ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಶ್ರೀರಾಮ ನವಮಿಯ #Rama Navami ಅಂಗವಾಗಿ ಚಿಂತಾಮಣಿ ಮೂಲ ಮಠದಲ್ಲಿರುವ ರಾಮ ಗುಹೆಗೆ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರೊಂದಿಗೆ ತೆರಳಿ ಶ್ರೀರಾಮಚಂದ್ರ ಪ್ರಭುವಿಗೆ ಪೂಜೆ ಸಲ್ಲಿಸಿದರು.
ಗುಜರಾತ್’ನಿಂದ ಆಗಮಿಸಿದ್ದ ಪ್ರವಾಸಿ ಭಕ್ತರು ರಾಮ ಪೂಜೆಯಿಂದ ಸಂತೋಷಗೊಂಡು ರಾಮ ಭಜನೆ ಮಾಡಿದರು. ನಂತರ ಶ್ರೀಮಠದ ಪ್ರವೇಶ ದ್ವಾರದಲ್ಲಿರುವ ಚಿಂತಾಮಣಿ ಮಾರುತಿಗೆ ಶ್ರೀ ಗುರುಗಳು ಪೂಜೆ ಸಲ್ಲಿಸಿದರು.
ಆನೆಗುಂದಿ ಗ್ರಾಮದ ಪಂಚಾಯಿತಿ ಅಧ್ಯಕ್ಷರು ಹಾಗು ಗ್ರಾಮದ ಹಿರಿಯರು ಶ್ರೀಗುರುಗಳನ್ನು ಗ್ರಾಮದ ರಾಮ ಮುಂದಿರಕ್ಕೆ ಚಿತ್ತೈಸುವಂತೆ ಪ್ರಾರ್ಥಿಸಿದರು. ಅದರಂತೆ ಶ್ರೀಗುರುಗಳು ರಾಮ ಮಂದಿರಕ್ಕೆ ತೆರಳಿ ರಾಮಪ್ರಭುವಿಗೆ ಮಂಗಳಾರತಿ ನೆರವೇರಿಸಿ, ನೆರದಿದ್ದ ಭಕ್ತರಿಗೆ ಆಶಿರ್ವಚನ ನೀಡಿದರು.
Also read: ಲೋಕಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ
ರಾಮನ ಗುಣಗಳ ಬಗ್ಗೆ ಹಾಗೂ ರಾಮನಾಮದ ಮಹಿಮೆಯ ಬಗ್ಗೆ ಶ್ರೀಗುರುಗಳಿಂದ ಪ್ರವಚನ ಆಲಿಸಿದ ಆನೆಗುಂದಿಯ ಗ್ರಾಮಸ್ಥರು ಸಂತೋಷದಿಂದ ಗುರುಗಳಿಗೆ ಜೈ ಘೋಷಣೆ ಕೂಗಿ ನಮಸ್ಕರಿಸಿದರು.
ಆನೆಗುಂದಿ ಗ್ರಾಮದ ವೃತ್ತದಲ್ಲಿ ಚಿಂತಾಮಣಿ ಮಠದ ಭಕ್ತರು ಗ್ರಾಮನಿವಾಸಿಗಳಿಗೆ ಪಾನಕ, ಕೋಸಂಬರಿಯನ್ನು ವಿತರಿಸಿದರು. ರಾಮ-ಹನುಮ ಮೆಟ್ಟಿದ ಮಣ್ಣಿನಲ್ಲಿ ರಾಮ ನವಮಿಯನ್ನು ಆಚರಿಸಿದ್ದು ಎಲ್ಲರಿಗೂ ಆನಂದವನ್ನುಂಟು ಮಾಡಿದೆ.
||ಜಯ ಜಯ ರಘುವೀರ ಸಮರ್ಥ||
(ವರದಿ: ಮುರಳಿರ್ಧ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post