ಕಲ್ಪ ಮೀಡಿಯಾ ಹೌಸ್ | ಹಾರನಹಳ್ಳಿ |
ಗ್ರಾಮಾಂತರ ಯುವಮೋರ್ಚಾ ವತಿಯಿಂದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಹಾತ್ಮ ಜ್ಯೋತಿ ಬಾಪುಲೆ ದಿನವನ್ನು ಆಚರಿಸಲಾಯಿತು.
Also Read: ಸ್ನಾನಗೃಹದಲ್ಲಿ ಅವಿತಿತ್ತು ಬೃಹತ್ ಕಾಳಿಂಗಸರ್ಪ: ರಕ್ಷಣೆಯೇ ಒಂದು ರೋಚಕ
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಅವರು, ಜ್ಯೋತಿಬಾ ಪುಲೆಯವರ ಕುರಿತು ಅವರ ಸಾಮಾಜಿಕ ಸುಧಾರಣೆಗಳು, ಅವರ ಕಾಲದ ಶಿಕ್ಷಣ, ಜೀವನಕ್ರಮ, ವಿದ್ಯಾಭ್ಯಾಸ, ಜ್ಯೋತಿಬಾ ಪುಲೆ ಅವರ ಸಾಹಿತ್ಯ ಕೃತಿಗಳು, ರೈತ ಕ್ರಾಂತಿಯ, ಮೂರು ಅಂಶಗಳನ್ನು ಇನ್ನು ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
Also Read: 2 ವರ್ಷದ ನಂತರ ಅದ್ದೂರಿಯಾಗಿ ನಡೆದ ದುರ್ಗಿಗುಡಿ ಶ್ರೀಸೀತಾರಾಮ ದೇವರ ಬ್ರಹ್ಮ ರಥೋತ್ಸವ
ಪ್ರಧಾನ ಕಾರ್ಯದರ್ಶಿ ಅಭಿಲಾಶ್ ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳ ಹಾಸ್ಟೆಲ್ ಮೂಲ ಸೌಕರ್ಯಗಳ ಕುರಿತಾಗಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ದಿವಾಕರ್ ಯಾದವ್, ಲೋಹಿತ್ ಚೋರಡಿ ಮತ್ತು ಹಾಸ್ಟೆಲ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post