ಕಲ್ಪ ಮೀಡಿಯಾ ಹೌಸ್
ಹೊಸಪೇಟೆ(ವಿಜಯನಗರ): ನದಿ ನೀರಿನ ಮೂಲಗಳಿರುವ ಕಡೆ ಎಲ್ಲೆಲ್ಲಿ ಯಾವುದೇ ರೀತಿಯ ಸಮಸ್ಯೆಗಳು, ವ್ಯಾಜ್ಯಗಳು ಇಲ್ಲವೋ ಮತ್ತು ನಿರ್ಮಾಣಕ್ಕೆ ಸಾಧ್ಯವಿದೆಯೋ ಅಂತ ಕಡೆಗಳಲ್ಲೆಲ್ಲಾ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಿಸುವ ಮತ್ತು ಕೃಷಿ ಹಾಗೂ ಇನ್ನೀತರ ಕಾರ್ಯಗಳಿಗೆ ಬಳಸುವ ಕೆಲಸವಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು ವೀಕ್ಷಿಸಿ ಮಾತನಾಡಿದ ಅವರು, ನದಿಗಳ ಜೋಡಣಾ ಯೋಜನೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಉಪರಾಷ್ಟ್ರಪತಿಗಳು ನದಿಗಳ ಜೋಡಣಾ ಯೋಜನೆ ಜಾರಿಯಾದರೇ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಲಿವೆ. ಇದಕ್ಕೆ ಎಲ್ಲ ರಾಜ್ಯಗಳು ಕೈಜೋಡಿಸಬೇಕಿದೆ ಎಂದರು.
ಈ ಯೋಜನೆ ಜಾರಿಯಾದರೆ ಗೋದಾವರಿ, ಮಹಾನದಿ, ಕೃಷ್ಣ, ಕಾವೇರಿ, ತುಂಗಾಭದ್ರಾ ಸೇರಿದಂತೆ ಇನ್ನಿತರ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ತಡೆ ಬಿಳಲಿದೆ. ಈ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕ ಎಂದರು.
ತುಂಗಾಭದ್ರಾ ಜಲಾಶಯ ವೀಕ್ಷಿಸಿ ವೆಂಕಯ್ಯ ನಾಯ್ಡು ಸಂತಸ:
ಕಲ್ಯಾಣ ಕರ್ನಾಟಕ, ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ತುಂಬಿರುವುದನ್ನು ನೋಡಿ ಸಂತಸಗೊಂಡಿರುವೆ. ಈ ಭಾಗಗಳ ಜನರು ಮತ್ತು ರೈತರ ಅಕ್ಷಯ ಪಾತ್ರೆಯಾಗಿರುವ ಈ
ಜಲಾಶಯ ಕಳೆದ ನಾಲ್ಕು ವರ್ಷಗಳಿಂದ ತುಂಬಿದಂತೆ ಮುಂದಿನ ದಿನಗಳಲ್ಲಿಯೂ ತುಂಬಲಿ. ನಮಗೆಲ್ಲ ಅನ್ನ ನೀಡುವ ಈ ಭಾಗದ ರೈತರು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ನಾನು ಕೂಡ ರೈತನ ಮಗ. ಕೃಷಿ ಕೆಲಸಗಳನ್ನು ಮಾಡುತ್ತಲೇ ದೆಹಲಿಯಲ್ಲಿರುವ ಸಂವಿಧಾನದ ಉನ್ನತ ಹುದ್ದೆಗೇರಿರುವೆ. ಆದರೂ ಮನಸ್ಸು ಕೃಷಿ, ಕೃಷಿಕರ ಕಲ್ಯಾಣದ ಬಗ್ಗೆ ಚಿಂತಿಸುತ್ತಿರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ತಲೆದೂರಲಿದೆ ಎಂಬ ಆತಂಕವನ್ನು ತಮ್ಮ ಮಾತುಗಳಲ್ಲಿ ವ್ತಕ್ತಪಡಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು, ನೀರಿನ ಮಿತಬಳಕೆ, ಮರುಬಳಕೆ, ರಿಸೈಕಲ್ ನಮ್ಮ ಮಂತ್ರವಾಗಬೇಕು ಎಂದು ಸಲಹೆ ನೀಡಿದದರು.
ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ,ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಅವರ ಪತ್ನಿ ಎಂ.ಉಷಾ ಮತ್ತು ಕುಟುಂಬಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post