ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಯಲಗಟ್ಟೆ ಗೊಲ್ಲರಹಟ್ಟಿಯ ಜಾನಪದ ಸಿರಿ ಸಿರಿಯಜ್ಜಿ ಜಾನಪದ ಲೋಕದ ಸಾವಿರದ ಸಿರಿಬೆಳಗು ಎಂದು ದಾವಣಗೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಎಂ. ಮಂಜಣ್ಣ ಅಭಿಮತ ವ್ಯಕ್ತಪಡಿಸಿದರು.
ಸಮೀಪದ ಯಲಗಟ್ಟೆಗೊಲ್ಲರಹಟ್ಟಿಯಲ್ಲಿ ಈಚೆಗೆ ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಟಾನ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರತಿಷ್ಟಾನದ ಲಾಂಛನವನ್ನು ಅನಾವರಣ ಮಾಡಿದ ವೇಳೆ ಮಾತನಾಡಿ? ಅವರು ಇಂದಿನ ಅಧುನಿಕ ಕಾಲಘಟ್ಟದಲ್ಲಿ ಸಿರಿಯಜ್ಜಿಯಂತಹ ಜನಪದ ಹಾಡುಗಾರ್ತಿಯರು ಹಟ್ಟಿಗೆ ಹತ್ತರಂತೆ ಸಿಗಬಹುದು ಎಂದರು.
ಸಮೀಪದ ಯಲಗಟ್ಟೆಗೊಲ್ಲರಹಟ್ಟಿಯ ದಿ. ಜಾನಪದ ಸಿರಿ ಸಿರಿಯಜ್ಜಿ ಅವರ ಮನೆಯ ಬಳಿ ಈಚಗೆ ಆಯೋಜಿಸಿದ್ದ ಪ್ರತಿಷ್ಟಾನದ ಲಾಂಛನದ ಅನಾವರಣ ಕಾರ್ಯಕ್ರಮದಲ್ಲಿ ಮತನಾಡಿದರು ಹಳ್ಳಿಗಾಡಿನ ಜಾನಪದ ಕೋಗಿಲೆಯೆಂದೇ ಹೆಸರಾಗಿದ್ದ ಜಾನಪದ ಸಿರಿ ಸಿರಿಯಜ್ಜಿ ತನ್ನ ಬದುಕನ್ನು ನಿರ್ವಹಿಸಿದ ಕ್ರಮದ ಹಿನ್ನೆಲೆಯಲ್ಲಿ ಅಜ್ಜಿ ಬಹುಮುಖ್ಯರಾಗುತ್ತಾರೆ.
ತನ್ನ ವೈಧವ್ಯದ (ವಿಧವೆ) ಸಂಧರ್ಭದಲ್ಲಿ ಗೊಡ್ಡುಗಟ್ಟಿದ ಸಂಪ್ರದಾಯವನ್ನು ಬಿತ್ತರಿಸಿ ಮಾದರಿ ಬದುಕಿನತ್ತ ಹೆಜ್ಜೆ ಹಾಕಿ ಇತರೆಲ್ಲಾ ಮಹಿಳೆಯರಿಗೆ ದಾರಿ ದೀಪವಾದಂತಹ ಮಹಾತಾಯಿ ಸಿರಿಯಜ್ಜಿ ಎಂದು ಬಣ್ಣಿಸಿದರು.
ಅಜ್ಜಿಯ ಅಗಾಧವಾದ ಜನಪದ( ಹಾಡು) ಸಂಪತ್ತನ್ನು ಮೈಸೂರಿನ ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ ಹನೂರು, ದಿ ಬೆಳಗೆರೆ ಕೃಷ್ಣಶಾಸ್ತ್ರಿಯವರು ಮತ್ತಿತರೆ ಸಾಹಿತಿಗಳು, ಜನಪದ ತಜ್ಞರು ಇವರ ಪ್ರತಿಭೆಯನ್ನು ಹೆಕ್ಕಿ ತೆಗೆದು ನಾಡಿಗೆ ತೋರಿಸಿಕೊಟ್ಟಿದ್ದರಿಂದ ಕಳ್ಳೆಸಾಲಿನ ಕೋಗಿಲೆಗೆ ಹಂಪಿಯ ಕನ್ನಡ ವಿವಿ 2008 ರಲ್ಲಿ ನಾಡೋಜ ಪ್ರಶಸ್ತಿಯಂತಹ ಉನ್ನತ ಗೌರವ ಪದವಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು ಎಂದರು.
ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಡಾ ಮಲ್ಲಿಕಾರ್ಜುನಕಲಮರಹಳ್ಳಿ ಪ್ರತಿಷ್ಟಾನದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿ ಸಿರಿಯಜ್ಜಿ ಸ್ಮರಣೆಲ್ಲಿ ಪ್ರತಿಷ್ಟಾನ ಸ್ಥಾಪಿಸುವ ಬಹು ವರ್ಷಗಳ ಕನಸು ಇಂದು ನನಸಾಗಿದೆ ಎಂದರು.
ಓರ್ವ ಜಾನಪದ ಮಹಿಳಾ ಹೆಸರಿನ ವಿಶೇಷವಾಗಿ ಜಾನಪದ ಕಲಾವಿದೆಯ ಹೆಸರಲ್ಲಿ ಪ್ರತಿಷ್ಟಾನ ಸ್ಥಾಪಿತವಾಗಿರುವುದು ರಾಜ್ಯದ ಏಕೈಕ ಮತ್ತು ಮೊದಲ ಪ್ರತಿಷ್ಠಾನ ಇದಾಗಿದೆ ಎಂದರು.
ಪ್ರತಿಷ್ಟಾನದ ವತಿಯಿಂದ ಇನ್ನು ಮುಂದೆ ನಿಯಮಿತವಾಗಿ ಜನಪದ ಕಲೆ, ಸಾಹಿತ್ಯ ಗ್ರಾಮೀಣ ಜನಪದ ಕಲಾವಿದರ ಪ್ರತಿಭೆಯನ್ನು ಹೊರಹಾಕುವಂತಹ ಹತ್ತು ಹಲವು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಯೋಜನೆಗಳನ್ನು ರೂಪಿಸಲಗುವುದು ಎಂದರು.
ಸಿರಿಯಜ್ಜಿ ಸ್ಮರಣೆಯಲ್ಲಿ ಕಾಡುಗೊಲ್ಲ ಬುಡಕಟ್ಟಿನ ಕುರಿತು ಅಧ್ಯಯನ ಮಾಡಿರುವ ಓರ್ವ ವಿದ್ವಾಂಸರಿಗೆ ಹಾಗೂ ಓರ್ವ ಜನಪದ ಕಲಾವಿದರನ್ನು ರಾಜ್ಯಮಟ್ಟದ ಗೌರವ ಪ್ರಶಸ್ತಿ ನೀಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸಿರಿಯಜ್ಜಿ ಸ್ಮಾರಕ ಭವನ ನಿರ್ಮಾಣವೂ ಸೇರಿದಂತೆ ಮುಂತಾದ ಮಹತ್ತರ ಯೋಜನೆಗಳನ್ನು ರೂಪಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬೆಳಗೆರೆ ಜಿ. ರಾಜಶೇಖರಯ್ಯ ಮಾತನಾಡಿ ಪ್ರತಿಷ್ಟಾನದ ವತಿಯಿಂದ ಕಾಡುಗೊಲ್ಲ ಬುಡಕಟ್ಟು ಹಟ್ಟಿಗಳಿಗೆ ತೆರಳಿ ಸಮಾಜೋ ಸಾಂಸ್ಕೃತಿಕ ಜಾಗೃತಿ ಮೂಡಿಸಲಾಗುವುದು ಬುಡಕಟ್ಟಿಗೆ ಸಂಬಂಧಿಸಿದ ಉನ್ನತ ಶೈಕ್ಷಣಿಕ ಅಧ್ಯಯನ, ಜನಪದ ಸಾಹಿತ್ಯ-ಕಲೆಗಳ ಸಂಗ್ರಹ, ಜಾನಪದ ಕೃತಿಗಳ ಪ್ರಕಟಣೆ ಮುಂತಾದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.
ಸಂದರ್ಭದಲ್ಲಿ ಡಾ.ಎಂ. ಮಂಜಣ್ಣ, ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನಕಲಮರಹಳ್ಳಿ, ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬೆಳಗೆರೆ ಜಿ. ರಾಜಶೇಖರಯ್ಯ, ಪ್ರತಿಷ್ಟಾನದ ಪದಾಧಿಕಾರಿಗಳಾದ ಕೆ. ಚಿತ್ತಯ್ಯ, ಬೆಳಗೆರೆ ಸುರೇಶ, ಜೆ. ತಿಮ್ಮಯ್ಯ, ಓ. ಚಿತ್ತಯ್ಯ ಗೌಡಪ್ಪ, ಈರಣ್ಣ, ಜನಪದ ಕಲಾವಿದರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post