ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಊಟದ ಮೆನವಿನಲ್ಲಿ ನಲ್ಲಿ ಮೂಳೆಯಿಲ್ಲ ಎಂಬ ಯಕಶ್ಚಿತ್ ಕಾರಣಕ್ಕಾಗಿ ವರ ಹಾಗೂ ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಿಜಾಮಾಬಾದ್ ಹಡುಗಿ ಹಾಗೂ ಜಗ್ತಿಯ ಹುಡುಗನಿಗೆ ಮದುವೆ ನಿಶ್ಚಯವಾಗಿದ್ದು, ಹುಡುಗಿಯ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು. ಈ ಕಾರ್ಯಕ್ರಮವನ್ನು ಹುಡುಗಿಯ ಮನೆಯವರು ಅದ್ದೂರಿಯಾಗಿ ಆಯೋಜಿಸಿದ್ದರು.

Also read: Three-day Hampi Utsav from Feb 2, 2024: In-charge Minister Zameer Ahmed Khan
ನಿಶ್ಚಿತಾರ್ಥದ ನಂತರ ಭರ್ಜರಿಯಾಗಿ ಮಾಂಸದ ಊಟಕ್ಕೆ ಸಿದ್ದತೆ ನಡೆದಿತ್ತು. ಊಟ ಆರಂಭವಾದ ನಂತರ ಅದರಲ್ಲಿ ನಲ್ಲಿ ಮೂಳೆ ಇಲ್ಲ ಎಂಬ ಕಾರಣಕ್ಕಾಗಿ ಹುಡುಗನ ಕಡೆಯ ಅತಿಥಿಗಳು ತಗಾದೆ ತೆಗೆದಿದ್ದಾರೆ.

ಎರಡೂ ಕಡೆ ಮಾತು ವಾಗ್ವಾದಕ್ಕೆ ತಿರುಗಿ, ಜಗಳ ತಾರಕ್ಕೆ ಏರಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ಕಡೆಯವರಿಗೆ ತಳಿ ಹೇಳಿ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post