯೊಳಗಿಸ ಕನಸು ಪುಸ್ತಕದ ಬಗ್ಗೆ ತಿಳಿಸಿದರು.
ನಾಟ್ಯ ನಾದ ಮರಿಯಮ್ಮನಹಳ್ಳಿ ಭರತನಾಟ್ಯ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಮತ್ತು ಮಕ್ಕಳಿಗೆ ಹಾರೈಸುವುದರ ಮೂಲಕ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಹೊಸಪೇಟೆಯ ಲಕ್ಷ್ಮಿ ನಾರಾಯಣ ಭಜನಾಮಂಡಳಿ ಇವರು ದೇವರನಾಮಗಳ ಜೊತೆ ಭಾವಗೀತೆ ಮತ್ತು ಜಾನಪದ ಗೀತೆಯನ್ನು ಹಾಡಿದರು. ಕಾರ್ಯಕ್ರಮ ಆಯೋಜಕರಾದ ಚಿತ್ತವಾಡ್ಗಿಯ ಬ್ರಾಹ್ಮಣ ಸಮಾಜದ ಮುಖಂಡರು, ವಕೀಲರು, ಹಾಗೂ ಆಕಾಶವಾಣಿ ಕಲಾವಿದ ಕಲ್ಲಂಭಟ್ಟ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ನೇತ್ರ ತಜ್ಞ ಡಾ. ಶ್ರೀನಿವಾಸ ದೇಶಪಾಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಗೀತ ಭಾರತಿ ಕುರಿತು:
1992ರಲ್ಲಿ ಆರಂಭಗೊಂಡ ಸಂಗೀತ ಭಾರತಿ ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸೇವಾ ಸಂಸ್ಥೆ. ಶಂಕರ ತತ್ವ ಮಾಸಿಕ ಚಿಂತನದ ನುಡಿ ತೋರಣ ಸಂಭ್ರಮ ಕಾರ್ಯಕ್ರಮವನ್ನು ಪ್ರತಿ ತಿಂಗಳು ಹೊಸಪೇಟೆ ನಗರದ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ನೆರವೇರಿಸಿಕೊಂಡು ಬರುತ್ತಿರುವ ಜನರ ಮೆಚ್ಚಿಗೆ ಪಡೆದ ಸಂಸ್ಥೆಯಾಗಿದೆ.
ಈ ಸಂಸ್ಥೆ ಮಾಸಿಕ ಸಮಾರಂಭದಲ್ಲಿ ಕವಿಗೋಷ್ಠಿ, ಉಪನ್ಯಾಸ, ಸಂಗೀತ, ಪ್ರಶಸ್ತಿ ಪತ್ರ ವಿತರಣೆ ಹೀಗೆ ಹತ್ತು ಹಲವು ಕಾರ್ಯಕ್ರಮ ನೆರವೇರಿಸಲು ಮುಂದಾಗುತ್ತಿರುವುದು ವಿಶೇಷವಾಗಿದೆ.
ಹೊಸಪೇಟೆ ವಕೀಲರಾದ ಕಲ್ಲಂಭಟ್ಟ ಇವರು ಪ್ರತಿ ತಿಂಗಳು ಈ ಚಿಂತನ ಕಾರ್ಯಕ್ರಮ ನೆರವೇರಿಸಿಕೊಂಡು ನಾಗರೀಕರಲ್ಲಿ ಧಾರ್ಮಿಕ, ಸಂಗೀತ, ಸಾಹಿತ್ಯವನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಶ್ರಮಿಸುತ್ತಿದ್ದಾರೆ.
1992ರಿಂದ ಪ್ರಾರಂಭವಾದ ಈ ಸಂಸ್ಥೆ ಸತತವಾಗಿ ಪ್ರತಿ ತಿಂಗಳು ಮಾಸಿಕ ಕಾರ್ಯಕ್ರಮ ನಡೆಸುತ್ತಿದ್ದು, ಹೊಸದಾಗಿ ರೂಪುಗೊಂಡ ನಂತರ ವಿಜಯನಗರ ಜಿಲ್ಲೆಯಲ್ಲಿ ಪ್ರಥಮವಾಗಿ ಆಯೋಜಿಸಿ ಇಲ್ಲಿನ ಸುತ್ತಮುತ್ತಲಿನ ಸಾಹಿತ್ಯ ಪ್ರೇಮಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ಅವರು ಮುಂದೆ ಬರಲು ಸಹಕಾರಿಯಾಗುತ್ತಿದ್ದಾರೆ.
ವರದಿ-ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post