ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ Siddaramaiah ಅವರು ಕಾರು ಹತ್ತುವಾಗಿ ಅಸ್ವಸ್ಥಗೊಂಡು ಆಯತಪ್ಪಿ ಕೆಳಕ್ಕೆ ಕುಸಿದ ಘಟನೆ ನಡೆದಿದೆ.
ಹೊಸಪೇಟೆಯ ಹೆಲಿಪ್ಯಾಡ್’ನಲ್ಲಿ ಘಟನೆ ನಡೆದಿದ್ದು, ಕಾರಿನಿಂದ ಕೆಳಕ್ಕೆ ಬೀಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಅಂಗರಕ್ಷಕ ಹಿಡಿದಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ.
ಶ್ರೀನಿವಾಸ್ ಪರವಾಗಿ ಪಟ್ಟಣದಲ್ಲಿ ಪ್ರಚಾರ ಕೈಗೊಳ್ಳಲು ಪಟ್ಟಣ ಹೊರವಲಯದ ಹೆಲಿಪ್ಯಾಡ್’ಗೆ ಸಿದ್ದರಾಮಯ್ಯ ಆಗಮಿಸಿದ್ದರು. ಹೆಲಿಪ್ಯಾಡ್ ಸುತ್ತ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ಕಾರಿನ ಒಂದು ಬದಿಯಲ್ಲಿ ನಿಂತು ಜನರತ್ತ ಕೈಬೀಸಿದರು. ಬಳಿಕ ಕಾರೊಳಗೆ ಕುಳಿತುಕೊಳ್ಳುವಾಗ ಆಯಾತಪ್ಪಿ ಕೆಳಬೀಳುವಾಗ ತಕ್ಷಣವೇ ಅಂಗರಕ್ಷಕ ನೆರವಿಗೆ ಧಾವಿಸಿ, ಒಳಗೆ ಕೂರಿಸಿದ್ದಾರೆ.
ಬಳಿಕ ಅವರ ಸಹಾಯಕರೊಬ್ಬರು ನೀರು ಕೊಟ್ಟು ಉಪಚರಿಸಿದರು. ನಂತರ ಸ್ವಲ್ಪ ಸುಧಾರಿಸಿಕೊಂಡು ವೇದಿಕೆ ಕಾರ್ಯಕ್ರಮದತ್ತ ಸಿದ್ದರಾಮಯ್ಯ ತೆರಳಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೆ ಓಡಾಡುತ್ತಿರುವ ಸಿದ್ದರಾಮಯ್ಯ ಬಳಲಿದಂತೆ ಕಂಡು ಬಂದಿದ್ದರು ಎಂದು ವರದಿಯಾಗಿದೆ.
Also read: ಗಮನಿಸಿ! ಏ.30ರಂದು ಸೊರಬ ಪಟ್ಟಣ, ಗ್ರಾಮೀಣ ಪ್ರದೇಶದ ಈ ಸ್ಥಳಗಳಲ್ಲಿ ವಿದ್ಯುತ್ ಇರುವುದಿಲ್ಲ
ಈ ಕುರಿತಂತೆ ಸ್ವತಃ ಸಿದ್ದರಾಮಯ್ಯನವರೇ ಮಾತನಾಡಿದ್ದು, ಕೊಂಚ ಆಯಾಸವಾಗಿದೆ ಅಷ್ಟೇ. ನನಗೆ ಏನೂ ಆಗಿಲ್ಲ. ಗಟ್ಟಿಮುಟ್ಟಾಗಿದ್ದೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post