Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಸಮಾಜದ ಎಲ್ಲ ಸ್ಥರದಲ್ಲೂ ಬ್ರಾಹ್ಮಣರ ದಬ್ಬಾಳಿಕೆ ಉಂಟೇ? ಆರೋಪ ಮಾಡುವ ಮುನ್ನ ಒಮ್ಮೆ ಚಿಂತಿಸಿ

January 18, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಂದು ವಿಚಾರವನ್ನು ಹೇಗೆ ಬೇಕಾದರೂ ತಿರುಚಬಹುದು. ವಿದ್ಯೆ ಇದ್ದರಾಯ್ತು. ವಿದ್ಯೆ ಅಂದರೆ ಜ್ಞಾನ, knowledge. ಇದರಲ್ಲಿ main target ಬ್ರಾಹ್ಮಣರನ್ನೇ ಮಾಡುವುದು ವಿಷಾದನೀಯ.

ಶೂದ್ರರಿಗೆ ವಿದ್ಯೆ ಕಲಿಸಲಿಲ್ಲ ಬ್ರಾಹ್ಮಣರು ಎಂದು ಹೇಳುವುದಕ್ಕೆ ಮುಂಚೆ, ಶೂದ್ರರು ಯಾಕೆ ವಿದ್ಯೆಯಲ್ಲಿ ಆಸಕ್ತರಾಗಲಿಲ್ಲ? ಮಡಿವಾಳ ಮಾಚಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಕನಕದಾಸರು, ಇತ್ತೀಚೆಗಿನ ಕುವೆಂಪು ಹೇಗೆ ಕವಿಗಳಾದರು ಸ್ವಾಮೀ. ಇದಕ್ಕೂ ಪೂರ್ವದಲ್ಲಿ ವಾಲ್ಮೀಕಿ ಋಷಿಗಳು, ಸೂತ ಪುರಾಣಿಕರು ಹೇಗೆ ಬ್ರಹ್ಮತ್ವ ಪಡೆದರೂ? ವಿದ್ಯಾವಂತರಾಗಲಿಲ್ವೇ?

ಆಗಿನ ಕಾಲದಲ್ಲಿ ಶೂದ್ರನಿಗೆ ಪಾಠ ಹೇಳಲಿಲ್ಲ ನಿಜ. ಯಾಕೆಂದರೆ ಅವನಿಗೆ ಪದೋಚ್ಛರಣೆಯೇ ಬರುತ್ತಿರಲಿಲ್ಲ. ಈಗಲೂ ಅಂತಹ ಉದಾಹರಣೆ ಸಾಕಷ್ಟಿದೆ. ವಿಶ್ವೇಶ್ವರಯ್ಯ ಎನ್ನುವ ಬದಲು ವಿಶ್ವ ರಯ್ಯ, ಕಿತ್ತೂರ ರಾಣಿ ಜಯಮ್ಮ ಎಂದು ಒದರುವ ಶೂದ್ರರು ಇದ್ದಾರೆ. ಹಕಾರದ ಬದಲು ಅ ಕಾರ, ಳ, ಲ, ಶ ಉಚ್ಚಾರ ಇಲ್ಲದ ಪೀಠಾಧಿಪತಿಗಳೂ ಇದ್ದಾರೆ. ಇಂತವರನ್ನು ಪೀಠಾಧಿಪತಿಗಳನ್ನಾಗಿಸಿದ ಫಲವೇ ವೇದಿಕೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಧಮ್ಕಿ ಹಾಕುವ ವಿದ್ಯಾಮಾನ ಬಂದಿದೆ. ಇದಕ್ಕೇನು ಹೇಳ್ತೀರೀ? ಇದು ಬ್ರಾಹ್ಮಣರು ಹೇಳಿಕೊಟ್ಟದ್ದೋ? ಅದಕ್ಕೆ ಬ್ರಾಹ್ಮಣರು ಕಾರಣವೋ? ಹೋಗಲಿ ಶೂದ್ರರ ಹಳೇ ಹೆಸರುಗಳನ್ನೇ ನೋಡಿ. ಚೋಮ-ಸೋಮ, ಮಾಧವ-ಮಾದ ಎಂದು ಅಪಭ್ರಂಶ ಮಾಡಿ ಹೇಳುವವರಿಗೇ ಎದೆ ಸೀಳಿದರೂ ಎರಡಕ್ಷರ ಬರಲ್ಲ ಎಂದಿದ್ದು.

ಪ್ರತಿಯೊಬ್ಬನಲ್ಲೂ ನಾಲ್ಕು ವರ್ಣಗಳಿವೆ. ಜ್ಞಾನವೇ ಬ್ರಾಹ್ಮಣ, ರಕ್ಷಣೆ ಮಾಡುವ ಗುಣವೇ ಕ್ಷತ್ರಿಯ. ವ್ಯವಹಾರ ಚತುರತೆಯೇ ವೈಶ್ಯ. ಸರ್ವಾಂಗ ಉಪಯೋಗಿಸಿ ದುಡಿಯುವ ಕಾಯಕವೇ ಶೂದ್ರ. ಬ್ರಾಹ್ಮಣ ಎಂಬ ಶಬ್ದವನ್ನು ಅಪಾರ್ಥ ಮಾಡಿಕೊಂಡರೆ, ಮತ್ಸರದಿಂದ ನೋಡಿದರೆ ನಿಂದನೆ, ಅವಹೇಳನ ಮಾಡುವ ಗುಣಗಳು ಉತ್ಪತ್ತಿಯಾಗೋದು. ಮಾತು ಮಾತಿಗೆ ಬ್ರಾಹ್ಮಣ ಬ್ರಾಹ್ಮಣಾ ಎಂದು ಟೀಕೆ ಮಾಡುವಿರಲ್ವೇ ಆ ಶೂದ್ರಜ ಎಂದು ಹೇಳಿಕೊಂಡ ಭಗವಾನ ವಿದ್ಯೆ ಕಲಿತು ಪುರಾಣಗಳನ್ನೇ ನಿಂದನೆ ಮಾಡಲು ಶುರುಮಾಡಿದ. ಪುರಾಣ ಪುರುಷರನ್ನೇ ನಿಂದಿಸಿದ. ಇಂತಹ ವ್ಯಕ್ತಿಗಳಿಗೆ ಸರ್ವಾಂಗ ಉಪಯೋಗಿಸಿ ಜ್ಞಾನವಿಲ್ಲದ ಶೂದ್ರ ಕರ್ಮವೇ ಲೇಸು.

ಒಬ್ಬ ಮನುಷ್ಯನಲ್ಲಿ ಬ್ರಾಹ್ಮಣ ಕರ್ಮವೂ ಬೇಕು. ಶೂದ್ರ ಕರ್ಮಗಳು ಬೇಕು. ಕ್ಷತ್ರಿಯ ಕರ್ಮವೂ ಬೇಕು. ವೈಶ್ಯ ಕರ್ಮವೂ ಬೇಕು. ಇದರಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ಕೊಡುತ್ತಾನೋ ಅದು ಅವನಿಗೆ ಬಿಟ್ಟದ್ದು. ಅವನ ಆಯ್ಕೆ. ಆದರೆ ಶೂದ್ರ ಕರ್ಮವನ್ನೇ ಪ್ರಧಾನವಾಗಿರಿಸಿಕೊಂಡವನು ಬ್ರಾಹ್ಮಣ ಕರ್ಮ ಮಾಡಿದರೂ ಅದು ಸಫಲತೆಯನ್ನು ಕಾಣದು. ಹೇಗೆ ಒಬ್ಬ ಇತಿಹಾಸ ಪದವಿ ಪಡೆದು ಅರ್ಥಶಾಸ್ತ್ರ ಪಾಠ ಮಾಡಿದರೆ ಏನಾಗುತ್ತೋ ಹಾಗೆಯೇ, ಒಬ್ಬ ಬ್ರಾಹ್ಮಣ ಕರ್ಮವನ್ನೇ ಪ್ರಧಾನವಾಗಿರಿಸಿಕೊಂಡು ಕ್ಷತ್ರಿಯ ಕರ್ಮಕ್ಕಿಳಿದಂತಾದೀತು.

ಮಡಿವಂತಿಕೆಯು ಎಲ್ಲಾ ಚಾತುರ್ವರ್ಣಗಳಿಗೂ ಬೇಕು. ಆಯಾಯ ವರ್ಣಕ್ಕೆ ಸಂಬಂಧಿಸಿದ ಮಡಿವಂತಿಕೆ ಬೇಕು. ಮಡಿವಂತಿಕೆ ಎಂದರೆ ಅಸ್ಪೃಶ್ಯತೆ ಎಂದು ತಿಳಿಯಬಾರದು. ಮಡಿವಂತಿಕೆ ಎಂದರೆ ನಿಯಮ. ದೇವತಾ ಪೂಜೆಗೊಂದು ಮಡಿವಂತಿಕೆ, ರಕ್ಷಣಾ ವಿಚಾರಕ್ಕೊಂದು ಮಡಿವಂತಿಕೆ, ವ್ಯವಹಾರಕ್ಕೊಂದು ಮಡಿವಂತಿಕೆ, ಶೂದ್ರ ಕರ್ಮಕ್ಕೊಂದು ಅದರದ್ದೇ ಆದ ಮಡಿವಂತಿಕೆ ಇರುತ್ತದೆ. ಎಲ್ಲಾ ಮಡಿವಂತಿಕೆಗಳೊಳಗೆ ಅಹಂಕಾರ, ಮತ್ಸರ, ಮದ ತುಂಬಿದ್ದಾಗ ಇತರರನ್ನು ನಿಂದನೆ ಮಾಡುವ, ಹಿಂಸೆ ಮಾಡುವ, ಅವಹೇಳನ ಮಾಡುವ ದುರ್ಬುದ್ಧಿ ಶುರುವಾಗುತ್ತದೆ.

ಇಲ್ಲಿ ಎಲ್ಲಾ ಮನುಷ್ಯರೂ ಜನನದಲ್ಲಿ ಜಂತು ಸ್ವರೂಪವೇ. ಸಂಸ್ಕಾರ ಪಡೆಯುತ್ತಾ ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ ಆಗಬಹುದು. ಆದರೆ ಸಮಾಜದಲ್ಲಿ ಸಾಮಾನ್ಯವಾಗಿ ಬ್ರಾಹ್ಮಣನ ಮಗ ಬ್ರಾಹ್ಮಣ ಎಂದು ರೂಢಿಯಾಗಿದೆ. ಅಲ್ಲೂ ಬ್ರಹ್ಮ ಸಂಸ್ಕಾರ ದೊರೆಯದೇ ಹೋದಾಗ, ಪಾಲಿಸದೆ ಹೋದಾಗ ಬ್ರಾಹ್ಮಣ ಎನ್ನಲಾಗದು. ಬ್ರಾಹ್ಮಣ ಸಂಸ್ಕಾರ ಸ್ವಲ್ಪ ಕಷ್ಟ. ಉಪಾಸನೆ, ವೃತ ನಿಯಮ, ಅಧ್ಯಯನ ಇತ್ಯಾದಿ ಕಠಿಣ ಪರಿಶ್ರಮಗಳು ಬೇಕು.

ಕ್ಷತ್ರಿಯನಿಗೂ ಬೇಕು. ವೈಶ್ಯನಿಗೂ ಬೇಕು. ಆದರೆ ಶೂದ್ರನಿಗೆ ಕೈಕಾಲು ಘಟ್ಟಿ ಇರಬೇಕು. ಕಟ್ಟು ಹೊರೋದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಚಾಕಚಕ್ಯತೆ ಬೇಕಾಗುತ್ತದೆ. ಅದ್ಯಾವುದೂ ಸಾಧ್ಯವಾಗದೇ ಇದ್ದಾಗ ಭಿಕ್ಷಾಟನೆಯೇ ಉತ್ತಮ ಮಾರ್ಗ. ಅಲ್ಲೂ ಮಾನ ಮರ್ಯಾದೆಯ ಬಗ್ಗೆ ಯೋಚನೆ ಮಾಡಿದರೆ ಅವನಿಗೆ ಭಿಕ್ಷೆ ದುರ್ಲಭ. ಬೈಗಳನ್ನು ಕೇಳಲಾರೆ, ಅವಹೇಳನ ಕೇಳಲಾರೆ ಎಂದರೆ ಭಿಕ್ಷೆಯೂ ಸಿಗದು. ವೇದಾಧ್ಯಯನ ಬಹಳ ಕಷ್ಟ.

ನನ್ನಿಂದಾಗದು ಅದನ್ನು ಕಲಿಯಲು ಎಂದು ಸುಮ್ಮನೆ ಕುಳಿತರೆ ಆತ ಬ್ರಾಹ್ಮಣನೂ ಆಗಲಾರ. ಸಂಗ್ರಾಮ ಕಲೆಯನ್ನು ಕಲಿಯಲಾಗದವ, ಭೀತನಾದವ ಕ್ಷತ್ರಿಯನಾಗಲಾರ. ವ್ಯವಹಾರ ನಿಪುಣತೆ, ಆ ಲೆಕ್ಕಾಚಾರಗಳು ತಲೆಗೆ ಹತ್ತದಿದ್ದರೆ ಆತ ವೈಶ್ಯನಾಗುವುದೆಂತು? ಮೈ ಬಗ್ಗಿಸಿ, ಶ್ರಮ ಪಡದವನು ಶೂದ್ರನೂ ಆಗಲಾರ.

ಒಟ್ಟಿನಲ್ಲಿ ಯಾವ ಕರ್ಮಕ್ಕೂ ಅದರದ್ದೇ ಆದಂತಹ ಪಾಠ, ನಿಯಮಗಳು, ವಿಧಿ ವಿಧಾನಗಳು ಇದ್ದೇ ಇರುತ್ತದೆ. ಆಯ್ಕೆಯು ಅವರವರಿಗೆ ಬಿಟ್ಟ ವಿಚಾರ. ಎಲ್ಲಾ ವರ್ಣಗಳಿಗೂ ಭಕ್ತಿ ಶ್ರದ್ಧೆ ಇದ್ದಾಗ ಮಾತ್ರ ಆ ಕರ್ಮಗಳು ಸಫಲತೆಯನ್ನೂ ಕಾಣುತ್ತದೆ, ಸಮಾಜದಲ್ಲಿ ಕೀರ್ತಿಯೂ ಬರುತ್ತದೆ. ಹಾಗಾಗಿ ಬ್ರಾಹ್ಮಣ ಎಂಬ ಅರ್ಥ ತಿಳಿಯದೆ ನಿಂದನೆ ಮಾಡುವುದು ಮತ್ಸರಿಗಳ ಮೂರ್ಖರ ಕಾಯಕವಾಗುತ್ತದೆ. ಜನಿಸಿದ ಮಾನವನು ಹಂತ ಹಂತವಾಗಿ ಬ್ರಾಹ್ಮಣತ್ವಕ್ಕೆ ತಲುಪಿ ಮೋಕ್ಷ ಪಡೆಯಬೇಕು. ಲೇಖಕರು ಬ್ರಾಹ್ಮಣರ ನಿಂದನೆಗಾಗಿ ರಾಮಾಯಣದ ಶಂಭೂಕನ ಉಲ್ಲೇಖ ಮಾಡಿದ್ದರು. ಇದು ಅವರೊಳಗಿನ ದೌರ್ಭಲ್ಯತೆಯೇ ಅಲ್ಲದೆ ಅವರು ನೀಡಿದ ಪುಷ್ಟೀಕರಣವಾಗದು. ತಾನು ಗೋವು ತಿನ್ನಬೇಕೆಂಬ ಆಸೆಯಲ್ಲಿ ರಾಮನೂ ತಿಂದಿದ್ದ, ಕೃಷ್ಣನೂ ತಿಂದಿದ್ದ ಎಂದು ಹೇಳಿದಂತಾಗುತ್ತದೆ. ನಿನಗೆ ತಿನ್ನುವ ಚಪಲತೆ ಇದೆಯೋ? ತಿನ್ನು. ಯಾರು ಬೇಡವೆಂದರು? ಆದರೆ ಅವ ತಿಂದ, ಇವ ತಿಂದ ಎಂದು ಉಲ್ಲೇಖಿಸಬೇಡ.

ಶಂಭೂಕನೆಂಬ ಶೂದ್ರಜನ ತಪ್ಪಸ್ಸಿನಿಂದ ರಾಮ ರಾಜ್ಯದಲ್ಲಿ ಅಪಶಕುನಗಳು ಉದ್ಭವಿಸಿದವು. ಶಂಭೂಕನಿಗೆ ರಾಮನು ಅವನ ತಪಸ್ಸಿನ ಉದ್ದೇಶವನ್ನು ಕೇಳಿದಾಗ, ಶಂಭೂಕನು ತನ್ನ ಮೋಕ್ಷಕ್ಕಾಗಿ ಮಾಡುತ್ತಿದ್ದೇನೆ ಎನ್ನುತ್ತಾನೆ. ನಿನಗೆ ಮೋಕ್ಷವೊಂದೇ ಸಾಕು ಎಂದಿದ್ದರೆ ನಿನಗೆ ಮಡದಿ ಮಕ್ಕಳು ಯಾಕಯ್ಯಾ ಬೇಕಿತ್ತೂ? ಎಂದು ರಾಮನು ಆತನ ಶಿರಚ್ಛೇಧನ ಮಾಡಿದ್ದ. ಸಾಲ ಮಾಡಿ ಪೂಜೆ ಮಾಡು ಎಂದು ಪ್ರಾಜ್ಞರು ಹೇಳಿಲ್ಲ. ಮನೆಯವರನ್ನು ಉಪವಾಸ ಹಾಕಿ ತಪಸ್ಸನ್ನಾಚರಿಸಿ ಮೋಕ್ಷ ಪಡೆಯಬಹುದು ಎಂದು ಹೇಳಲಿಲ್ಲ. ನಿನ್ನ ನಿನ್ನ ಕರ್ಮಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಿದರೆ ಮೋಕ್ಷ ಸಿಗುತ್ತದೆಯೇ ಹೊರತು, ತಪಸ್ಸಿನಿಂದ ಸಿಗಲಾರದು. ತಪಸ್ಸಿನಿಂದ ಜ್ಞಾನವನ್ನು ಪಡೆಯಬೇಕು. ಆ ಜ್ಞಾನವನ್ನು ಸಮಾಜಕ್ಕೆ ಪ್ರಾಮಾಣಿಕವಾಗಿ ಅರ್ಪಣೆ ಮಾಡು. ಆಗಲೇ ನೀನು ಕೃತಾರ್ಥನಾಗಿ ಮೋಕ್ಷ ಪಡೆಯುತ್ತಿ ಎಂದು ಪ್ರಾಜ್ಞರು ತಿಳಿಸಿದರು. ಶ್ರಮ ಇಲ್ಲದೆ ಮೋಕ್ಷವಿಲ್ಲ.

ಎಲ್ಲರೂ ಅವರವರ ಕರ್ಮ ಬಿಟ್ಟು ತಪಸ್ಸು ಮಾಡುತ್ತಾ ಕುಳಿತು ಮೋಕ್ಷಕ್ಕೆ ಹೋದರೆ ಯಾರಿಗೆ ಬೇಕು ಈ ಭೂಮಿ. ರಾಮನೂ ಅದನ್ನು ಮಾಡಬಹುದಿತ್ತು. ಕೃಷ್ಣನೂ ಮಾಡಬಹುದಿತ್ತು. ಈ ಬ್ರಾಹ್ಮಣ ನಿಂದನೆ ಮಾಡಿದವನೂ ಮಾಡಬಹುದಲ್ಲಾ. ಯಾರಿಗೆ ಬೇಕು ಜೀವನದ ಜಂಜಾಟ? ಹಾಗೆಲ್ಲ ಮೋಕ್ಷ ಸಿಗುವುದೂ ಇಲ್ಲ. ಮೋಕ್ಷಕ್ಕೂ ನಿಯಮವಿದೆ. ನೀನು ಪಾಲಿಸಿಕೊಂಡು ಬಂದ ಕರ್ಮವನ್ನು ಭಕ್ತಿ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಭಗವಂತನಿಗೆ ಅರ್ಪಿಸಿ ಕೃತಾರ್ಥನಾಗು. ಆಗ ಮೋಕ್ಷ ಮಾರ್ಗವು ಸುಗಮ ಎಂದು ಸಕಲ ಧರ್ಮ ಗ್ರಂಥಗಳೂ ಹೇಳಿವೆ. ಮೋಕ್ಷಕ್ಕೆ ಬ್ರಾಹ್ಮಣರೊಬ್ಬರೇ ಅರ್ಹವಲ್ಲ. ಸಕಲ ಜಾತಿಯ, ಸಕಲ ವರ್ಣಗಳವರೂ ಭಕ್ತಿಶ್ರದ್ದೆಯಿಂದ ಪ್ರಾಮಾಣಿಕವಾಗಿ ಕರ್ಮ ಮಾಡಿದರೆ ಎಲ್ಲರೂ ಅರ್ಹರೆ. ಮೋಕ್ಷಕ್ಕೆ ಯಾವತ್ತೂ ಯಾರಿಗೂ patent ಇಲ್ಲ. ಭಕ್ತಿ ಶ್ರದ್ಧೆ ಪ್ರಾಮಾಣಿಕತೆಯೇ ಅದರ ಅರ್ಹತೆ ಎಂಬುದನ್ನು ನೆನಪಿಡಿ.


Get in Touch With Us info@kalpa.news Whatsapp: 9481252093

Tags: AstrologerAttack on BrahminsBrahminCaste SystemKannada News WebsiteKshatriyaKuvempuLord Sri RamaMadara ChennayyaMokshaPrakash Ammannayaಕುವೆಂಪುಕ್ಷತ್ರಿಯಪ್ರಕಾಶ್ ಅಮ್ಮಣ್ಣಾಯಬ್ರಾಹ್ಮಣಬ್ರಾಹ್ಮಣ ನಿಂದನೆಮೋಕ್ಷರಾಮಾಯಣವೈಶ್ಯಶೂದ್ರ
Previous Post

ದೇಶ ಸೇವೆಯ ಕನಸ ಹೊತ್ತಿರುವ 5 ವರ್ಷದ ಈ ಬಾಲಕನ ಪ್ರತಿಭೆಗೆ ರಾಷ್ಟ್ರಾಧ್ಯಕ್ಷರೇ ಫಿದಾ

Next Post

ನಿಮ್ಮ ಮಗುವಿನ ಆರೋಗ್ಯಕ್ಕಾಗಿ ನಾಳೆ ಮರೆಯದೇ ಪೋಲಿಯೋ ಹಾಕಿಸಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Image Courtesy: Internet

ನಿಮ್ಮ ಮಗುವಿನ ಆರೋಗ್ಯಕ್ಕಾಗಿ ನಾಳೆ ಮರೆಯದೇ ಪೋಲಿಯೋ ಹಾಕಿಸಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!