Sunday, September 7, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ಅದು ನನ್ನ ಪಾಲಿಗೆ ಯಕಶ್ಚಿತ್ ಮರವಾಗಿರಲಿಲ್ಲ: ನನ್ನ ಅಪ್ಪ, ನನ್ನ ದೈವವಾಗಿತ್ತು

ಪರಿಸರ ದಿನಕ್ಕೆ ಒಂದು ಕಥೆ

June 5, 2020
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅ’ಮರ’
ಹ್ಮ್ ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ಅವರ ಸಮಾಧಿ. ನೋವು ಸಂತಸ ಅಂದಾಗೆಲ್ಲ ಅಪ್ಪ ಓಡುತ್ತಿದ್ದುದು ಅಲ್ಲಿಗೆ. ನಾನು ಹುಟ್ಟಿದ್ದು ಆ ಮರದ ಕೆಳಗೆ ಅಮ್ಮನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂತೆ. ಅಪ್ಪ ಸತ್ತಿಲ್ಲ, ಸಾಯುವುದು ಇಲ್ಲ. ಮರದಿ ಮರವಾಗಿ, ಉಸಿರ ಉಸಿರಾಗಿ ಈಗಲೂ ಅಲ್ಲಿದ್ದಾರೆ. ಅಪ್ಪ ತೀರಿದಾಗ ಎಲೆಗಳ ಕಳೆದು ನಿಂತಿತ್ತು. ಅದು ಕೂಡ ನೊಂದಿತ್ತೇನೋ ಅನ್ನಿಸುತ್ತಿತ್ತು. ಒಂದಿಡೀ ವರ್ಷ ಚಿಕ್ಕ ಚಿಗುರು ಕಂಡಿರಲಿಲ್ಲ. ಊರಲ್ಲಿ ನಡೆಯುವ ಪ್ರತಿಯೊಬ್ಬರೂ ಅಪ್ಪನೊಡನೆ ಮರವು ತೀರಿತು ಎಂದವರೇ. ಅದೊಂದು ರಾತ್ರಿ ಅಪ್ಪ ಕನಸಿನಲ್ಲಿ ಬಂದು ಅದರ ಬುಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೇಳಿದಂತೆ ಭಾಸ. ವ್ಯವಸ್ಥೆ ಆಯಿತು ಮತ್ತೆ ಮರ ಮರಳಿತು. ಸಂದಿಗ್ಧತೆ ನೋಡಿ. ರೈಲು ಮಾರ್ಗಕ್ಕಾಗಿ ಆ ಮರವನ್ನು ಕಡಿದು ಹಾಕುತ್ತಾರಂತೆ.

ಬಿಳಲುಗಳ ಕಡಿದರೆ ಅಪ್ಪ ಆ ದಿನ ಊಟ ಮಾಡುತ್ತಿರಲಿಲ್ಲ. ಇನ್ನು ಮರವನ್ನು ಕಡಿದು ಬಿಟ್ಟರೆ ಅವರು ನಮ್ಮಿಂದ ಪೂರ್ತಿ ದೂರ ಆಗಿಬಿಡುತ್ತಾರೆ. ಏನಾದರೂ ಮಾಡಲೇಬೇಕು.

ಅಧಿಕಾರಿ, ಇಲಾಖೆ, ಮಂತ್ರಿ, ಕೋರ್ಟು, ಹೋರಾಟ ಎಲ್ಲವೂ ಆಯಿತು. ವೃಕ್ಷ ಕಡಿದೇ ಸಿದ್ಧ ಎಂಬುದವರ ನಿರ್ಣಯ. ಯಕಶ್ಚಿತ್ ಒಂದು ಮರಕ್ಕಾಗಿ ಊರಿಗೆ ಬರುವ ರೈಲು ತಡೆಯುತ್ತಿದ್ದಾನೆ ಅಂದುಕೊಂಡರು ಎಲ್ಲರೂ. ನನ್ನ ಪಾಲಿಗೆ ಅದು ಯಕಶ್ಚಿತ್ ಬಿಡಿ, ಮರವೂ ಅಲ್ಲ. ನನ್ನ ಅಪ್ಪ, ನನ್ನ ದೈವ. ಇನ್ನು ತಡ ಮಾಡಲು ಸಾಧ್ಯವೇ ಇಲ್ಲ. ಕಾಮಗಾರಿ ಅದಾಗಲೇ ಆರಂಭಿಸಿ ಆಗಿದೆ. ಬಂದಿರುವ ಹೊಸ ಅಧಿಕಾರಿ ತುಂಬಾ ಜೋರಂತೆ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳಲ್ಲವಂತೆ. ಏನು ಮಾಡುವುದು? ಅವರನ್ನು ಕಂಡು ಬರುವುದು ಎಂದುಕೊಂಡು ಹೊರಟೆ.

ನನ್ನ ಕಂಡು ಮತ್ತೆ ಕಛೇರಿಯ ತುಂಬೆಲ್ಲಾ ಗುಸು ಗುಸು. ಮತ್ತೆ ಬಂದ ಮರವುಳಿಸಲು ಅಂತ. ಸರ್ ನಮಸ್ತೆ.. ಪತ್ರಿಕೆಯ ಬದಿಯಲ್ಲಿ ಕಂಡ ಮುಖಕ್ಕೆ ನಮಸ್ಕಾರ ಮಾಡಿದೆ. ಹೋ ನೀವು ಮರವುಳಿಸುವವರು, ಬನ್ನಿ ಕುಳಿತುಕೊಳ್ಳಿ. ಇಷ್ಟು ಮರ್ಯಾದೆ ಆ ಜಾಗದಲ್ಲಿ ಸಿಕ್ಕಿದ್ದು ಇದೇ ಮೊದಲು. ಮಾತನಾಡಲು ಒಂದು ಧೈರ್ಯ ಬಂದಿತು. ನೀವೇನು ಮಾಡುತ್ತಿದ್ದೀರಿ ಗೊತ್ತಾ? ಸರ್ಕಾರದ ಕೆಲಸವನ್ನು, ಜನಪಯೋಗಿ ಯೋಜನೆಯನ್ನು ತಡೆದಿದ್ದೀರಿ. ಸರ್ಕಾರಿ ಮತ್ತು ಕೋರ್ಟಿನ ಸಮಯವನ್ನು ಇಷ್ಟು ವ್ಯರ್ಥ ಮಾಡಿದ್ದೀರಿ. ತಪ್ಪಲ್ಲವೇ? ನನಗೆ ಮಾತನಾಡಲು ಏನೂ ಇರಲಿಲ್ಲ. ನನ್ನ ಕನಸುಗಳೆಲ್ಲಾ ಸತ್ತು ಹೋದ ಅನುಭವ. ಅವರೇ ಮತ್ತೆ ಮಾತನಾಡಿದರು. ಆದರೆ ನನಗೆ ನಿಮ್ಮ ಹೋರಾಟ ಹಿಡಿಸಿತು. ನಿಮ್ಮಂಥ ಜನರೂ ಇದ್ದಾರೆ ಎಂದು ನಿಮ್ಮ ನೋಡಿದ ಮೇಲೆ ತಿಳಿದಿದ್ದು. ಪರಿಸರ ದಿನಕ್ಕೆ ಪುಟಗಟ್ಟಲೆ ಪಾಠ ಮಾಡುವ ನಮ್ಮ ನಡುವೆಯೇ ಕೋರ್ಟಿನ ಸಮನ್ಸ್ ಮುಂದೆಯೂ ಪಟ್ಟು ಹಿಡಿದು ಕೂತಿದ್ದೀರಿ. ಆ ದೇವರು ನಿಮ್ಮ ಸಂತತಿ ಸಾವಿರ ಮಾಡಲಿ. ನಾನು ನಿಮಗೆ ಒಂದು ಪುಟ್ಟ ಸಹಾಯ ಮಾಡಬಲ್ಲೆ. ನೀವು ಆ ಮರಕ್ಕೆ ಬದಲಾಗಿ ಬದಿಯಲ್ಲಿ ಜಾಗ ನೀಡಿದರೆ ನಾನು ಮರ ಉಳಿಸಿ ಕೊಡಬಲ್ಲೆ. ಅಬ್ಬಾ ಉಸಿರು ಬಂದಂತೆ ಆಯಿತು. ಕಣ್ಣುಗಳಲ್ಲಿ ಕಂಬನಿ ಧಾರಾಕಾರವಾಗಿ ಇಳಿಯುತ್ತಿದ್ದವು. ಕಣ್ಣೋರಿಸಿಕೊಳ್ಳಲು ಹೇಳಿ ಕುಡಿಯಲು ನೀರು ಕೊಟ್ಟರು. ನಾನು ಮರವುಳಿಸಿಲ್ಲ, ನಿಜಕ್ಕೂ ನೀವು ಉಳಿಸಿದಿರಿ. ದೇವರು ನಿಮ್ಮಂಥವರಲ್ಲಿ ಇದ್ದು ನಮ್ಮನ್ನು ಕಾಯುತ್ತಾರೆ ಎಂದೆ. ತುಂಬಾ ದೊಡ್ಡ ಮಾತು. ನಾನು ದೇವರಲ್ಲ. ನಿಮ್ಮ ಅಭಿಮಾನಿ ಅಂದುಕೊಳ್ಳಿ. ಚಿಕ್ಕ ಸಮಸ್ಯೆ ಇದೆ. ಬದಲಿ ಜಾಗವನ್ನು ನಾಳೆಯೊಳಗೆ ನೀವು ತಿಳಿಸಲೇಬೇಕು. ನಾನು ನಾಳೆ ಸಂಜೆ ಮೇಲಿನ ಕಛೇರಿಗೆ ಹೋಗಿ ಅದಕ್ಕೆ ಅನುಮತಿ ತರಬೇಕು. ಸರಿ ಎಂದು ನಮಸ್ಕರಿಸಿ ಹೊರಟೆ.

ಇಡೀ ರಾತ್ರಿ ಒಂದಿನಿತೂ ಮಲಗಲಿಲ್ಲ. ಮನೆಯ ಹೊರಗೆ ಕಾಲಿಟ್ಟಾಗ ಮುಳ್ಳೊಂದು ಕಾಲಡಿಗೆ ಸಿಕ್ಕಿತು. ಚುರುಕ್ ಎಂದಿತು. ರಕ್ತ ಬಸಿಯುತ್ತಿದ್ದ ಸೀಳಿದ ಅಂಗಾಲಿಗೆ ಬಟ್ಟೆ ಕಟ್ಟಿಕೊಂಡು ಮರದಡಿ ಬಂದೆ. ಮರದಿಂದ ನಮ್ಮವರು ದೂರವಾದರು, ಊರ ಜನ ಮಾತನಾಡಿಸುವುದು ಬಿಟ್ಟರು, ಲಕ್ಷಾಂತರ ರೂಪಾಯಿ ಹಣ ವ್ಯರ್ಥ ಆಯಿತು, ಕೋರ್ಟು ಕಛೇರಿ ಅಂತ ಕಾಲವೂ ಕಳೆದು ಹೋಗಿದೆ, ಈಗ ಕಾಲ ಗಾಯ, ಮುಂದೊಂದು ದಿನ ಮರವುರುಳಿ ಮನೆಯ ಮೇಲೆ ಬಿದ್ದರೆ…. ಅಂಗೈಯಗಲ ಜಾಗದಲ್ಲಿ ಬದಲಿ ಜಾಗವನ್ನು ಎಲ್ಲಿಂದ ನೀಡಬೇಕು? ಮನದ ತುಂಬಾ ಹಿಂದೆಂದೂ ಕಾಣದ ಪ್ರಶ್ನೆಗಳು. ನಿರ್ಧಾರಕ್ಕೆ ಬಂದಿದ್ದೆ ಇವತ್ತಿಗೆ ಆರು ವರ್ಷಗಳ ಹಿಂದೆ. ಮನೆಯಂಗಳದ ತುದಿಯಲ್ಲಿ ರೈಲು ಓಡುತ್ತಲೇ ಇದೆ.. ಮರದ ಬದಿಗೆ, ಅಪ್ಪನ ಸಮಾಧಿಯ ಮೇಲೆ..


Get In Touch With Us info@kalpa.news Whatsapp: 9481252093

Tags: FatherKannadaNewsWebsiteLatestNewsKannadaSachin ParshwanathTreeworld environment dayಮರವಿಶ್ವ ಪರಿಸರ ದಿನಸಚಿನ್ ಪಾರ್ಶ್ವನಾಥ್
Previous Post

ವೇದ ಪುರಾಣಗಳಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಏನು ಉಲ್ಲೇಖವಿದೆ ಗೊತ್ತಾ?

Next Post

ಸೋಮಿನಕೊಪ್ಪ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಧಾರುಣ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೋಮಿನಕೊಪ್ಪ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಧಾರುಣ ಸಾವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮುಂಜಾನೆ ಸುವಿಚಾರ | ಬೆಳಗಿನ ಸಮಯ ಮನುಷ್ಯನ ಚೈತನ್ಯವನ್ನು ಹೆಚ್ಚಿಸುತ್ತದೆ

September 7, 2025

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮುಂಜಾನೆ ಸುವಿಚಾರ | ಬೆಳಗಿನ ಸಮಯ ಮನುಷ್ಯನ ಚೈತನ್ಯವನ್ನು ಹೆಚ್ಚಿಸುತ್ತದೆ

September 7, 2025

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!