Saturday, October 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಉತ್ತರ ಕನ್ನಡ

ಇನ್ನೆಷ್ಟು ವರ್ಷ ಆಹಾರ ಪದಾರ್ಥಕ್ಕೆ ‘ಐಟಂ’ ಎನ್ನುತ್ತೀರಾ? ರಾಘವೇಶ್ವರ ಶ್ರೀ ಕಳವಳಕಾರಿ ಪ್ರಶ್ನೆ

August 14, 2025
in ಉತ್ತರ ಕನ್ನಡ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಭಾರತ ಬಿಟ್ಟು ಬ್ರಿಟಿಷರು ತೊಲಗಿ 75 ವರ್ಷ ಕಳೆದರೂ ಇಂದಿಗೂ ಲಿಸ್ಟ್, ಐಟಂ ಎಂಬ ಪದಗಳೇ ಇಂದು ರಾರಾಜಿಸುತ್ತಿವೆ. ಊಟದಲ್ಲಿ ವೈವಿಧ್ಯತೆ ಹೇಗೆ ಮುಖ್ಯವೋ ಐಟಂ ಎಂಬ ಬದಲು ವೈವಿಧ್ಯತೆಯನ್ನು ಬಿಂಬಿಸುವ ‘ಬಗೆ’ ಎನ್ನುವ ಸರಳ ಸುಂದರ ಪದ ಬಳಸೋಣ -ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ, ಭಾಷಾ ಶುದ್ಧೀಕರಣ ಎಲ್ಲರ ಆದ್ಯತೆಯಾಗಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ಆಶಿಸಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 35ನೇ ದಿನವಾದ ಬುಧವಾರ ಹೊನ್ನಾವರ ಮಂಡಲದ ಹೊಸಾಕುಳಿ, ಕರ್ಕಿ, ಕಡ್ಲೆ, ಹೊನ್ನಾವರ ಮತ್ತು ಮುಗ್ವಾ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.

ಹಿಂದಿಯಲ್ಲಿ ಕೂಡಾ ಮೊಘಲರ ಆಳ್ವಿಕೆ ಕಾಲದಲ್ಲಿ ಪರ್ಶಿಯನ್ ಪದಗಳು ಸೇರಿಕೊಂಡಿದೆ. ಇದು ಎಲ್ಲ ಭಾರತೀಯ ಭಾಷೆಗಳ ಸ್ಥಿತಿ. ಆದ್ದರಿಂದ ದಾಸ್ಯಕ್ಕೆ ಜೋತುಬೀಳದೇ ಭಾಷೆ ಶುದ್ಧವಾಗಿಟ್ಟುಕೊಳ್ಳುವ ದೃಢಸಂಕಲ್ಪ ತೊಡೋಣ ಎಂದು ಕರೆ ನೀಡಿದರು.

ಬ್ರಿಟನ್‍ಗೆ ತೀರಾ ಸನಿಹದಲ್ಲಿರುವ ಫ್ರಾನ್ಸ್‍ನಲ್ಲೂ ಇಂಗ್ಲಿಷ್ ಬಳಕೆ ಸೀಮಿತ. ಅಲ್ಲಿ ಶುದ್ಧ ಫ್ರೆಂಚ್ ಭಾಷೆಯನ್ನೇ ಬಳಸಲಾಗುತ್ತದೆ. ಇಲ್ಲಿ ಫ್ರೆಂಚ್‍ಗೆ ಯಾವುದೇ ಪದ ಸೇರಿಸಬೇಕಾದರೆ, ಅದಕ್ಕೆ ಪದಮಂಡಲದ ಅನುಮೋದನೆ ಬೇಕು. ಆದರೆ ನಮ್ಮ ಭಾಷೆ ಮಾತ್ರ ಬೇಲಿ ಇಲ್ಲದ ತೋಟದಂತಾಗವೆ. ಆದ್ದರಿಂದಲೇ ಕನ್ನಡದಲ್ಲಿ ಇಂಗ್ಲಿಷ್, ಪರ್ಶಿಯನ್, ಫೋರ್ಚ್‍ಗೀಸ್, ಉರ್ದು ಪದಗಳು ಹೇರಳವಾಗಿ ಸೇರಿಕೊಂಡಿವೆ. ಮನೆಗೆ ಬಾಗಿಲು ಹೇಗೆ ಅಗತ್ಯವೋ ಭಾಷೆ ಭದ್ರವಾಗಿರಬೇಕಾದರೆ ನಾಲಿಗೆಗೂ ಬಾಗಿಲು ಬೇಕು ಎಂದು ಮಾರ್ಮಿಕವಾಗಿ ನುಡಿದರು.

ಪಾಶ್ಚಾತ್ಯ ಪ್ರಭಾವದಿಂದ ರುಚಿಕರ ಹಾಗೂ ಆರೋಗ್ಯಕರ ತಿಂಡಿ ತಿನಸುಗಳು ಮರೆತುಹೋಗಿವೆ. ಅಂತೆಯೇ ಭಾಷೆ ಕೂಡಾ ಕಲಬೆರಕೆಯಾಗಿದೆ. ಸರಿಯಾಗಿ ಕನ್ನಡ ಮಾತನಾಡಲು ಅಗದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭಾಷೆಯಲ್ಲೂ ಪರಕೀಯಯತೆ ನುಸುಳಿರುವುದು ಆತ್ಮಾಭಿಮಾನದ ಕೊರತೆಯನ್ನು ಸೂಚಿಸುತ್ತದೆ. ಇದು ಮರ್ಯಾದೆಗೇಡು. ಜಪಾನ್, ರಷ್ಯಾ, ಜರ್ಮನಿಯಂಥ ಮುಂದುವರಿದ ದೇಶಗಳನ್ನು ನೋಡಿದರೂ ಸ್ವಭಾಷೆ ಬಗ್ಗೆ ಅಭಿಮಾನವಿದೆ. ಆದರೆ ನಮ್ಮಲ್ಲಿ ಸ್ವಭಾಷೆ ಬಗ್ಗೆ ತಾತ್ಸಾರ ಸಲ್ಲದು ಎಂದು ಹೇಳಿದರು.

ದಿನಕ್ಕೊಂದು ಆಂಗ್ಲ ಪದ ತ್ಯಜಿಸುವ ಅಭಿಯಾನದಲ್ಲಿ ಲಿಸ್ಟ್ ಪದದ ಬದಲಾಗಿ ಕನ್ನಡದ ಯಾದಿ, ಪಟ್ಟಿ, ಅನುಕ್ರಮಣಿಕೆ, ಸೂಚಿ, ಕೋಷ್ಟಕ ಪದಗಳ ಬಳಕೆಯನ್ನು ಚಾಲ್ತಿಗೆ ತರುವಂತೆ ಕರೆ ನೀಡಿದರು.

ಭಾರತ ಬಿಟ್ಟು ಬ್ರಿಟಿಷರು ತೊಲಗಿ 75 ವರ್ಷ ಕಳೆದರೂ ಇಂದಿಗೂ ಲಿಸ್ಟ್, ಐಟಂ ಎಂಬ ಪದಗಳೇ ಇಂದು ರಾರಾಜಿಸುತ್ತಿವೆ. ಊಟದಲ್ಲಿ ವೈವಿಧ್ಯತೆ ಹೇಗೆ ಮುಖ್ಯವೋ ಐಟಂ ಎಂಬ ಬದಲು ವೈವಿಧ್ಯತೆಯನ್ನು ಬಿಂಬಿಸುವ ‘ಬಗೆ’ ಎನ್ನುವ ಸರಳ ಸುಂದರ ಪದ ಬಳಸೋಣ ಎಂದರು. ಭೋಜನದಲ್ಲಿ ಉಪ್ಪು, ಖಾರ, ಹುಳಿ, ಸಿಹಿ, ಕಹಿ, ಒಗರು ಹೀಗೆ ಗೃಹಸ್ಥರಿಗೆ ಷಡ್ರಸೋಪೇತ ಖಾದ್ಯಗಳ ವೈವಿಧ್ಯಗಳು ಬೇಕು. ಆದ್ದರಿಂದ ಐಟಂ ಎಂಬ ಬದಲು ಬಗೆ ಎಂಬ ಪದ ಬಳಸಿದರೆ ಇದು ವೈವಿಧ್ಯವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದರು.ನವರಾತ್ರಿ ನಮಸ್ಯ
ನವರಾತ್ರಿ ನಮಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಲೋಕಾರ್ಪಣೆ ಮಾಡಿದ ಶ್ರೀಗಳು, ಸುಮಾರು 15 ದಿನಗಳ ಭವ್ಯ ಕಾರ್ಯಕ್ರಮ ನವರಾತ್ರ ನಮಸ್ಯ ಹೆಸರಿನಲ್ಲಿ ಸಾಗರದಲ್ಲಿ ನಡೆಯುತ್ತಿದೆ. ಇಡೀ ಸಾಗರ ಪ್ರಾಂತ್ಯದಲ್ಲಿ ಈ ಕಾರ್ಯಕ್ರಮ ಸಂಚಲನ ಮೂಡಿದೆ. ಮಾತೃಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಪ್ರಾಂತ್ಯಕ್ಕೆ ಶಕ್ತಿಸ್ವರೂಪಿಣಿಯಾದ ರಾಜರಾಜೇಶ್ವರಿ ಚೈತನ್ಯ ತುಂಬಲಿ ಎಂದು ಆಶಿಸಿದರು.

ಸಂಘಟನೆಯ ಮೂಲಕ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಸಾಕಷ್ಟು ಪ್ರಯೋಜನಗಳಾಗಿವೆ. ಶ್ರೀಮಠದ ಶಿಷ್ಯರು ಇಂದು ದೊಡ್ಡ ಸಮಷ್ಟಿಯಾಗಿದ್ದೀರಿ. ಮಳೆ ಬಿಂದುಗಳು ಭೂಮಿಯಲ್ಲಿ ಒಂದಾಗುವಂತೆ ಮಠದಲ್ಲಿ ಶಿಷ್ಯರು ಒಗ್ಗೂಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಹೆಚ್ಚು ಹೆಚ್ಚು ಸೇವೆಯನ್ನು ಒಳ್ಳೆಯ ರೀತಿಯಿಂದ ಮಾಡುವಂತಾಗಲಿ; ಹಿಂದೆ ಇದ್ದ ಪದಾಧಿಕಾರಿಗಳು ಹೊಸ ಕಾರ್ಯಕ್ಕೆ ಅಣಿಯಾಗಬೇಕು ಎಂದು ಆಶಿಸಿದರು.

ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಧರ್ಮಭಾರತಿ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನಕುಮಾರ್, ಹೊನ್ನಾವರ ಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಜಿ.ಹೆಗಡೆ, ನೂತನ ಅಧ್ಯಕ್ಷ ಪರಮೇಶ್ವರ ನಾರಾಯಣ ಭಟ್, ಕಾರ್ಯದರ್ಶಿ ಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ ಚಿಟ್ಟಾಣಿ, ಎಂಜಿನಿಯರ್ ವಿಷ್ಣು ಮತ್ತಿತರರು ಉಪಸ್ಥಿತರಿದ್ದರು. ಇಡೀ ವಿವಿವಿ ಕ್ಯಾಂಪಸ್‍ನಲ್ಲಿ ಸೌರದೀಪ ಬೆಳಗುವ ಅಶೋಕಲೋಕ ಪ್ರಾಂಗಣದೀಪ ಯೋಜನೆಗೆ ಚಾಲನೆ ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

                                               

Tags: GokarnaKannada News WebsiteLatest News KannadaRaghaveshwara Bharati Swamijiಕನ್ನಡಗೋಕರ್ಣಮೊಘಲರುರಾಘವೇಶ್ವರ ಶ್ರೀಶಂಕರಾಚಾರ್ಯಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಸ್ವಭಾಷಾ ಚಾತುಮಾಸ್ಯ ವ್ರತಹಿಂದಿ
Previous Post

ಮುಂಜಾನೆ ಸುವಿಚಾರ | ಸ್ವಾತಂತ್ರವಿರಲಿ, ಸ್ವೇಚ್ಛಾಚಾರದ ಮಾಯೆ ಕವಿಯದಿರಲಿ

Next Post

ದರ್ಶನ್, ಪವಿತ್ರಾ ಸೇರಿ 7 ಜನರ ಜಾಮೀನು ರದ್ದು | ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದರ್ಶನ್, ಪವಿತ್ರಾ ಸೇರಿ 7 ಜನರ ಜಾಮೀನು ರದ್ದು | ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೈಸೂರು | ಅ.26-ನ.1 ರವರೆಗೆ ವಿಶೇಷ ಜ್ಞಾನಸತ್ರ | ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ

October 25, 2025

ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನೋತ್ಸವ | ಅ.31ರಿಂದ ನವೆಂಬರ್ 26ರವರೆಗೆ ಏಕತಾಯಾತ್ರೆ

October 25, 2025

ಸುಪ್ರೀಂ ಕೊರ್ಟ್ ಸೂಚನೆ ಪಾಲಿಸುವಲ್ಲಿ ವಿಫಲ | ಅಜಾನ್ ವಿರುದ್ದ ಹೋರಾಟ: ಡಿ.ಎಸ್. ಅರುಣ್

October 25, 2025

ಸರ್ದಾರ್ ವಲ್ಲಭಭಾಯಿ ಪಟೇಲ್ ಯುವಕರಿಗೆ ರೋಲ್ ಮಾಡೆಲ್ ಆಗಬೇಕು: ಡಿ.ಎಸ್. ಅರುಣ್

October 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೈಸೂರು | ಅ.26-ನ.1 ರವರೆಗೆ ವಿಶೇಷ ಜ್ಞಾನಸತ್ರ | ಮಾಹುಲಿ ವಿದ್ಯಾಸಿಂಹಾಚಾರ್ಯ ಸಾರಥ್ಯ

October 25, 2025

ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನೋತ್ಸವ | ಅ.31ರಿಂದ ನವೆಂಬರ್ 26ರವರೆಗೆ ಏಕತಾಯಾತ್ರೆ

October 25, 2025

ಸುಪ್ರೀಂ ಕೊರ್ಟ್ ಸೂಚನೆ ಪಾಲಿಸುವಲ್ಲಿ ವಿಫಲ | ಅಜಾನ್ ವಿರುದ್ದ ಹೋರಾಟ: ಡಿ.ಎಸ್. ಅರುಣ್

October 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!