ನವದೆಹಲಿ: ಚಂದ್ರಬಾಬು ನಾಯ್ಡು ಪಕ್ಷವನ್ನು ಧೂಳಿಪಟ ಮಾಡಿ ಆಂಧ್ರಪ್ರದೇಶದಲ್ಲಿ ಭರ್ಜರಿ ಜಯ ದಾಖಲಿಸಿರುವ ವೈಎಸ್’ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ದಾಖಲೆಯ ಜಯ ಗಳಿಸಿರುವ ಜಗನ್, ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಇವರು ಪ್ರಧಾನಿಯವರನ್ನು ಭೇಟಿಯಾಗಿರುವುದು ಕುತೂಲಹಕ್ಕೆ ಕಾರಣವಾಗಿದೆ.
Delhi: YSRCP chief Jaganmohan Reddy met Prime Minister Narendra Modi today. V Vijaya Sai Reddy and other leaders of YSRCP were also present. pic.twitter.com/227596XZEx
— ANI (@ANI) May 26, 2019
ಮೂಲಗಳ ಮಾಹಿತಿಯಂತೆ ಪ್ರಧಾನಿ ಮೋದಿ ನೇತೃತ್ವದ ಎನ್’ಡಿಎ ಸರ್ಕಾರಕ್ಕೆ ಜಗತ್ ಬಾಹ್ಯ ಬೆಂಬಲ ನೀಡಿದ್ದು, ಇದಕ್ಕಾಗಿ ಕೆಲವೊಂದು ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದ ಸಹಕಾರ ನೀಡಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ ಎನ್ನಲಾಗಿದೆ.
Discussion about this post