ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರೀತಿ ಮಾತಿಗೆ ಸೋತು ಬಿಡುವ ಮಗು ಮನಸು ನಂದು.. Such an emotional idiot ನಾನು… ಸಾಹಿತ್ಯ ಯಾರ್ಯಾರನ್ನೋ ಕಟ್ಟಿ ಹಾಕುತ್ತೆ.. ಯಾವ್ಯಾವುದೋ ಬಾಂಧವ್ಯಗಳನ್ನು ಬೆಸೆಯುತ್ತೆ.. ಅದಕ್ಕಿರೋ ಶಕ್ತಿಯೇ ಅಂಥದ್ದು.. ದೇವದಾಸರು ಅಪ್ಪ ಮಗಳ ವಾತ್ಸಲ್ಯದ ಹಾಡೊಂದನ್ನು ನನಗಾಗಿ ಕಳುಹಿಸಿ ಕೊಟ್ಟಾಗಲೇ ಖುಷಿ ಪಟ್ಟಿದ್ದೆ. ಇನ್ನು ಕೆಲವು ದಿನಗಳ ಬಳಿಕ ಅದೇ ಹಾಡು ಅವರದೇ ಪ್ರಸಂಗದಲ್ಲಿ ಪಾತ್ರವಾಗಿ ಮೂಡಿ ಬಂದಾಗ ಆ ವ್ಯಕ್ತಿ ಮತ್ತಷ್ಟು ಇಷ್ಟವಾಗ್ತಾರೆ…
ಒಬ್ಬ ಕಥೆಗಾರನ ಕಥೆಯ ಪಾತ್ರವಾಗ್ತೀವಿ.. ಕಲ್ಪನೆಯ ವಸ್ತುವಾಗ್ತೀವಿ, ಜೀವನದ ಆದ್ಯತೆಯಾಗ್ತೀವಿ ಅಂದ್ರೆ ಅದೊಂದು ಸುಂದರ ಅನುಭೂತಿ ಅಲ್ವೇ?? ಸಾಲಿಗ್ರಾಮ್ ಮೇಳದಲ್ಲಿ ಪ್ರದರ್ಶನ ಕಾಣುತ್ತಿರುವ ಚಂದ್ರಮುಖಿ ಪ್ರಸಂಗ ನೋಡಿ ಬಂದ ಬಳಿಕ ಕೇಳಿ ಬಂದಿದ್ದು ಥರಥರದ ಅಭಿಪ್ರಾಯಗಳು. ಕೆಲವರು ಈಶ್ವರ ಮಂಗಲರ ಪ್ರಯೋಗಗಳನ್ನು ಪುರಸ್ಕರಿಸುವವರಾದರೆ, ಟೀಕಿಸುವ ಮತ್ತೊಂದು ವರ್ಗ.
ಅಫ್ ಕೋರ್ಸ್ ಪ್ರಸಂಗದ ಹೈಲೈಟೇ ಸಿನಿಮಾ ದಾಟಿಯ ಹಾಡುಗಳು.
ಕಣ್ಣಂಚಿನ ಈ ನೋಟದಿ, ಏನೇನೋ…. ಶೃಂಗಾರದ ಹಾಡು
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ
ಹಾಸ್ಯ ದೃಶ್ಯಗಳಲ್ಲಿ ಕಚಗುಳಿ ಇಡೋಕೆ ಜುಮು ಜುಮ್ು ಅಂತೈತಿ…. ಮೊದಲಾದ ಹಾಡುಗಳು
ಮೂಡುಬೆಳ್ಳೆಯವರ ಕಂಠಸಿರಿಯಲ್ಲಿ ಕಮಾಲ್ ಮಾಡಿವೆ.. ಅಲ್ಲದೆ ಅಂಗೈ ನೆಟ್ ಲೋಕದಲ್ಲಿ ವೈರಲ್ ಆಗಿವೆ.
ಇನ್ನು ಕಥೆಯಂತೂ ಜೊಳ್ಳಲ್ಲ. ಕಲಾವಿದರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿವೇಕಾನಂದರ ಬೋಧನೆಯ ಸಾಮಾಜಿಕ ಮೌಲ್ಯವೊಂದರ ಎಳೆ ಹಿಡಿದು ಹೊರಟ ಪ್ರಸಂಗ ಅನೇಕ ತಿರುವುಗಳನ್ನು ಕಾಣುತ್ತಂತೆ. ಅಷ್ಟೇ ಕಥೆ ಪಡೆದುಕೊಳ್ಳುವ ವೇಗವೂ ಪ್ರೇಕ್ಷಕರನ್ನು ಬೋರ್ ಹೊಡೆಸುವುದಿಲ್ಲ ಅಂತ ಮಾತುಗಳು ಕೇಳಿ ಬರ್ತಿವೆ.
ಈಶ್ವರ ಮಂಗಲರ ಪ್ರಸಂಗಗಳಲ್ಲಿ ಒಂದು ಅಂಶ ನೀವು ಗಮನಿಸಿರ್ಬೋದು. ಅದು ಅವರ ಪ್ರಸಂಗಗಳಿಗೆ ಅವರಿಡೋ ಶಿರೋನಾಮೆ. ಹೆಚ್ಚಾಗಿ ಅವಳಿ ನಾಮಗಳು. ಉದಾಹರಣೆಗೆ, ಶಿವಾನಿ-ಭವಾನಿ, ಈಶ್ವರಿ-ಪರಮೇಶ್ವರಿ, ಈಗ ಚಂದ್ರಮುಖಿ- ಸೂರ್ಯಸಖಿ ಬಿಡುಗಡೆಗೆ ತಯಾರಾಗಿರುವ ಮುಕುಂದ-ಮುರಾರಿ… ಇದು ದೇವದಾಸರ ಯೂನಿಕ್ ಸಿಗ್ನೇಚರ್ ಸ್ಟೈಲ್…
ಗಾಳಿಯಲ್ಲಿ ಬಂದ ಸುದ್ದಿ
ದೇವದಾಸರನ್ನ ಯಾರೋ ಕೆಣಕಿದರಂತೆ, ಇದೇನು ಪ್ರಸಂಗದಲ್ಲಿ ಸಿನಿಮಾ ದಾಟಿಯ ಹಾಡುಗಳನ್ನು ಬಳಸಿಕೊಂಡಿದ್ದೀರಿ. ಸಾಂಪ್ರದಾಯಿಕತೆ ಇಲ್ಲ ಅಂತ. ಪಿತ್ತ ನೆತ್ತಿಗೇರಿದಗರೂ ಸಮಾಧಾನದಿಂದ ದೇವದಾಸರು ಉತ್ತರಿಸಿದ್ದು ಹೀಗೆ. ಗಂಜಿ ಶ್ರೇಷ್ಠ ಅಲ್ವ. ಮತ್ತೆ ನೀವು ಯಾಕೆ ದಿನಾ ಯಾಕೆ ಗಂಜೀನೇ ಉಣ್ಣಲ್ಲ? ಬಿರಿಯಾನಿ ಚಿಕನ್ ಅಂತ ಛೇಂಜಸ್ ಕೇಳಲ್ವ. ಎದುರಿಗಿದ್ದಾತ ಗಪ್ ಚುಪ್.
ಏನೇ ಇರಲಿ, ಒಂದು ವರ್ಗ ಪೌರಾಣಿಕ ಆಖ್ಯಾನಗಳನ್ನಿಷ್ಟಪಟ್ರೆ ಮತ್ತೂ ಕೆಲವರಿಗೆ ಇಂತಹ ವೆರೈಟಿಗಳೂ ಬೇಕಾಗುತ್ವೆ. ಜನರ ಅಭಿರುಚಿಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನ. ಇದರಿಂದ ಯಕ್ಷಗಾನದ ಅಂದಗೆಡದಿದ್ದರಾಯ್ತು.
ಈಶ್ವರ ಮಂಗಲ ಗೆದ್ದಿದ್ದಾರೆ. ಅವರಿಗೆ ಗೆಲುವು ಹೊಸದಲ್ಲ. ಆದ್ರೆ ಅವರ ಪರಿಚಯ ಆದ ಬಳಿಕ ನಾನು ಕಂಡ ಅವರ ಮೊದಲ ಗೆಲುವು. ಆ ಗೆಲುವನ್ನು ನಾನು ಸಂಭ್ರಮಿಸ್ತೇನೆ.
ಈಶ್ವರ ಮಂಗಲರ ಗೆಲುವನ್ನು ರಂಗಸ್ಥಳದಲ್ಲಿ ನೋಡಬೇಕಿದೆ. ಇನ್ನು ಪ್ರಸಂಗ ವಿಮರ್ಶೆ ಮಾಡಲಾರೆ ಅವರ ಮೇಲಿನ ಪ್ರೀತಿ ಅಭಿಮಾನ ಕಟ್ಟಿ ಹಾಕಿದೆ. ಅವರು ಕಳುಹಿಸಿದ ಆ ಹಾಡನ್ನು ಮತ್ತೆ ಮತ್ತೆ ಕೇಳ್ತೇನೆ, ಅವರ ಈ ಪ್ರೀತಿ ಹೀಗೆ ಸದಾ ಪ್ರವಹಿಸುತ್ತಿರಲಿ..
Get in Touch With Us info@kalpa.news Whatsapp: 9481252093
Discussion about this post