ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬಿಜೆಪಿ ಎಸ್’ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರು ಇಂದು ಆರ್’ಎಸ್’ಎಸ್ ಮುಖಂಡ ಸುಬ್ಬಣ್ಣನವರ ನಿವಾಸಕ್ಕೆ ಭೇಟಿ ನೀಡಿದ್ದರು.
ಎನ್ಎಂಸಿಯಲ್ಲಿರುವ ಸುಬ್ಬಣ್ಣನವರ ನಿವಾಸಕ್ಕೆ ಭೇಟಿ ನೀಡಿದ ನಾರಾಯಣ ಸ್ವಾಮಿ ಅವರನ್ನು ಮಂತ್ರಘೋಷಗಳೊಂದಿಗೆ ಅವರನ್ನು ಬರಮಾಡಿಕೊಂಡು ಸನ್ಮಾನಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮಂಡಲ ಅಧ್ಯಕ್ಷರಾದ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಎಸ್’ಸಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಎಸ್’ಸಿ ಮೋರ್ಚಾ ಅಧ್ಯಕ್ಷರಾದ ಗಣೇಶ್ ರಾವ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಬುಡಾ ಸದಸ್ಯರಾದ ದೇವರಾಜ್ ಹಾಗೂ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ
ಕಾಂಚನ ಹೋಟೆಲ್ ಸಭಾಂಗಣದಲ್ಲಿ ಇಂದು ಎಸ್’ಸಿ ಮೋರ್ಚಾ ವತಿಯಿಂದ ಅನೇಕ ಹಿಂದುಳಿದ ವರ್ಗಗಳ ಮುಖಂಡರು, ವಿವಿಧ ಮೋರ್ಚಾಗಳು ಹಾಗೂ ಅನೇಕ ಸಮುದಾಯಗಳ ನಾಯಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣ ಸ್ವಾಮಿ ರವರು ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿ ಸಂವಾದದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಭದ್ರಾವತಿಯಲ್ಲಿ ಸಹ ವಿವಿಧ ಸಮಾಜವನ್ನು ಬಲ ಪಡಿಸುವ ಕಾರ್ಯವನ್ನು ಮಾಡಲು ತಿಳಿಸಿದರು.
ಪಕ್ಷಕ್ಕೆ ಬಲ ತುಂಭುವ ಕೆಲಸವಾಗುವಲ್ಲಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಶಿವರಾಜ್, ಮಂಡಲ ಅಧ್ಯಕ್ಷರಾದ ಎಂ. ಪ್ರಭಾಕರ್,ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಎಸ್’ಸಿ ಮೋರ್ಚಾ ಅಧ್ಯಕ್ಷರಾದ ಶ್ರೀನಿವಾಸ್, ತಾಲೂಕು ಎಸ್’ಸಿ ಮೋರ್ಚಾ ಅಧ್ಯಕ್ಷರಾದ ಗಣೇಶ್ ರಾವ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಬುಡಾ ಸದಸ್ಯರಾದ ದೇವರಾಜ್ , ಸಾಮಾಜಿಕ ಜಾಲತಾಣ ವಿಭಾಗ ಸಂಚಾಲಕ ಅವಿನಾಶ್ ಹಾಗೂ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ವನಮಹೋತ್ಸವ ಕಾರ್ಯಕ್ರಮ
ಕೂಡ್ಲಿಗೆರೆ ಪಂಚಾಯ್ತಿ ವ್ಯಾಪ್ತಿಯ ಕಲ್ಪನಹಳ್ಳಿ ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಎಸ್’ಸಿ ಮೋರ್ಚಾ ವತಿಯಿಂದ ನಡೆಸಲಾಯಿತು.
ಮಹಾಶಕ್ತಿ ಕೇಂದ್ರ ಪ್ರಮುಖ್ ರುದ್ರೇಶ, ಶಕ್ತಿಕೇಂದ್ರ ಪ್ರಮುಖ್ ಪ್ರದೀಪ್, ಎಸ್’ಸಿ ಮೋರ್ಚಾ ಕಾರ್ಯದರ್ಶಿ ಮಾಲತೇಶ್, ಭೂತ್ ಅಧ್ಯಕ್ಷರಾದ ಕನಕಾಧರನ್, ರವಿಕುಮಾರ್, ಕೃಷ್ಣ ನಾಯ್ಕ, ಎಸ್. ಕುಮಾರ್, ಮನುನಾಥ್, ಕೊಟ್ರೇಶ್, ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Get In Touch With Us info@kalpa.news Whatsapp: 9481252093
Discussion about this post