ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದೆಡೆ ಬಿಜೆಪಿಯಲ್ಲಿ ಹೆಗ್ಗಣ ಬಿದ್ದಿದ್ದು, ಅದರ ವಾಸನೆ ಮೊದಲು ಅವರು ತೆಗೆಯಲಿ. ಇನ್ನೊಂದೆಡೆ, ಕಾಂಗ್ರೆಸ್ ಈ ಬಾರಿ ಹೀನಾಯ ಸೋಲಪ್ಪಿ ಟೆಂಟ್ ಕೀಳುವುದು ನಿಶ್ಚಿತ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಮಲವಗೊಪ್ಪದಲ್ಲಿ ನಡೆದ ಪಂಚರತ್ನ ಯಾತ್ರೆಯ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಶಾಸಕರ ಬಗ್ಗೆ ಚಿಂತನೆ ಮಾಡಲಿ. ಹೆಗಣ ಬಿದ್ದಿದೆ ಅದರ ವಾಸನೆ ತೆಗೆಯಿರಿ. ಇನ್ನು ಪಂಚರತ್ನ ಯಾತ್ರೆ ಬಗ್ಗೆ ಲೇವಡಿ ಮಾಡಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಹೀನಾಯ ಸೋಲು ಕಾಣುತ್ತದೆ ಟೆಂಟ್ ತೆಗೆದುಕೊಂಡು ಹೋಗಬೇಕು ಎಂದು ಕಟಕಿಯಾಡಿದರು.
ಎಲ್ಲಾ ಪಕ್ಷಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿವೆ. 72 ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಖುದ್ದು ಭೇಟಿ ಮಾಡಿದ್ದೇನೆ. ರಥಯಾತ್ರೆ ಮೂಲಕ ನಿತ್ಯ 40 ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇನೆ. ಈ ಪಂಚರತ್ನ ಯೋಜನೆ ಬಗ್ಗೆ ಚಿಂತನೆ ಮಾಡಿದ್ದು ಬಡವರ ಕಷ್ಟವನ್ನು ನೋಡಿ ಜಿಡಿಪಿಯ ಮೇಲೆಯೇ ಚರ್ಚೆ ಮಾಡುವೆ. ಜಿಡಿಪಿ ಮೇಲೆ ನಾವು ಅಭಿವೃದ್ಧಿ ಕಾಣುತ್ತೇವೆ ಎಂದರೆ ದೇಶ ಅಭಿವೃದ್ಧಿಯಾಗಲ್ಲ ಎಂದರು.
ಜಲಜೀವನ ಮಿಷನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಹಳ್ಳಿಗಳ ಅಭಿವೃದ್ಧಿ ಬಗ್ಗೆ ಚಿಂತನೆಯಿಲ್ಲ. ಇಂದಿಗೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುವುದು ಕಷ್ಟವಾಗುತ್ತಿದೆ. ಸ್ವಚ್ಛಭಾರತ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಕಾಪಾಡಲು ಎ¯್ಲÁ ಸೌಲಭ್ಯವುಳ್ಳ ಆಸ್ಪತ್ರೆ ಮಾಡುವುದು ಉದ್ದೇಶವಾಗಿದೆ ಎಂದರು.
ಅನಾರೋಗ್ಯ ಸಮಸ್ಯೆ ಹೇಳಿಕೊಂಡು ನಿತ್ಯ ನೂರಾರು ಜನರು ಬರುತ್ತಾರೆ. ಇಂಥ ಬಡವರಿಗೆ ನಿತ್ಯ ನಾನು ಹೇಗೆ ಹಣ ಕೊಡಲಿ. ನಾನು ವಿದ್ಯಾಸಂಸ್ಥೆ ಕಟ್ಟಿಲ್ಲ ಕಟ್ಟಡ ಕಟ್ಟಲ್ಲ. ಪಂಚಯೋಜನೆಗಳು ಜಾರಿಯಾಗಲು ಎರಡೂವರೆ ಲಕ್ಷ ಕೋಟಿ ರೂ. ಬೇಕು ಎಂದರು.
ಕಾಂಗ್ರೆಸ್’ನಿಂದ ಉಚಿತ 200 ಯೂನಿಟ್ ವಿದ್ಯುತ್, 2000 ರೂ ನೀಡಲು ಹೇಗೆ ಹಣ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಆಡಳಿತ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕಮೀಷನ್ ಪಡೆಯುವುದನ್ನು ಕಣ್ಣಾರೆ ನೋಡಿರುವೆ. ಮಾಡಿರುವ ಸಾಲಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ರೂ. ಬಡ್ಡಿ ಕಟ್ಟಬೇಕು. ಬಿಜೆಪಿ ಕಾಂಗ್ರೆಸ್ ಮಾಡಿರುವ ಸಾಧನೆ ಸಾಲ ಹೊರತು ಬೇರೆಯಲ್ಲ. ಐದು ವರ್ಷದ ಸರ್ಕಾರ ಆಡಳಿತ ಮಾಡಲು ಅವಕಾಶ ನೀಡಬೇಕೆಂದು ಯಾತ್ರೆ ಹೊರಡುತ್ತಿರುವೆ ಎಂದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ರೈತರ ಸಾಲ ಮಾಡಬೇಡಿ ಅಂತಾನೆ. ಕೆಎಂಎಫ್ ಈ ಮಟ್ಟಕ್ಕೆ ಬೆಳೆಯಲು ರೇವಣ್ಣರ ಕೊಡುಗೆ ದೇವೇಗೌಡರ ಕುಟುಂಬದ ಪಾತ್ರ ದೊಡ್ಡದಿದೆ. ನಮ್ಮ ಕುಟುಂಬದವರ ಬಗ್ಗೆ ಮಾತನಾಡುವ ಬಗ್ಗೆ ಎಚ್ಚರವಿರಲಿ. ಜಯದೇವ ಆಸ್ಪತ್ರೆ ಇಂದು ಹೇಗಿದೆ ಇದಕ್ಕೆ ಕಾರಣ ದೇವೇಗೌಡರ ಕುಟುಂಬ ಎಂದರು.
ಕಳೆದ ಮೂರು ಚುನಾವಣೆಗಿಂತ ಈ ಬಾರಿ ಜೆಡಿಎಸ್ ಅಲೆ ಹೆಚ್ಚಾಗಿದೆ. ಜನ ಸೇರುತ್ತಾರೆ ಮತ ಹಾಕಲ್ಲ ಎನ್ನುತ್ತಿದ್ದರು ಈ ಬಾರಿ ಸಂಪೂರ್ಣ ಬೆಂಬಲ ನೀಡುತ್ತಾರೆ. ನಾನು ಒಂದು ವರ್ಷ ಮೊದಲೇ ಗೆಲ್ಲುವ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿರುವೆ. 125 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ. ಹೀಗಾಗಿ ಮೂರು ತಿಂಗಳ ಮೊದಲೇ ಸಂಘಟನೆ ಮಾಡುತ್ತಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post