ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬರ ಕೆಎಸ್’ಆರ್’ಟಿಸಿ ಬಸ್’ನಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರು ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.
ಘಟನೆ ನಡೆದು ಕೆಲವು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ವಿಜಯಪುರದಿಂದ ಮಂಗಳೂರಿನ ಕಡೆ ಹೊರಟಿದ್ದ ಬಸ್’ನಲ್ಲಿ 32 ವರ್ಷದ ಕುಡುಕ ಪ್ರಯಾಣಿಕನೊಬ್ಬ ಅನಾಗರಿಕ ಪ್ರದರ್ಶನ ತೋರಿದ್ದಾನೆ.
ಕೆಎಸ್’ಆರ್’ಟಿಸಿಯ ಸ್ಲೀಪರ್ ಬಸ್ ಅನ್ನು ಪ್ರಯಾಣದ ವೇಳೆ ನಡುವೆ ಹುಬ್ಬಳ್ಳಿ ಬಳಿಯ ಕಿರೆಸೂರು ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು. ಎಲ್ಲಾ ಪ್ರಯಾಣಿಕರು ಬಸ್’ನಿಂದ ಇಳಿದು ಊಟಕ್ಕೆ ಹೋಗಿದ್ದರು. ಆದರೆ ಅದೇ ಬಸ್’ನಲ್ಲಿದ್ದ ಕುಡುಕ ಪ್ರಯಾಣಿಕ ಬಸ್’ನಿಂದ ಇಳಿಯಲಾರದೇ 3ನೆಯ ಸೀಟ್ ಮೇಲೆ ಕುಳಿತು ಮೂತ್ರ ವಿಸರ್ಜನೆ ಮಾಡಿದ್ದಾನೆ.
Also read: ಬಿಜೆಪಿಯಲ್ಲಿ ಹೆಗ್ಗಣ ಬಿದ್ದಿದೆ ವಾಸನೆ ತೆಗೆಯಲಿ, ಕಾಂಗ್ರೆಸ್ ಈ ಬಾರಿ ಟೆಂಟ್ ಕೀಳುವುದು ನಿಶ್ಚಿತ: ಎಚ್’ಡಿಕೆ ಲೇವಡಿ
ಈ ಸೀಟ್’ನಲ್ಲಿ 20 ವರ್ಷದ ಯುವತಿಯೊಬ್ಬಳು ಪ್ರಯಾಣ ಮಾಡುತ್ತಿದ್ದಳು. ಕುಡುಕ ಮೂತ್ರ ವಿಸರ್ಜನೆ ಮಾಡಿದ್ದ ವೇಳೆ ಆಕೆ ಊಟ ಮುಗಿಸಿಕೊಂಡು ವಾಪಾಸಾಗುತ್ತಿದ್ದಳು. ಆಗ ಕುಡುಕನ ವರ್ತನೆ ಕಂಡು ಯುವತಿ ಕೆಂಡಾಮAಡಲವಾಗಿದ್ದಾಳೆ. ವಿಷಯವನ್ನು ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಿದ್ದಾಳೆ. ಬಳಿಕ ಕುಡುಕ ಪ್ರಯಾಣಿಕನಿಗೆ ಬಸ್ ಸಿಬ್ಬಂದಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಯುವತಿಗೆ ಸೀಟ್ ಅನ್ನು ಬದಲಿಸಿ ಕೊಟ್ಟಿದ್ದಾರೆ.
ಈ ಬಗ್ಗೆ ಯುವತಿ ದೂರು ನೀಡಲು ಹಿಂದೇಟು ಹಾಕಿದ್ದು, ಬಸ್ ಚಾಲಕ ಸಂತೋಷ್ ಹಾಗೂ ನಿರ್ವಾಹಕ ಉಮೇಶ್ ಈ ಬಗ್ಗೆ ವಿಭಾಗೀಯ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post