ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವಂತೆಯೇ, ಈ ಬಾರಿ ಮೋದಿಯನ್ನು ಸೋಲಿಸದೇ ಇದ್ದರೆ, ಅವರೇ ಶಾಶ್ವತವಾಗಿ ದೇಶದ ಪ್ರಧಾನಿಯಾಗುವ ಅಪಾಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದೇಶದಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ ಪ್ರಜಾಪ್ರಭುತ್ವ ಅಳಿವಿನಂಚಿಗೆ ಬಂದು ನಿಂತಿದೆ. ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮಾದರಿಯಲ್ಲಿ ಆಡಳಿತ ನಡೆಯುತ್ತಿದ್ದು, ಮೋದಿ ಮತ್ತೆ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಒಂದು ವೇಳೆ ಮೋದಿಯನ್ನು ಈ ಬಾರಿ ಸೋಲಿಸದೇ, ಮತ್ತೆ ಅವರು ಪ್ರಧಾನಿಯಾದರೆ, ದೇಶದಲ್ಲಿ ಶಾಶ್ವತವಾಗಿ ಅವರೇ ಪ್ರಧಾನಿಯಾಗುತ್ತಾರೆ. ಆ ಮೂಲಕ ದೇಶದಲ್ಲಿ ಸರ್ವಾಧಿಕಾರತ್ವ ನೆಲೆಗೊಳ್ಳಲಿದೆ. ಹೀಗಾಗಿ ಮೋದಿಯನ್ನು ಸೋಲಿಸಲೇ ಬೇಕು ಎಂದು ಅವರು ಕರೆ ನೀಡಿದ್ದಾರೆ.
Discussion about this post