ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭದ್ರಾವತಿ-ಶಿವಮೊಗ್ಗ ನಡುವಿನ ಮಲವಗೊಪ್ಪ ಸಂಭವಿಸಿದ್ದ ಸರ್ಕಾರಿ ಬಸ್ ಅಪಘಾತದಲ್ಲಿ ಮೃತರಾಗಿದ್ದ ಪ್ರಯಾಣಿಕರೊಬ್ಬರ ಕುಟುಂಬಕ್ಕೆ ಕೆಎಸ್’ಆರ್’ಟಿಸಿ ಪರಿಹಾರಧನ ವಿತರಿಸಿದೆ.
ಹಿನ್ನೆಲೆ ಏನು?
2019ರ ಡಿಸೆಂಬರ್ 29ರಂದು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್’ಆರ್’ಟಿಸಿ ಬಸ್ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಬಳಿಯಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿದ್ದ ಪ್ರಯಾಣಿಕರಲ್ಲಿ ಭದ್ರಾವತಿ ತಾಲೂಕಿನ ದೊಡ್ಡ ಕುರುಬರ ಬೀದಿ ಗಾಯತ್ರಿಯಮ್ಮ ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದರು. ಆನಂತರ ಚಿಕಿತ್ಸೆ ಫಲಕಾಯಾಗದೆ ಅವರು ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮೃತರ ಮಗ ಬಿ.ಎಂ. ಬಾಜೇಶ್ ಅವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ. 3 ಲಕ್ಷಗಳ ಚೆಕ್ನ್ನು ಕೆಎಸ್’ಆರ್’ಟಿಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್ ಹಸ್ತಾತಂತರಿಸಿದರು.
Get In Touch With Us info@kalpa.news Whatsapp: 9481252093






Discussion about this post