ಕಲ್ಪ ಮೀಡಿಯಾ ಹೌಸ್ | ಆನೆಗುಂದಿ |
ಆನೆಗುಂದಿ ನವವೃಂದಾವನ ಕ್ಷೇತ್ರ ಶ್ರೀ ವ್ಯಾಸರಾಜ ಮಠ (ಸೋಸಲೆ)ದಲ್ಲಿ ಮಾರ್ಚ್ 10ರಿಂದ 12ರವರೆಗೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 484ನೇ ಆರಾಧನಾ ಮಹೋತ್ಸವ ಆಯೋಜಿಸಲಾಗಿದೆ.
ಪೀಠಾಧಿಪತಿ ಶ್ರೀ 1008 ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾ.9ರ ಸಂಜೆ 4 ಗಂಟೆಗೆ ಆನೆಗುಂದಿ ಶ್ರೀ ರಂಗನಾಥ ದೇವಸ್ಥಾನದಿಂದ ಶ್ರೀಸಂಸ್ಥಾನದ ದೇವರು, ಶ್ರೀ ಸರ್ವಮೂಲ, ಶ್ರೀಮನ್ನ್ಯಾಯಸುಧಾ ಮತ್ತು ವ್ಯಾಸತ್ರಯ ಗ್ರಂಥಗಳ ಭವ್ಯ ಮೆರವಣಿಗೆ ಜರಗಲಿದೆ. ನಂತರ ನವವೃಂದಾವನದ ಸನ್ನಿಧಾನದಲ್ಲಿ ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆಯೊಂದಿಗೆ ಆರಾಧನೆಗೆ ಚಾಲನೆ ನೀಡಲಾಗುವುದು. ಬಳಿಕ ಶ್ರೀಪಾದಂಗಳು ಅನುಗ್ರಹ ಸಂದೇಶ ನೀಡುವರು.
ಮಾ.10 ಪೂರ್ವಾರಾಧನೆ:
ಬೆಳಿಗ್ಗೆ 5:30ಕ್ಕೆ ಶ್ರೀಪಾದಂಗಳವರಿಂದ ಸಂಸ್ಥಾನಪೂಜೆ, 6ಕ್ಕೆ ಋಕ್ಸಂಹಿತಾಯಾಗ, ಶ್ರೀಕೃಷ್ಣಷಡಕ್ಷರಮಂತ್ರಹೋಮ, ಮನ್ಯುಸೂಕ್ತಪುರಶ್ಚರಣಹೋಮ, ಚತುರ್ವೇದ, ಸ್ರೀಮದ್ಭಗವತ, ಸರ್ವಮೂಲ ಗ್ರಂಥಗಳು, ಶ್ರೀಮನ್ನ್ಯಾಯಸುಧಾ ಹಾಗೂ ವ್ಯಾಸತ್ರಯಗಂಥಗಳ ಪಾರಾಯಣ, 8ಕ್ಕೆ ಶ್ರೀವ್ಯಾಸರಾಜ ಗುರುಸಾರ್ವಭೌರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, 8:30ಕ್ಕೆ ವಿದ್ವಾಸರಿಂದ ಪ್ರವಚನ, 9:30ಕ್ಕೆ ಬೆಂಗಳೂರಿನ ವೀಣಾ ಶ್ರೀಧರ್ ಮೊರಬ್ ಮತ್ತು ವೃಂದವರಿಂದ ನೃತ್ಯ , 10:30ಕ್ಕೆ ಪೂರ್ಣಾಹುತಿ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಮಧ್ಯಾಹ್ನ 3:30ಕ್ಕೆ ಶ್ರೀಗಳ ಅಧ್ಯಕ್ಷತೆಯಲ್ಲಿ ಶ್ರೀಮದ್ದಶಪ್ರಮತಿದರ್ಶನಪ್ರಕಾಶಿನೀ ವಿದ್ವತ್ಸಭಾ ವ್ಯಾಸತ್ರಯ ಪರೀಕ್ಷಾ ಆಯೋಜಿಸಲಾಗಿದೆ. ವಿದ್ವಾನ್ ಪಿ.ಎಸ್. ಶೇಷಗಿರಿ ಆಚಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಉಪಸ್ಥಿತರಿರಲಿದ್ದು, ಪರೀಕ್ಷೆ: ತಾತ್ಪರ್ಯಚಂದ್ರಿಕಾ-ಪಂಚಾಧಿಕರಣ ಪರ್ಯಂತಂ-ಸಂಘೋಷಾಚಾರ್ಯ, ನ್ಯಾಯಾಮೃತ-ದೃಕ್-ದೃಶ್ಯಸಂಬಂಧಾನುಪಪತ್ತಿಭಂಗ ಪರ್ಯಂತ-ಪ್ರಣವಾಚಾರ್ಯ.
ಸಂಜೆ 5ಕ್ಕೆ ಶ್ರೀಗಳಿಂದ ಅನುಗ್ರಹ ಸಂದೇಶ, ವಿದ್ಯಾಂಸರಿಗೆ ಸನ್ಮಾನ ಹಾಗೂ ಗಣ್ಯವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 6ಕ್ಕೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಸ್ವಸ್ತಿವಾಚನ, ಮಹಾಮಂಗಳಾರತಿ (ಶ್ರೀವ್ಯಾಸತೀರ್ಥ ವಿದ್ಯಾಪೀಠದ ಅಧ್ಯಾಪಕರಿಂದ ಹಾಗೂ ವಿದ್ಯಾರ್ಥಿಗಳಿಂದ ಅಷ್ಟಾವಧಾನ ಕಾರ್ಯಕ್ರಮ) 7ಕ್ಕೆ ದಾಸವಾಣಿ – ವಿದ್ವಾನ್ ಪುತ್ತೂರು ನರಸಿಂಹನಾಯಕ್ ಮತ್ತು ವೃಂದದವರಿಂದ.
ಮಾರ್ಚ್ 11 ಮಧ್ಯಾರಾಧನೆ
ಮುಳಬಾಗಿಲು ಶ್ರೀ ಶ್ರೀಪಾದರಾಜ ಮಠ ಪೀಠಾಧಿಪತಿ ಶ್ರೀ 1008 ಶ್ರೀಸುಜಯನಿಧಿತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ 5:30ಕ್ಕೆ ಉಭಯ ಶ್ರೀಪಾದಂಗಳವರಿಂದ ಸಂಸ್ಥಾನಪಾಜೆ, 6ಕ್ಕೆ ಋಕ್ಸಂಹಿತಾಯಾಗ, ಶ್ರೀಕೃಷ್ಣಷಡಕ್ಷರಮಂತ್ರಹೋಮ, ಚತುರ್ವೇದ, ಶ್ರೀಮದ್ಭಾಗವತ, ಸರ್ವಮಾಲ ಗ್ರಂಥಗಳು ಹಾಗಾ ವ್ಯಾಸತ್ರಯಗ್ರಂಥಗಳ ಪಾರಾಯಣ, 8ಕ್ಕೆ ಶ್ರೀವ್ಯಾಸರಾಜಗುರುಸಾರ್ವಭೌಮರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, 8:30ಕ್ಕೆ ವಿದ್ವಾಂಸರಿಂದ ಪ್ರವಚನ, 9:30ಕ್ಕೆ ದಾಸಸೌರಭ ವಿದ್ವಾನ್ ಸೋಸಲೆ ಸಮೀರಾಚಾರ್ಯ ಮತ್ತು ವೃಂದದವರಿಂದ, 10:30ಕ್ಕೆ ಗ್ರಂಥ ಬಿಡುಗಡೆ, ವಿದ್ವಾಂಸರಿಗೆ ಸನ್ಮಾನ ಹಾಗಾ ಗಣ್ಯವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಶ್ರೀ ಶ್ರೀಪಾದಂಗಳವರಿಂದ ಅನುಗ್ರಹ ಸಂದೇಶ, 11:30ಕ್ಕೆ ಮಾರ್ಣಾಹುತಿ, ನೈವೇದ್ಯ, ಹಸ್ತೋದಕ. ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
Also read: ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕೆಎಸ್’ಆರ್’ಟಿಸಿ ಬಸ್’ನಲ್ಲಿ ಉಚಿತ ಪ್ರಯಾಣ
ಮುಳಬಾಗಿಲು ಶ್ರೀ ಶ್ರೀಪಾದರಾಜ ಮಠ ಪೀಠಾಧಿಪತಿ ಶ್ರೀ ಶ್ರೀ 1008 ಶ್ರೀಸುಜಯನಿಧಿತೀರ್ಥಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಮಧ್ಯಾಹ್ನ 3:30ಕ್ಕೆ ಶ್ರೀಮದ್ದಶಪ್ರಮತಿದರ್ಶನಪ್ತಕಾಶಿನೀ ವಿದ್ವತ್ಸಭಾ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ, ಮಹಾಮಹೋಪಾಧ್ಯಾಯ ವಿದ್ವಾನ್ ಎ. ಹರಿದಾಸ ಭಟ್ ನಿರ್ವಾಹಕ ಅಧ್ಯಕ್ಷರಾಗಿ ಪಾಲ್ಗೊಳ್ಳಲಿದ್ದು, ಪರೀಕ್ಷೆ: ಶ್ರೀಮನ್ನ್ಯಾಯಸುಧಾ-ಸಮಯಪಾದ-ಸೌಮಿತ್ರಿ ಆಚಾರ್ಯ, ನ್ಯಾಯಾಮೃತ- ದೃಕ್-ದೃಶ್ಯಸಂಬಂಧಾನುಪಪತ್ತಿಭಂಗ ಪರ್ಯಂತ- ಶ್ರೀಶಾಚಾರ್ಯ. ಸಂಜೆ 5ಕ್ಕೆ ವಿದ್ವಾಂಸರಿಗೆ ಸನ್ಮಾನ ಹಾಗೂ ಗಣ್ಯವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ, ಶ್ರೀ ಶ್ರೀಪಾದಂಗಳವರಿಂದ ಅನುಗ್ರಹ ಸಂದೇಶ. 6ಗಂಟೆಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಸ್ವಸ್ತಿವಾಚನ, ಮಹಾಮಂಗಳಾರತಿ (ಶ್ರೀವ್ಯಾಸತೀರ್ಥ ವಿದ್ಯಾಪೀಠದ ಅಧ್ಯಾಪಕರಿಂದ ಹಾಗೂ ವಿದ್ಯಾರ್ಥಿಗಳಿಂದ ಅಷ್ಟಾವಧಾನ ಕಾರ್ಯಕ್ರಮ). 7ಗಂಟೆಗೆ ದಾಸವಾಣಿ – ವಿದ್ವಾನ್ ರಾಯಚೂರು ಶೇಷಗಿರಿ ದಾಸ್ ಮತ್ತು ವೃಂದದವರಿಂದ.
ಇದೇ ಸಂದರ್ಭದಲ್ಲಿ ವ್ಯಾಸ ಸಾಹಿತ್ಯದಲ್ಲಿ ವಿಶಿಷ್ಟ ಸಾರಸ್ವತ ಸೇವೆಗಾಗಿ ವಿದ್ವಾನ್ ಸಗ್ರಿ ರಾಘವೇಂದ್ರಾಚಾರ್ಯ ಉಪಾಧ್ಯಾಯ ಅವರಿಗೆ ಶ್ರೀವ್ಯಾಸರಾಜಾನುಗ್ರಹ ಪ್ರಶಸ್ತಿ ಮತ್ತು ವಿದ್ವಾನ್ ಬಿ. ಸತ್ಯನಾರಯಣಾಚಾರ್ಯ ಅವರಿಗೆ ಶ್ರೂಪುರಂದರಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮೈಸೂರು ಪೇಜಾವರ ಶ್ರೀಧಾಮ ಸಂಚಾಲಕ ಗುರುನಾಥ್, ಎಸ್.ಆರ್. ಪಾಂಡುರಂಗಿ, ಶ್ರೀಧರ್, ಗೂಳೂರ್ ವೆಂಕಟರಮಣ ರಾವ್ ರಾಘವೇಂದ್ರ ಅವರಿಗೆ ಶ್ರೀ ವ್ಯಾಸರಾಜಸೇವಾಧುರಂಧರ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಾರ್ಚ್ 12 ಉತ್ತರರಾಧನೆ
ಉಡುಪಿ ಶ್ರೀ ಅದಮಾರು ಮಠ, ಕಿರಿಯ ಪಟ್ಟ ಶ್ರೀ 1008 ಶ್ರೀಈಶಪ್ರಿಯತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ 5:30ಕ್ಕೆ ಉಭಯ ಶ್ರೀಪಾದಂಗಳವರಿಂದ ಸಂಸ್ಥಾನಪೂಜೆ, 6ಕ್ಕೆ ಶ್ರೀಕೃಷ್ಣಡಕ್ಷರಮಂತ್ರಹೋಮ, ಪವಮಾನಹೋಮ, ನಾರಾಯಣವರ್ಮಹೋಮ, ವಾಯುಸ್ಥುತಿಪುರಶ್ಚರಣ ಹೋಮ, ಚತುರ್ವೇದ, ಶ್ರೀಮದ್ಭಾಗವತ, ಸರ್ವಮೂಲಗ್ರಂಥಗಳ ಹಾಗೂ ವ್ಯಾಸತ್ರಯಗ್ರಂಥಗಳ ಪಾರಾಯಣ. 8 ಗಂಟೆಗೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, 8:30ಕ್ಕೆ ವಿದ್ವಾನ್ ಸುಮುಖ ಮತ್ತು ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ದೇವರನಾಮ, 9:30ಕ್ಕೆ ವಿದ್ವಾನ್ ಶ್ರೀನಿವಾಸ ಆಚಾರ್ಯ ಕೊರ್ಲಹಳ್ಳಿ ದಂಪತಿಗಳಿಂದ ವೀಣಾವಾದನ, 10:30ಕ್ಕೆ ಪೂರ್ಣಾಹುತಿ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಜರುಗಲಿದೆ.
ಅಪರಾಹ್ನ 3ಗಂಟೆಗೆ ಶ್ರೀ ಶ್ರೀಪಾದಂಗಳವರಿಂದ ವಿಶಿಷ್ಟದಾನಿಗಳಿಗೆ ಸ್ಮರಣಿಕೆ ಪ್ರದಾನ ಹಾಗೂ ಸ್ವಯಂಸೇವಕರಿಗೆ ಅನುಗ್ರಹ ಮಂತ್ರಾಕ್ಷತೆ ವಿತರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post