ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ಕ್ರಾಂತಿ ಚಿತ್ರದ ಬೊಂಬೆ, ಬೊಂಬೆ ಹಾಡು ಬಿಡುಗಡೆಗೆ ಬಂದಿದ್ದ ವೇಳೆ ನಟ ದರ್ಶನ್ Actress Darshan ಅವರ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ಭಾನುವಾರ ನಗರದ ವಾಲ್ಮೀಕಿ ವೃತ್ತಕ್ಕೆ ಕ್ರಾಂತಿ ಚಿತ್ರತಂಡದ ಬಸ್ ಬರುತ್ತಿದ್ದಂತೆ ದರ್ಶನ್ ಅವರ ಬ್ಯಾನರ್ ಹರಿದು ಬಿಸಾಡಿದರು. ಹಾಡು ಬಿಡುಗಡೆ ನಂತರ ತೆರೆದ ವಾಹನದಲ್ಲಿ ನಟಿ ರಚಿತಾ ರಾಮ್ ಅವರು ಮಾತನಾಡುತ್ತಿದ್ದ ವೇಳೆ ದರ್ಶನ ಅವರತ್ತ ಚಪ್ಪಲಿ ಎಸೆದಿದ್ದು, ಅವರ ಭುಜಕ್ಕೆ ಬಿದ್ದಿದೆ. ಈ ವೇಳೆ ಮಾತು ನಿಲ್ಲಿಸಿ ಅಲ್ಲಿಂದ ತೆರಳಿದರು.
Also read: ಗಮನಿಸಿ! ದಾವಣಗೆರೆಯಿಂದ ಪುಣ್ಯ ಸ್ಥಳಗಳಿಗೆ ಪ್ರತಿನಿತ್ಯ ಸರ್ಕಾರಿ ಬಸ್: ಎಲ್ಲೆಲ್ಲಿಗೆ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post