ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೋಗ: ಜೋಗ ಜಲಪಾತವನ್ನು ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ ಸರ್ವಋತುವಿನಲ್ಲೂ ಪ್ರಚಾಸಿಗರ ಆಕರ್ಷಣೆಯ ತಾಣವನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಜೋಗದಲ್ಲಿ ಯಾತ್ರಿ ನಿವಾಸದ ಬಳಿ ಜಿಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಜಲಪಾತ ವೀಕ್ಷಿಸಿ ನಂತರ ಮಾತನಾಡಿದರು.
ಜೋಗ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಜಿಪ್ ಲೈನ್ ಯೋಜನೆಯನ್ನು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈಗಾಗಲೇ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 450 ಮೀಟರ್ ಉದ್ದದಲ್ಲಿ ಎರಡು ರೋಪ್’ಗಳ ಮೂಲಕ ನಿರ್ಮಿಸಲಾಗುವುದು. ಜಿಪ್ ಲೈನ್’ಗೆ ಸಂಬಂಧಪಟ್ಟಂತ ಭದ್ರತೆಯನ್ನೂ ಸಹ ಗಮನದಲ್ಲಿರಿಸಿಕೊಂಡು ನಿರ್ಮಿಸಲಾಗುತ್ತಿದೆ ಎಂದರು.
ಪ್ರವಾಸೋಧ್ಯಮ ಸರ್ಕ್ಯುಟ್ ನಿರ್ಮಿಸಲು ಹಿಂದೆ 2009 ರಲ್ಲಿ ಸಿಎಂ ಆಗಿದ್ದಾಗ 10 ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಆ ಹಣವನ್ನು ಜಿಪ್ ಲೈನ್’ಗೆ ಬಳಸಿಕೊಳ್ಳುವ ಕುರಿತು ರೂಪುರೇಶಗಳು ತಯಾರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿವಕುಮಾರ್, ಶಾಸಕ ಹರತಾಳು ಹಾಲಪ್ಪ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ ಸೇರಿದಂತೆ ಹಲವರಿದ್ದರು.
Get in Touch With Us info@kalpa.news Whatsapp: 9481252093
Discussion about this post