ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿನ್ನೆ ರಾತ್ರಿ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಅವರ ಅಂತಿಮ ಯಾತ್ರೆ ನಡೆದಿದ್ದು, ಭಾರೀ ಸಂಖ್ಯೆಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇಂದು ಮುಂಜಾನೆ 11.30ರವೇಳೆಗೆ ಅಪ್ಪಾಜಿಯವರ ನಿವಾಸದಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನಿರಿಸಿ ಮೆರವಣಿಗೆ ಹೊರಟಿತು.
ಜಯಶ್ರೀ ಸರ್ಕಲ್, ಮಿಲ್ಟ್ರಿ ಕ್ಯಾಂಪ್ ಮೂಲಕ ಗೋಣಿಬೀಡುವರೆಗೂ ಬೃಹತ್ ಅಂತಿಮ ಯಾತ್ರೆ ತೆರಳಿದ್ದು, ಸಾವಿರಾರು ಅಭಿಮಾನಿಗಳು ಹಾಗೂ
ಕಾರ್ಯಕರ್ತರು ಪಾಲ್ಗೊಂಡು ಅಗಲಿದ ನಾಯಕನಿಗೆ ಅಶ್ರುತರ್ಪಣೆ ಸಲ್ಲಿಸಿದರು.
ದಾರಿಯುದ್ದಕ್ಕೂ ಅಪ್ಪಾಜಿಯವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಅಭಿಮಾನ ಮೆರೆಯಲಾಯಿತು.
Get In Touch With Us info@kalpa.news Whatsapp: 9481252093
Discussion about this post