Tuesday, July 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಕೃಷ್ಣ ಹೇಳಿದ ಮಾರ್ಗದಲ್ಲಿ ಬದುಕೋಣ | ಭಂಡಾರ ಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಂದೇಶ

ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ ಅಂಗವಾಗಿ ಸಂವಾದ | ನೂರಾರು ಗೋವುಗಳ ಸಂರಕ್ಷಕ ಅರುಣ್ ಅವರಿಗೆ ಸನ್ಮಾನ

May 18, 2024
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಮಹಾಭಾರತ ಮತ್ತು ಭಾಗವತದಲ್ಲಿ ಭಗವಾನ್ ಶ್ರೀ ಕೃಷ್ಣ ತೋರಿದ ಮಾರ್ಗದಲ್ಲಿ ನಮ್ಮ ಬದುಕನ್ನು ರೂಪಿಸಿಕೊಂಡರೆ ಸಾರ್ಥಕತೆ ಸಾಧ್ಯ ಎಂದು ಭಂಡಾರ ಕೇರಿ #BandarakeriMutt ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.

ಬೆಂಗಳೂರಿನ #Bengaluru ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಭಾಗವತಾಶ್ರಮ ಪ್ರತಿಷ್ಠಾನ, ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಸಂಯುಕ್ತವಾಗಿ ಹಮ್ಮಿಕೊಂಡಿರುವ ಶ್ರೀ ವಿದ್ಯಾಮಾನ್ಯ ತೀರ್ಥ ಗುರುಗಳ ಆರಾಧನಾ ಉತ್ಸವ ಮತ್ತು ವೇದವ್ಯಾಸ ಜಯಂತಿ ಸರಣಿ ಕಾರ್ಯಕ್ರಮದ ಮೂರನೇ ದಿನ ಆಯೋಜನೆಗೊಂಡಿರುವ ವಿಶೇಷ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ಮಾರ್ಗದಲ್ಲಿ ನಾವು ಸಾಗಿದಾಗ ದಿನೇ ದಿನೇ ಅಭಿವೃದ್ಧಿ ಸಾಧ್ಯವಿದೆ. ಶ್ರೀ ಕೃಷ್ಣನ ಅನನ್ಯ ಸೇವಕರಾದ ಪಾಂಡವರು ಹೇಗೆ ಬದುಕಿದ್ದರು ಎಂಬುದನ್ನು ಕೊಂಚ ಅವಲೋಕಿಸಿದರೆ ನಮ್ಮ ಬದುಕನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದು ನಿರ್ಧರಿತವಾಗುತ್ತದೆ ಎಂದರು.
ಅರ್ಜುನನನ್ನು ನೆನೆಸಿಕೊಂಡರೆ ಒಳ ಹೊರಗಿನ ಶತ್ರುಗಳು ನಾಶವಾಗುತ್ತಾರೆ. ನಕುಲ ಸಹದೇವರನ್ನು ಸ್ಮರಿಸಿಕೊಂಡರೆ ನೂರೆಂಟು ರೋಗಗಳು ದೂರವಾಗುತ್ತವೆ. ಧರ್ಮರಾಜ ಮತ್ತು ಭೀಮಾದಿಗಳನ್ನು ಸ್ಮರಿಸಿಕೊಂಡರೆ ಧರ್ಮದ ಉಳಿವು ಮತ್ತು ಸಾಮರ್ಥ್ಯದ ಸದ್ಬಳಕೆಯಾಗುತ್ತದೆ. ಹಾಗಾಗಿ ನಾವು ಮಹಾಭಾರತ ಏನು ಸಂದೇಶ ಕೊಟ್ಟಿದೆಯೋ ಆ ನಿಟ್ಟಿನಲ್ಲಿ ನಮ್ಮ ಚಟುವಟಿಕೆಗಳನ್ನು ರೂಪಿಸಿಕೊಳ್ಳುವುದು ಕಲಿಯುಗದಲ್ಲಿ ವಿಹಿತ ಎಂದರು.

Also read: ಜಾತಿ, ದುಡ್ಡಿನ ಮೇಲೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಕಾನೂನು ಪ್ರಕೋಷ್ಠದ ಪ್ರವೀಣ್ ಆಕ್ರೋಶ
ಮಹಾಕಾವ್ಯದ ಮರು ಸೃಷ್ಟಿ ಸಲ್ಲದು
ಮಹಾಭಾರತ ಮತ್ತು ರಾಮಾಯಣಗಳನ್ನು ಸೃಜನಶೀಲತೆ ಎಂಬ ಹೆಸರಿನಲ್ಲಿ ಮರು ಸೃಷ್ಟಿ ಮಾಡುವ ಕಾರ್ಯ ಎಂದಿಗೂ ಸಲ್ಲದು ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಈ ಎರಡೂ ಮಹಾ ಕಾವ್ಯಗಳನ್ನು ಆಧರಿಸಿ ತಮಗೆ ತೋಚಿದ ರೀತಿಯಲ್ಲಿ ಸಿನಿಮಾ ಮಾಡುವುದು, ನಾಟಕ ಆಡುವುದ, ಮರು ಸೃಷ್ಟಿ ಗ್ರಂಥಗಳನ್ನು ರಚಿಸುವುದು ಆಧುನಿಕರಿಗೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಮತ್ತು ಕಲಾವಿದರು ಚಿಂತನ – ಮಂಥನ ನಡೆಸಿ ಮೂಲ ಮಹಾಭಾರತ ಮತ್ತು ರಾಮಾಯಣಗಳಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ರಾಮಾಯಣ ಮತ್ತು ಮಹಾಭಾರತಗಳಿಗೆ ಉತ್ತಮವಾದ ವ್ಯಾಖ್ಯಾನವನ್ನು ನೀಡಿದ್ದು, ನಮ್ಮೆಲ್ಲರಿಗೆ ಮಹಾ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಆಚಾರ್ಯ ಶ್ರೀ ಮಧ್ವರು ತಾತ್ಪರ್ಯ ನಿರ್ಣಯ ಗ್ರಂಥಗಳನ್ನು ರಚನೆ ಮಾಡಿದ್ದಾರೆ‌.

ಗೋ ಸಂರಕ್ಷಕ ಅರುಣ್- ಸ್ಮಿತಾ ದಂಪತಿಗೆ ಸನ್ಮಾನ
ಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಗೋ ಸಂರಕ್ಷಣೆಯಲ್ಲಿ ಅದ್ವಿತೀಯ ಸಾಧನೆಗಳನ್ನು ಮಾಡುತ್ತಿರುವ ಡೆಂಕಣಿಕೋಟೆಯ ಫಲಾಮೃತ ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಮತ್ತು ಸ್ಮಿತ ದಂಪತಿಗೆ ವಿಶೇಷವಾಗಿ ಸನ್ಮಾನಿಸಿದರು. ಗೋ ಸೇವೆ ಎಂದರೆ ಅದು ಸಾಕ್ಷಾತ್ ಶ್ರೀ ಕೃಷ್ಣನ ಸೇವೆ ಇಂತಹ ನಿಸ್ವಾರ್ಥ ಗೋ ಸೇವೆಯಲ್ಲಿ ಶ್ರಮಿಸುತ್ತಿರುವ ಪಟ್ಟು ಹೆಚ್ಚಾಗಿ ಎಂದು ಶ್ರೀಗಳು ಆಶೀರ್ವದಿಸಿದರು.

ಮಹಾಭಾರತವು ನಿತ್ಯ ನೂತನ ಕಥೆಯಾಗಿದೆ. ಪಾಂಡವರು ಮತ್ತು ಕೌರವರ ಗುಣಗಳು, ಚಿಂತನೆಗಳು, ಉದ್ದೇಶಗಳು, ರಾಜ್ಯಭಾರದ ಕ್ರಮಗಳು, ಗುರು ಹಿರಿಯರನ್ನು ಗೌರವಿಸುವ ವಿಧಾನಗಳು, ಮಾಡಿದ ಯುದ್ಧಗಳು, ಕೊಡುವ ಸಂದೇಶಗಳನ್ನು ಸೂಕ್ಷ್ಮವಾಗಿ ನಾವು ಅವಲೋಕಿಸಿಕೊಳ್ಳಬೇಕಿದೆ ಎಂದರು.
ಪಂಡಿತ ತಿರುಮಲ ಕುಲಕರ್ಣಿ ಅವರು ಮಾತನಾಡಿ ಪಾಂಡವರು ವನವಾಸಕ್ಕೆಂದು ಕಾಡಿಗೆ ತೆರಳಿದರೂ ಅವರಿಗೆ ಭಗವಂತನ ಸಖ್ಯವಿತ್ತು. ಋಷಿ ಮುನಿಗಳ ಅನುಗ್ರಹವಿತ್ತು. ಅವರಿಗೆ ಕಾಡೇ ಸ್ವರ್ಗವಾಯಿತು. ಪಾಂಡವರಿಗೆ ಫಲಗಳನ್ನು ನೀಡಲೆಂದೇ ಭಗವಂತ ಧರೆಗಿಳಿದು ಬಂದ. ಪಾಂಡವರ ಮಹತ್ವ ಮತ್ತು ಸಮಾಜಕ್ಕೆ ನೀಡಿದ ಸಂದೇಶ ನಮಗೆ ಅರ್ಥವಾಗುವುದು ಮಹಾಕಾವ್ಯದ ಕೊನೆಯ ಭಾಗದಲ್ಲಿ. ಅಂದರೆ ಸಾಧಕರಿಗೆ ಮಾನ್ಯತೆ ದೊರಕುವುದು ಸಾಧನೆಯ ಕೊನೆಯ ಘಟ್ಟದಲ್ಲಿ. ಕೌರವನ ಗುಣಗಳನ್ನು ಅನುಸರಿಸಿದವರಿಗೆ ಮೊದಲಿಗೆ ಸಾಕಷ್ಟು ಫಲಗಳು ದೊರಕಬಹುದು. ಆದರೆ ಅವುಗಳು ಯಾವುದೂ ಶಾಶ್ವತವಲ್ಲ . ಹಾಗಿರುವಾಗ ನಾವು ಕೃಷ್ಣ ಮತ್ತು ಪಾಂಡವರ ಸಂದೇಶಗಳನ್ನು ಅನುಸರಿಸಿ ಜೀವನ ಕ್ರಮ ರೂಪಿಸಿಕೊಳ್ಳುವುದು ಅಗತ್ಯ ಎಂದರು.

ಪಂಡಿತ ವೆಂಕಟೇಶ್ ಕುಲಕರ್ಣಿ ತಮ್ಮ ವಿಚಾರಗಳನ್ನು ಮಂಡಿಸಿ ಮಹಾಭಾರತ ಎಂದರೆ ಕೇವಲ ಶಾಸ್ತ್ರ ಗ್ರಂಥ ಮಾತ್ರವಲ್ಲ. ಭಗವಂತನನ್ನು ತಿಳಿಯಲು ಒಂದು ಉತ್ತಮ ಸಾಧನ ಎಂದರು.

ದ್ರೌಪದಿ ಸ್ವಯಂವರ, ಪಗಡೆಯಾಟ, ವನವಾಸ ಮತ್ತು ಅಜ್ಞಾತವಾಸಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ ಅವರು, ಮಹಾಭಾರತ ಪ್ರತಿ ದಿನವೂ, ಪ್ರತಿ ಕ್ಷಣವೂ ನಮಗೆ ಸಂವಾದಿಯಾಗಿ ನಿಲ್ಲುತ್ತದೆ. ಅದರಲ್ಲಿನ ಧನಾತ್ಮಕ ಸಂಗತಿಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಇಹ ಮತ್ತು ಪರದಲ್ಲಿ ಮುಕ್ತಿ ದೊರಕಲು ಸಾಧ್ಯ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/05/Kumadwathi-1.mp4
http://kalpa.news/wp-content/uploads/2024/04/VID-20240426-WA0008.mp4
http://kalpa.news/wp-content/uploads/2024/04/VID-20240419-WA0018.mp4
Tags: Bandarakeri MuttBENGALURUKannada News WebsiteLatest News KannadaLord KrishnaSri Vidyeshathirtha Swamijiಬೆಂಗಳೂರುಭಾಗವತಮಹಾಭಾರತಶ್ರೀ ಕೃಷ್ಣಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ
Previous Post

ಪದವೀಧರರ ಸಮಸ್ಯೆ ಅರಿತಿದ್ದೇನೆ | ಗೆಲ್ಲಿಸಿ ಸ್ಪಂದಿಸಲು ಅವಕಾಶ ನೀಡಿ | ಡಾ.ಧನಂಜಯ ಸರ್ಜಿ ಮನವಿ

Next Post

ಮೂಡಬಿದರೆ | ಎರಡು ದಿನ ಆಳ್ವಾಸ್ ಬೃಹತ್ ಉದ್ಯೋಗ ಮೇಳ | ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೂಡಬಿದರೆ | ಎರಡು ದಿನ ಆಳ್ವಾಸ್ ಬೃಹತ್ ಉದ್ಯೋಗ ಮೇಳ | ನೋಂದಣಿ ಮಾಡಿಕೊಳ್ಳುವುದು ಹೇಗೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ದಾವಣಗೆರೆ | ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ | ಮಲಗಿದ್ದ ತಾಯಿ, ಮಗ ದುರ್ಮರಣ

July 1, 2025
Internet Image

ಗಮನಿಸಿ! ಜು.2ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

July 1, 2025
Internet Image

ಹೃದಯಾಘಾತಕ್ಕೆ ಹಾಸನದ ಬಾಣಂತಿ ಶಿವಮೊಗ್ಗದಲ್ಲಿ ಸಾವು | 40 ದಿನದಲ್ಲಿ 25 ಮಂದಿ ಬಲಿ

July 1, 2025

ಶಿವಮೊಗ್ಗ | ವೃದ್ದೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ | ಘಟನೆ ನಡೆದಿದ್ದೆಲ್ಲಿ? ಕಾರಣವೇನು?

July 1, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ದಾವಣಗೆರೆ | ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ | ಮಲಗಿದ್ದ ತಾಯಿ, ಮಗ ದುರ್ಮರಣ

July 1, 2025
Internet Image

ಗಮನಿಸಿ! ಜು.2ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

July 1, 2025
Internet Image

ಹೃದಯಾಘಾತಕ್ಕೆ ಹಾಸನದ ಬಾಣಂತಿ ಶಿವಮೊಗ್ಗದಲ್ಲಿ ಸಾವು | 40 ದಿನದಲ್ಲಿ 25 ಮಂದಿ ಬಲಿ

July 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!