ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪ್ರತಿ ಮಳೆಗಾಲದಲ್ಲೂ ಪ್ರವಾಹ ಪೀಡಿತವಾಗುವ ಕವಲಗುಂದಿಯ ಗ್ರಾಮಸ್ಥರು ತಮಗೆ ಸುರಕ್ಷಿತವಾದ ಶಾಶ್ವತ ನೆಲೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಒಕ್ಕಲಿಗರ ಭವನದಲ್ಲಿನ ಕಾಳಜಿ ಕೇಂದ್ರದಲ್ಲಿರುವ ಕವಲಗುಂದಿ ಪ್ರವಾಸ ಸಂತ್ರಸ್ತೆ ಭಾಗಶ್ರೀ ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ, ಪ್ರತಿ ಮಳೆಗಾಲದಲ್ಲೂ ನಮ್ಮದು ಇದೇ ಪರಿಸ್ಥಿತಿಯಾಗಿದೆ. ಈಗ ನಾವು ವಾಸವಿದ್ದ ಪ್ರದೇಶದಲ್ಲಿ ಮೊಸಳೆ ಕಾಡವೂ ಸಹ ಇದೆ ಎಂದು ಅಳಲು ತೋಡಿಕೊಂಡರು.
ನಾವು ಹುಟ್ಟು ಮುಂಚೆಯಿಂದಲೂ ಇದೇ ಪರಿಸ್ಥಿತಿಯಿದೆ. ನಾನು ಕಳೆದ ಬಾರಿ ಪ್ರವಾಹ ಬಂದಾಗ ಗರ್ಭಿಣಿಯಾಗಿದ್ದೆ. ಈ ಬಾರಿ ಮಗು ಇದೆ. ಹೀಗೆ ಎಷ್ಟು ವರ್ಷ ಎಂದು ನಾವು ಇದೇ ರೀತಿ ಅತಂತ್ರ ಪರಿಸ್ಥಿತಿ ಅನುಭವಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 20.09.2020 ರಿಂದ 26.09.2020
ಒಂದು ಸೂಕ್ತ ಜಾಗ ತೋರಿಸಿ, ಮನೆ ಕಟ್ಟಿಕೊಳ್ಳಲು ಸಾಲದ ಅನುಕೂಲ ಕಲ್ಪಿಸಬೇಕು. ಕಡೆಯ ಪಕ್ಷ ಜಾಗ ಕೊಟ್ಟರೂ ಗುಡಿಸಲು ಹಾಕಿಕೊಂಡಾದರೂ ಜೀವನ ಮಾಡುತ್ತೇವೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿದರು.
Get In Touch With Us info@kalpa.news Whatsapp: 9481252093







Discussion about this post