ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಸಹ ಪ್ರಿಯಾಂಕ ಗಾಂಧಿ ವಾದ್ರಾ ಅವರು ಉಸ್ತುವಾರಿ ವಹಿಸಿಕೊಂಡು, ಕಾಂಗ್ರೆಸ್’ಗೆ ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವೂ ಸಹ ದೊರೆಯದಂತಾಗಲಿ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
Also Read: ಪಜಾ, ಪಪಂ ಮೀಸಲಾತಿ ಹೆಚ್ಚಿಸಲು ಬೃಹತ್ ಹೋರಾಟ ಅಗತ್ಯ: ಶಾಸಕ ರಘುಮೂರ್ತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ವಾದ್ರಾ ಪಾದಸ್ಪರ್ಶ ಮಾಡಿದರು. ಅಲ್ಲಿ 397ರಲ್ಲಿ 394 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಡೆಪಾಸಿಟ್ ಕಳೆದುಕೊಳ್ಳಲು ಅವರ ಕೊಡುಗೆ ಹಾಗೂ ದೊಡ್ಡದಿದೆ ಎಂದು ಕಟಕಿಯಾಡಿದರು.
Also Read: ಕೈಗಾರಿಕೋದ್ಯಮಿಗಳು ರಿಯಾಯಿತಿ ವಿದ್ಯುತ್ ಸೇವೆಯ ಪ್ರಯೋಜನ ಪಡೆದುಕೊಳ್ಳಿ
ರಾಜ್ಯಸಭೆಗೆ ಕರ್ನಾಟಕದಿಂದ ಪ್ರಿಯಾಂಕ ಸ್ಫರ್ಧೆ ಮಾಡಿದರೆ ಖಂಡಿತವಾಗಿಯೂ ಗೆಲ್ಲುತ್ತಾರೆ. ಹಾಗೆ ಅವರು ಇಲ್ಲಿಂದ ಗೆದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಳ್ಳಲಿ. ಈಗ ಅವರ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವಿದೆ. ಆನಂತರ ಪ್ರಿಯಾಂಕ ಅವರ ಉಸ್ತುವಾರಿಯಿಂದ ಅಧಿಕೃತ ಪ್ರತಿಪಕ್ಷ ಸ್ಥಾನವೂ ಸಹ ದೊರೆಯದಂತಾಗಲಿ ಎಂದು ಆಶಿಸುತ್ತೇವೆ ಎಂದು ಕುಹಕವಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















