ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜಿಲ್ಲೆಯ ಉಂಬಳೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಿಗೆರೆ ಗ್ರಾಮದ ಜಮೀನಿನೊಳಗೆ ಆನೆಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ.
ಅಲ್ಲಿನ ರೈತರಾದ ಸಿದ್ದರಾಮ ಶಿವಕುಮಾರ್ ಅವರ ಜಮೀನಿಗೆ ಆನೆ ನುಗ್ಗಿ ಬತ್ತದ ಪೈರನ್ನು ಸಂಪೂರ್ಣ ತುಳಿದು ಹಾಕಿದೆ.
ಇದರಿಂದ ಭತ್ತದ ಪೈರು ಹಾಳಾಗಿದ್ದು ರೈತರು ಈ ವಿಷಯವನ್ನು ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು. ವಿಷಯ ತಿಳಿದ ತಕ್ಷಣ ಉಪ ವಲಯ ಅರಣ್ಯಧಿಕಾರಿ ಅಬ್ದುಲ್ ಕರೀಂ, ಫಾರೆಸ್ಟರು ಹಾಗೂ ಅವರ ನೇತೃತ್ವದ ತಂಡ ಭೇಟಿ ನೀಡಿ ರೈತರಿಗೆ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಆನೆ ಮತ್ತೆ ಬರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಾರ ಭವಿಷ್ಯ ನಿಖರ, ವೈಜ್ಞಾನಿಕ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 13.09.2020 ರಿಂದ 19.09.2020
ಈ ಭಾಗದಲ್ಲಿ ಪಟಾಕಿ ಸಿಡಿಸುವ ಮೂಲಕ ಜಮೀನಿನ ಸ್ಥಳಕ್ಕೆ ಹೋಗಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಅಬ್ದುಲ್ ಕರೀಂ ಸೂರ್ಯವಂಶಿ ದಿನೇಶ್ ಶ್ರೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post