Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಯಾವ ಕಾಯಿಲೆಯಿಂದ ಸತ್ತರೂ ಕೋವಿಡ್ ಎಂದು ಘೋಷಿಸುವುದು ನ್ಯಾಯವೇ?

ಹೆಣ ಇಟ್ಟುಕೊಂಡು ಹಣ ದೋಚುವುದು ಮಾನವೀಯತೆಯೇ?

August 14, 2020
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಜಗತ್ತನ್ನು ಆವರಿಸಿಕೊಂಡ ಜಾಡ್ಯದಿಂದಾಗಿ ಮಾರ್ಚ್ ಮೂರನೆಯ ವಾರದಿಂದ ದೇಶವೇ ಸ್ತಬ್ಧಗೊಂಡಿದೆ. ದುಡಿಯುವ ಕೈಗಳು ಕೆಲಸವಿಲ್ಲದೆ ಜೋತು ಬಿದ್ದಿವೆ. ಮನೆಮಂದಿಯೆಲ್ಲ ಅಕ್ಷರಶಃ ಗೃಹ ಬಂಧನದಲ್ಲಿದ್ದಾರೆ. ದಿನಗೂಲಿ ಕಾರ್ಮಿಕರು ದುಡಿಯುವ ನಿರ್ಮಾಣ ಕ್ಷೇತ್ರ ನೆಲ ಕಚ್ಚಿದೆ. ಕಡಿಮೆ ಮಾಸಿಕ ಸಂಬಳಕ್ಕೆ ದುಡಿಯುತ್ತಿದ್ದವರ ಸ್ಥಿತಿ ಶೋಚನೀಯವಾಗಿದೆ. ಆಹಾರ ಪೂರೈಕೆ/ಆದರಾಥಿತ್ಯದ ಕ್ಷೇತ್ರಗಳಾದ ಹೋಟೆಲ್, ವಸತಿಗೃಹಗಳ ಪರಿಸ್ಥಿತಿ ದುಸ್ಥಿತಿಗೆ ತಲುಪಿವೆ. ಸರಕಾರಿ ಉದ್ಯೋಗದಲ್ಲಿದ್ದವರನ್ನು ಹೊರತು ಪಡಿಸಿದರೆ ಪ್ರಜೆಗಳು ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದಾರೆ. ಮೂರೊತ್ತಿನ ತುತ್ತು ಈಗ ಒಪ್ಪೊತ್ತಿಗೆ ಬಂದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಿತ್ಯ ಏಕಾದಶಿ ಆಚರಣೆ ಮಾಡಬೇಕಾದೀತು. ಮದುವೆಗೆ/ಮರಣಕ್ಕೆ ನಿಗದಿ ಪಡಿಸಿದಷ್ಟೇ ಜನರಿರಬೇಕು. ಆದರೂ ಕೊರೋನದ ಯಾವುದೇ ಭಯವಿಲ್ಲದೆ ಆರ್ಥಿಕ ಸಂಸ್ಥೆಗಳಾದ ಬ್ಯಾಂಕುಗಳು, ಕಂದಾಯ ಪಾವತಿ/ತೆರಿಗೆ ಪಾವತಿ/ವಿದ್ಯುತ್ ಶುಲ್ಕ ಪಾವತಿ ಮುಂತಾದ ಸರಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶಾಲೆ, ಕಾಲೇಜುಗಳು ಆರಂಭವಾಗಿಲ್ಲ. ಶುಲ್ಕ ವಸೂಲಾತಿ ಭರದಿಂದ ಸಾಗುತ್ತಿವೆ.

“ಜಾತಸ್ಯ ಮರಣಂ ಧ್ರುವಂ” ಜನಿಸೆದೆಲ್ಲವೂ ಮರಣಿಸಲು. ಕೊರೋನ ಕಾಯಿಲೆಯಿಂದ ಬದುಕಿ ಬಂದವರೂ ಇದ್ದಾರೆ. ಮಾರ್ಚ್ ತಿಂಗಳಿಂದ ಅಗಸ್ಟ್ ಮೊದಲ ವಾರದ ಈವರೆಗೆ ಬೇರೆ ಬೇರೆ ಕಾಯಿಲೆಗಳಿಂದ ಸತ್ತವರ ಸಂಖ್ಯೆ ಕಡಿಮೆಯೇನಲ್ಲ. ಸರಕಾರ ಕೊರೋನದಿಂದ ಸತ್ತವರ ಮನೆಯವರಿಗೆ ತಲಾ ಐದು ಲಕ್ಷ ರೂಪಾಯಿ ಕೊಡುತ್ತದೆ ಎಂದು ಘೋಷಿಸಿಲ್ಲ. ಆದ್ದರಿಂದ ಸತ್ತವರ ಮನೆಯವರೂ ವೈದ್ಯರಲ್ಲಿ/ಪ್ರಯೋಗಾಲಯದವರಲ್ಲಿ  “ಕೊರೋನ ಸಾವು” ಎಂದು ಘೋಷಿಸಿ ಎಂದು ದುಂಬಾಲು ಬೀಳುವ ಪ್ರಮೇಯವೇ ಇಲ್ಲ. ಹಾಗಿರುವಾಗ ವೃದ್ಧಾಪ್ಯ/ಹೃದಯಾಘಾತ/ಮೂತ್ರಪಿಂಡ ವೈಪಲ್ಯ/ಡೆಂಗ್ಯು ಜ್ವರ ಅಥವಾ ಇನ್ನಾವುದೇ ಕಾಯಿಲೆಯಿಂದ ಸತ್ತರೂ ಶವ ಪರೀಕ್ಷೆ ಮಾಡುವ ಕ್ರಮವಿತ್ತು. ಈಗ ಕೊರೋನ ಪರೀಕ್ಷೆ ಮಾಡುವ ನಿಯಮ ಜಾರಿಗೆ ಬಂದಿದೆಯಂತೆ. ಇದು ಎಷ್ಟು ಸರಿ ತಪ್ಪು ಎನ್ನುವುದಕ್ಕಿಂತ ಮಾಡಿದ ಪರೀಕ್ಷೆಗಳ ಫಲಿತಾಂಶ ನೂರು ಪ್ರತಿಶತ “ಕೊರೋನ ಪಾಸಿಟಿವ್” ಆಗಿ ಹೊರ ಬರಲು ಕಾರಣ ಏನು? ಸರಕಾರಿ ಆಸ್ಪತ್ರೆಯವರಿಗೆ ಕೊರೋನ ರೋಗಿಗಳ ಮಂಡೆ ಲೆಕ್ಕದಲ್ಲಿ ಹಣ ನೀಡುತ್ತಿರುವುದು ಕಾರಣ ಎಂದು ಪೆದ್ದು ಮಂಡೆಯ ಪ್ರಜೆಗಳಿಗೂ ತಿಳಿಯದೇ ಇರುತ್ತದೆಯೇ?

ಮುನಿರ್ ಕಾಟಿಪಳ್ಯ ಎಂಬವರು ಸಾಮಾಜಿಕ ಕಳಕಳಿಯೊಂದಿಗೆ “ಮಂಗಳೂರಿನ ಕೊರೋನ‌ ಕತೆಗಳು” ಎಂಬ ತಲೆಬರಹದಡಿಯಲ್ಲಿ ಉದಾಹರಣೆಯೊಂದಿಗೆ ಕೆಲವು ಮಾಹಿತಿಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಬಡವರಾಗಿದ್ದು, ಕುಟುಂಬದ ಏಕೈಕ ಆಧಾರವಾಗಿದ್ದ ಕೇವಲ ಐವತ್ತು ವರ್ಷದ ಪ್ರಾಯದ ಸಾಲಿಯಾನ್ ಅವರ ಮರಣ ಮನೆ ಮಂದಿಗೆ ಸಿಡಿಲು ಬಡಿದ ಅನುಭವ ತಂದಿದೆ. ಬದುಕಿ ಬರಬಹುದೆಂಬ ಒಂದೇ ಕಾರಣಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ನಂತರ ಒಂದು ಆಸ್ಪತ್ರೆಯಲ್ಲಿ ಸೇರಿಸುವ ಮೊದಲೇ ಮೃತಪಟ್ಟಿದ್ದಾರೆ. ಆದರೂ ಆಸ್ಪತ್ರೆ ಹೆಣವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಿಲ್ಲ. ಅವರ ಕ್ರಮದಂತೆ ಶವ ಸಂಸ್ಕಾರ ಮಾಡುವಂತಿಲ್ಲ. ಕೊರೋನ ಪರೀಕ್ಷೆ ಮಾಡಬೇಕು. ಅದಕ್ಕೆ ಹಣಕಟ್ಟಿ ಕಾಯಬೇಕು. ಫಲಿತಾಂಶ ಮೊದಲೇ ಗೊತ್ತಿರುವಂತೆ ಕೊರೋನ ಪಾಸಿಟಿವ್ ಬರುತ್ತದೆ.

ನಂತರ ಹೆಣ ಇಟ್ಟುಕೊಂಡು ಹಣ ಮಾಡುವ ವ್ಯವಹಾರ ಆರಂಭ. ಒಂದು /ಎರಡು/ಮೂರು ದಿನ ಕಾಯಬೇಕು. ಏನನ್ನು ಕಾಯುವುದು? ಶವ ನಮ್ಮ ವಶಕ್ಕೆ ಕೊಡುವುದಿಲ್ಲ. (ಆಸ್ಪತ್ರೆಯವರು ನಾಲ್ಕಾರು ಶವಗಳು ಒಟ್ಟಾಗಲಿ ಎಂದು ಕಾಯುತ್ತರೋ ಏನೋ ಯಾರಿಗೆ ಗೊತ್ತು) ನಂತರ ಶವ ಸಾಗಿಸುವ ವಾಹನದ ಬಾಡಿಗೆ, ಚಾಲಕನ ಶುಲ್ಕ (ಯಾವ ರೂಪದಲ್ಲಿ ಯಾರಿಗೆ ಗೊತ್ತು) ಮೆಡಿಕಲ್ ಕಿಟ್ ಗಳಿಗಾಗಿ ಹಣ, ಅದಕ್ಕೆ ಹಣ, ಇದಕ್ಕೆ ಹಣ, (ಒಳಗೆ ಮಲಗಿರುವ ಹೆಣವೊಂದನ್ನು ಬಿಟ್ಟು) ಎಲ್ಲದಕ್ಕೂ ಹಣ ಕಟ್ಟಿದರೂ ಹೆಣ ನಮಗೆ ಕೊಡುವುದಿಲ್ಲ. ಅವರೇ ಸಂಸ್ಕಾರ ಮಾಡುತ್ತಾರೆ. (ಹೇಗೆ ಸಂಸ್ಕಾರ ಮಾಡುತ್ತಾರೆಂಬುದು ಅವರ ಸಂಸ್ಕಾರಕ್ಕೆ ಬಿಟ್ಟದ್ದು) ಸುತ್ತಿ, ಮುಚ್ಚಿರುವ ಶವವನ್ನು ಮನೆಯವರು ಬಿಚ್ಚಿ ನೋಡಿ ಹೆಣ ನಮ್ಮವರದ್ದೇ ಎಂದು ಖಾತರಿ ಪಡಿಸುವಂತಿಲ್ಲ. ಹತ್ತಿರ ಹೋಗುವಂತಿಲ್ಲ. ಶವಕ್ಕೆ ಸ್ನಾನ ಮಾಡಿಸುವಂತಿಲ್ಲ. ಬಾಯಿಗೆ ನೀರು ಬಿಡುವಂತಿಲ್ಲ. ಹೆಗಲು ಕೊಡುವಂತಿಲ್ಲ. ಅವರವರ ಧರ್ಮಕ್ಕೆ ಅನುಗುಣವಾಗಿ ಸಂಸ್ಕಾರ ಮಾಡುವಂತಿಲ್ಲ. ಹತ್ತಿರ ನಿಲ್ಲುವಂತಿಲ್ಲ. ಆದರೆ ಭಾರತೀಯರಾದ ನಮ್ಮ ಭಾವನೆಗಳೊಂದಿಗೆ ಆಟ ಆಡುವ ಯಾವ ಕಿಂಚಿತ್ ಕಾರಣಗಳನ್ನು ಆಸ್ಪತ್ರೆಯವರು ಬಿಟ್ಟು ಕೊಡುತ್ತಿಲ್ಲ. ಸರಕಾರ/ಜಿಲ್ಲಾಡಳಿತ ಕೊರೋನ ರೋಗಿಗಳಿಗೆ ಎಲ್ಲವೂ ಉಚಿತ ಎಂದು ಘೋಷಿಸಿದ್ದರೂ ಹೆಣ ಇಟ್ಟುಕೊಂಡು ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಜ್ವರದ ಮೇಲೆ ಬರೆ ಎಳೆದಂತೆ ಅಲ್ಲವೇ? ಸಂಬಂಧಪಟ್ಟವರು ಉತ್ತರಿಸಬೇಕು.

ಯಾರದೇ ಸಾವು ಎಂಥವರನ್ನಾದರೂ ದುಃಖಕ್ಕೀಡಾಗಿಸುತ್ತದೆ. ಅದರಲ್ಲೂ ಮೃತಪಟ್ಟವರ ಬಂಧುಗಳ ದುಃಖವನ್ನು ಶಬ್ದಗಳಲ್ಲಿ ಹೇಳುವಂತಿಲ್ಲ. ಆದರೂ ಗಟ್ಟಿ ಮನಸ್ಸು ಮಾಡಿ, ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು. ನಾವು ನೋಡುವಂತಿಲ್ಲ. ಮುಟ್ಟುವಂತಿಲ್ಲ. ಭಾಗವಹಿಸುವಂತಿಲ್ಲ, ಗುಳಿ ತೊಡುವಂತಿಲ್ಲ. ಕಾಟ ಗೂರುವಂತಿಲ್ಲ. ನೀರು ಬಿಡುವಂತಿಲ್ಲ. ಶವ ಸಂಸ್ಕಾರ ಮಾಡುವಂತಿಲ್ಲ. ಈ ಎಲ್ಲ ‘ಇಲ್ಲ’ಗಳಿಗೆ ನಮ್ಮಲ್ಲಿ ‘ಇಲ್ಲದ’ ಹಣ ಏಕೆ ಖರ್ಚು ಮಾಡಬೇಕು? ಎರಡು ಮೂರು ದಿನ ಆಸ್ಪತ್ರೆಯಲ್ಲಿ ಅನ್ನ ನೀರುಬಿಟ್ಟು ಏಕೆ ಕಾಯಬೇಕು? ಕಂಡವರ ಕಾಲಿಡಿದು ಏಕೆ ಗೋಗರೆಯಬೇಕು? ಸತ್ತವರು ಬದುಕಿದ್ದಾಗ ತನ್ನ ಶವವನ್ನು ಪ್ರಯೋಗಗಳಿಗಾಗಿ ಆಸ್ಪತ್ರೆಗೆ ದಾನ ನೀಡಲು ಹೇಳಿದ್ದಾರೆಂದು ಭಾವಿಸಿ ಅಥವಾ ನಾವೇ ದಾನ ನೀಡುತ್ತಿದ್ದೇವೆ ಎಂದು ಮನೆಯವರೆಲ್ಲ ಕೂಡಿ ನಿರ್ಧಾರ ತೆಗೆದುಕೊಳ್ಳಬೇಕು. ಪಾಸಿಟಿವ್ ರಿಪೋರ್ಟ್ ಬಂದ ಕೂಡಲೇ ಆಸ್ಪತ್ರೆಯವರಲ್ಲಿ ಹೇಳಿ ಮನೆಗೆ ಬಂದು ಸತ್ತವರ ಪ್ರೀತ್ಯಾರ್ಥವಾಗಿ ನಡೆಸುವ ಮುಂದಿನ ಕ್ರಿಯೆಗಳಿಗೆ ಅಣಿಯಾಗಬೇಕು. ಹಿಂದೂಗಳಾದರೆ ಅಕ್ಕಿ ಹಿಟ್ಟಿನಿಂದ ಬೊಂಬೆ ತಯಾರಿಸಿ ಕ್ರಮಬದ್ದವಾಗಿ ಶವ ದಹನಾದಿ ಕಾರ್ಯಗಳನ್ನು ಮಾಡಬಹುದು. ಒಂದೆರಡು ಸಲ ಹೀಗೆ ಮಾಡಿದರೆ ಆಸ್ಪತ್ರೆಯವರು ಹೆಣ ಇಟ್ಟುಕೊಂಡು ಹಣಮಾಡುವ ವ್ಯಾಪಾರದಾಟ ನಿಲ್ಲಲೂ ಬಹುದು.

ಆರೋಗ್ಯ ಇಲಾಖೆಯವರು ಬಂದು ಆರೋಗ್ಯ ಪರೀಕ್ಷೆ ಮಾಡಿದಾಗಲೂ ಆರೋಗ್ಯವಂತ ಜನರ ಫಲಿತಾಂಶವೂ ಪಾಸಿಟಿವ್ ಬರುತ್ತದೆ. ಆಗ ಇಲಾಖೆಯವರು ಕರೆದುಕೊಂಡು ಹೋಗುವಾಗ ಅಂಬ್ಯುಲನ್ಸ್ ನೊಂದಿಗೆ ಅವರ ಭಾವಚಿತ್ರ ತೆಗೆದುಕೊಳ್ಳಬೇಕು. ಅವರ ಹೆಸರು, ಮೊಬೈಲ್ ಸಂಖ್ಯೆ ಪಡೆದುಕೊಳ್ಳಬೇಕು. ರೋಗಿಯು ಗುಣಮುಖನಾದರೆ ಅವರೇ ಮನೆ ತಲುಪಿಸಬೇಕು.

ಒಂದು ವೇಳೆ ರೋಗಿಯು ಸತ್ತರೆ ವಾರಸುದಾರರು ಹೇಗೂ ಅಂತಿಮ ದರ್ಶನ ಪಡೆಯುವಂತಿಲ್ಲ. ಅವರೇ ಏನಾದರೂ ಮಾಡಿಕೊಳ್ಳಲಿ. ಆಗ ರೋಗಿಯ ಕಡೆಯವರಿಂದ ಹಣ ದೋಚುವುದು ನಿಲ್ಲುತ್ತದೆ. ಹೀಗೆ ಮಾಡುವುದರಿಂದ ಪಾಸಿಟಿವ್ ಫಲಿತಾಂಶಗಳ ಪ್ರಮಾಣ ಕಡಿಮೆಯಾಗಬಹುದು. ಔಷಧದ ಅಂಗಡಿಗಳಲ್ಲಿ ಶೀತ, ಜ್ವರ, ನೆಗಡಿ, ಕೆಮ್ಮುಗಳಿಗೆ ಹಿಂದಿನಂತೆ ಔಷಧಿ ದೊರಕಬಹುದು.

ಕೊರೋನದ ವೈಚಿತ್ರ್ಯ ಎಷ್ಟೆಂದರೆ; ಸಮಾಜದ ಗಣ್ಯ, ಪ್ರತಿಷ್ಠಿತ ಹಾಗೂ ರಾಜಕಾರಣಿಗಳು ಸತ್ತರೆ ಅವರ ಹೆಣ ವಾರಸುದಾರರಿಗೆ ದೊರೆಯುತ್ತದೆ. ಅವರವರ ಧರ್ಮಕ್ಕನುಗುಣವಾಗಿ ಶವ ಸಂಸ್ಕಾರವೂ ನಡೆಯುತ್ತದೆ. ಸಾಮಾನ್ಯ ಜನರು ಸತ್ತರೆ ಸರಕಾರದಿಂದ ಹಣ ದೋಚುವ ಉದ್ದೇಶದಿಂದ ಎಲ್ಲವೂ ಅಯೋಮಯ. ಆದ್ದರಿಂದ ನಾವು ಕೂಡ ಭಾವನಾತ್ಮಕವಾಗಿ ವರ್ತಿಸದೇ ಅವರ ಎಣ್ಣೆಯನ್ನು ಅವರ ಕಣ್ಣಿಗೆ ಚೆಲ್ಲಬೇಕು.


Get In Touch With Us info@kalpa.news Whatsapp: 9481252093

Tags: Corona PositiveCorona VirusCovid19Kannada News WebsiteLatest News KannadaUday Shetty Panjimaruಆರೋಗ್ಯ ಇಲಾಖೆಕೊರೋನಾ ವೈರಸ್ಕೋವಿಡ್19ಜಾತಸ್ಯ ಮರಣಂ ಧ್ರುವಂಮಂಗಳೂರಿನ ಕೊರೋನ‌ ಕತೆಗಳು
Previous Post

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ

Next Post

ಭದ್ರಾವತಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಬಾಳೆಬೈಲು-ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ

July 28, 2025

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!