No Result
View All Result
First VALORANT Campus Cup Champions Crowned
English Articles

First VALORANT Campus Cup Champions Crowned

by ಕಲ್ಪ ನ್ಯೂಸ್
April 15, 2026
0

Kalpa Media House  |  INDIA | The VALORANT Campus Cup (VCC) wrapped its inaugural edition with a Grand Finale that...

Read moreDetails
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
An Immaculate Demonstration on Confluence of Architecture Design & Music

An Immaculate Demonstration on Confluence of Architecture Design & Music

April 13, 2026
Rani KoHEnur Calls Transgender Bill “Absurd”, Questions Lawmakers in Explosive Podcast Interview

Rani KoHEnur Calls Transgender Bill “Absurd”, Questions Lawmakers in Explosive Podcast Interview

April 9, 2026
  • Advertise With Us
  • Grievances
  • About Us
  • Contact Us
Wednesday, April 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಜೀವನ ಎನ್ನುವುದು ಜ್ಞಾನ ಸಂಪಾದನೆ, ಸಾಧನೆಗಾಗಿಯೇ ಹೊರತು ಪ್ರಸಿದ್ಧಿಗಾಗಿ ಅಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 24, 2024
in ಆನಂದ ಕಂದ
0
ಜೀವನ ಎನ್ನುವುದು ಜ್ಞಾನ ಸಂಪಾದನೆ, ಸಾಧನೆಗಾಗಿಯೇ ಹೊರತು ಪ್ರಸಿದ್ಧಿಗಾಗಿ ಅಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-5  |

ಭಾರತೀಯ ಮತ್ತು ಭಾರತೀಯ ಎಂಬ ವಿಷಯ ಬಹಳ ಆಳವಾದದ್ದು. ಈ ವಿಷಯದ ಆಕೃತಿ ದೊರೆತದ್ದು ಲಂಡನ್ ನಗರ ಎಂಬ ಪಾಠದ ಪ್ರವೇಶಕ್ಕಾಗಿ ಮಾಡಿದ ಚರ್ಚೆಯಿಂದ. ಅಂದು ಮಾಡಿದ ಚರ್ಚೆ ಎಲ್ಲರನ್ನೂ ಚಿಂತೆಗೆ ಒಳಪಡಿಸಿತು. ಚರ್ಚೆ ಮಾಡುವ ಸಂದರ್ಭದಲ್ಲಿ ಬಹಳಷ್ಟು ಅಂಶಗಳು ನಮ್ಮ ಮನಸ್ಸನ್ನು ಆವರಿಸಿದವು. ಯಾವ ಯಾವ ಅಂಶಗಳು ಸರಿ? ಯಾವುವು ತಪ್ಪು? ಯಾವ ಅಂಶವನ್ನು ಸ್ವೀಕರಿಸಬಹುದು? ಅಥವಾ ಸ್ವೀಕರಿಸಬಾರದು? ಎಂದು ಯೋಚಿಸಲು ಸಾಧ್ಯವಾಗಲಿಲ್ಲ. ಆದರೆ ಮರುದಿನ ಸಮಾಧಾನದಿಂದ ಕುಳಿತುಕೊಂಡು ಯೋಚಿಸಿದಾಗ, ನಿಧಾನವಾಗಿ ಅವುಗಳನ್ನು ಪಟ್ಟಿ ಮಾಡಿದಾಗ ಅವುಗಳ ನಡುವಿನ ಅಂತರ ಹೀಗೆ ಕಾಣಿಸಿತು.

ಭಾರತೀಯ ಜೀವನ ದೃಷ್ಟಿ

1. ಆತ್ಮ ತತ್ವ

2. ಪ್ರಕೃತಿಯನ್ನು ಗೌರವಿಸುವುದು ಹಾಗೂ ಪೂಜಿಸುವುದು

3. ಸಮಗ್ರತೆಯ ದೃಷ್ಟಿ

4. ಸಮಾನತೆ

5. ಶಿಕ್ಷಣದ ಉದ್ದೇಶ ಜ್ಞಾನಾಧಾರಿತವಾಗಿದ್ದು ಸರ್ವತೋಮುಖ ಬೆಳವಣಿಗೆಯನ್ನು ಹೊಂದುವುದು ಮತ್ತು ಹಿತಚಿಂತನೆ

6. ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರವನ್ನು ಕಂಡುಕೊಳ್ಳುವುದು

7. ಪಾತ್ರ ಕರ್ತವ್ಯ ಹಾಗೂ ಸಂಬಂಧಗಳು

ಅ ಭಾರತೀಯ ಜೀವನ ದೃಷ್ಟಿ

1. ಎಲ್ಲವನ್ನು ಬೌದ್ಧಿಕ ವಸ್ತು ಎಂದು ಕಾಣುವುದು.

2. ಎಲ್ಲವನ್ನು ಕಂಡ ತುಂಡವಾಗಿ ಕಾಣುವುದು

3. ತಾರತಮ್ಯ

4. ಶಿಕ್ಷಣವು ಆದಾಯದ ಮೂಲವಾಗಿರುವುದು

5. ಸ್ಪರ್ಧೆ

6. ಆ ಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು

7. ಸ್ವಾರ್ಥ ಹಾಗೂ ತೋರಿಕೆ, ಆಡಂಬರ

ಹೀಗೆ ಇನ್ನೂ ಅನೇಕ ಅಂಶಗಳು ಚರ್ಚೆಯಲ್ಲಿ ಬೆಳಕಿಗೆ ಬಂದವು.

ಮೊದಲನೆಯ ಅಂಶವನ್ನು ನೋಡುವುದಾದರೆ ಭಾರತೀಯರು ಎಲ್ಲದರಲ್ಲೂ ಆತ್ಮ ತತ್ವವನ್ನು ಕಾಣುತ್ತಾರೆ. ಆತ್ಮ ತತ್ವವೆಂದರೆ ಎಲ್ಲದರಲ್ಲೂ ದೇವರನ್ನು ಕಾಣುವುದು. ಸಜೀವ ವಸ್ತುವೇ ಆಗಿರಲಿ ಅಥವಾ ಜಡ ವಸ್ತುವೇ ಆಗಿರಲಿ ಅದರಲ್ಲಿ ಆತ್ಮ ತತ್ವವನ್ನು ಕಾಣುವವರು ನಾವು ಭಾರತೀಯರು.

ಪ್ರಮುಖವಾಗಿ, ಪ್ರಕೃತಿಯು ಅದರಲ್ಲಿ ಒಂದು ಭಾಗವಾಗಿದ್ದು, ಭಾರತೀಯರು ಪ್ರಕೃತಿಯನ್ನು ಗೌರವಿಸುತ್ತಾರೆ, ಪೂಜಿಸುತ್ತಾರೆ. ಉದಾಹರಣೆಗೆ, ವಟಸಾವಿತ್ರಿ ಹಬ್ಬದ ದಿನ ವಟವೃಕ್ಷವನ್ನು ಪೂಜಿಸುವುದು, ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಹಾಗೂ ಪ್ರದಕ್ಷಿಣೆಗಳನ್ನು ಸಮರ್ಪಿಸುವುದು, ಸೂರ್ಯನಿಗೆ ವಂದಿಸುವುದು ಇತ್ಯಾದಿ.

ಅದೇ ಅ-ಭಾರತೀಯರು ಇವೆಲ್ಲವನ್ನೂ ಕೇವಲ ಭೌತಿಕ ವಸ್ತುವಿನ ರೀತಿಯಲ್ಲಿ ಎಲ್ಲವನ್ನೂ ಪರಿಗಣಿಸುತ್ತಾರೆ. ಗಿಡ ಮರಗಳನ್ನಾಗಲೀ ಪಂಚಭೂತಗಳನ್ನಾಗಲೀ ಪೂಜಿಸುವ ಅಥವಾ ಗೌರವಿಸುವ ಪರಂಪರೆಯನ್ನು ನಾವು ಅವರಲ್ಲಿ ಕಾಣಲು ಸಾಧ್ಯವಿಲ್ಲ. ಇನ್ನು ಮುಂದಿನ ಅಂಶಗಳನ್ನು ನೋಡುವುದಾದರೆ, ಭಾರತೀಯರಲ್ಲಿ ನಾವು ಸಮಗ್ರತೆಯ ಚಿಂತನೆಯನ್ನು ಕಾಣಬಹುದು.

ವಿವಿಧತೆಯಲ್ಲಿ ಏಕತೆ, ಈ ವಾಕ್ಯವನ್ನು ಬಹುಪಾಲು ಎಲ್ಲರೂ ಕೇಳಿರುತ್ತಾರೆ. ಬೇರೆ ಬೇರೆ ಸಂಸ್ಕೃತಿ ಸಂಪ್ರದಾಯಗಳಿದ್ದರೂ ಅವರಲ್ಲಿ ನಾವು ಏಕತೆಯನ್ನು ಕಾಣಬಹುದು. ಸಮಗ್ರತೆಯನ್ನು ಗುರುತಿಸುವಲ್ಲಿ ನಾವು ಆಯುರ್ವೇದದ ಉದಾಹರಣೆಯನ್ನು ನೋಡುವುದಾದರೆ, ಆಯುರ್ವೇದದಲ್ಲಿ ಆಂಗ್ಲ ಔಷಧೀ ವಿಧಾನದಲ್ಲಿ ಕಂಡಂತೆ ಹೃದಯ ರೋಗ, ಕಣ್ಣು, ಕಿವಿ ಮೂಗು ರೋಗ ಇತ್ಯಾದಿ ರೋಗಾಧಾರಿತವಾದ ಬೇರೆ ಬೇರೆ ಭಾಗಗಳನ್ನು ಕಾಣಲು ಸಾಧ್ಯವಿಲ್ಲ. ಬದಲಾಗಿ ಮನುಷ್ಯನ ದೇಹದ ಪ್ರಕೃತಿಯ ಆಧಾರದ ಮೇಲೆ ಚಿಕಿತ್ಸೆ ಕೊಡುವಂತಹ ವಿದ್ಯೆಯನ್ನು ಆಯುರ್ವೇದ ಕಲಿತ ಎಲ್ಲರೂ ಎಲ್ಲಾ ರೀತಿಯಾದ ಚಿಕಿತ್ಸೆಗಳನ್ನು ಕಲಿತಿರುತ್ತಿದ್ದರು. ಸಮಸ್ಯೆಯ ಮೂಲ ಹುಡುಕಿ ಪರಿಹಾರ ನೀಡುವ ರೀತಿ ಇದರ ವಿಶೇಷತೆ ಎಂಬುದು ಬಹಳ ಮುಖ್ಯವಾದದ್ದು. ಅ-ಭಾರತೀಯರು ಎಲ್ಲಾ ವಿಷಯಗಳನ್ನು ತುಂಡು ತುಂಡಾಗಿ ಅಧ್ಯಯನ ಮಾಡಿ, ಸಮಸ್ಯೆಯ ಮೂಲವನ್ನು ಹುಡುಕದೇ ಆ ಕ್ಷಣಕ್ಕಾಗಿ ಮಾತ್ರ ಪರಿಹಾರವನ್ನು ನೀಡುವುದನ್ನು ನಾವು ಗಮನಿಸಬಹುದು.

ಮುಂದಿನ ಅಂಶ, ಸಮಾನತೆ ಹಾಗೂ ತಾರತಮ್ಯ ಭಾರತೀಯರು ಎಂತಹ ಸಂದರ್ಭದಲ್ಲಿಯೂ ಒಗ್ಗಟ್ಟಿನಿಂದ ಇದ್ದುದನ್ನು ಅನೇಕ ಉದಾಹರಣೆಗಳ ಮೂಲಕ ಕಾಣಬಹುದು. ವರ್ಣಾಶ್ರಮದ ವ್ಯವಸ್ಥೆಯನ್ನು ನೋಡುವುದಾದರೆ, ಅವರು ಮೇಲು ಕೀಳು ಎಂಬ ಭಾವನೆ ಇಲ್ಲದೇ ಹೊಂದಾಣಿಕೆಯಿಂದ ಕೆಲಸಗಳನ್ನು ನಿಭಾಯಿಸಿದ್ದನ್ನು ಕಾಣಬಹುದು. ಬಣ್ಣ, ಅಂತಸ್ತು, ಶಿಕ್ಷಣ ಹೀಗೇ ಎಲ್ಲ ವಿಷಯಗಳಲ್ಲೂ ಮೇಲುಕೀಳು ಎಂಬ ಸ್ತರಗಳನ್ನು ಅ-ಭಾರತೀಯರಲ್ಲಿ ಕಾಣಬಹುದು. ಯಾರ ಹತ್ತಿರ ಹಣವಿದೆಯೋ ಅವರು ಮೇಲು, ಯಾರ ಹತ್ತಿರ ಹಣ ಇರುವುದಿಲ್ಲವೋ ಅವರು ಕೀಳು ಎಂದು ಕಾಣುವಾಗ ಅ-ಭಾರತೀಯರ ತಾರತಮ್ಯ ಭಾವವನ್ನು ಕಾಣಬಹುದಾಗಿದೆ.
ಶಿಕ್ಷಣವು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ, ಜ್ಞಾನ ಆಧಾರಿತ ಬೆಳವಣಿಗೆಗಾಗಿ ಹಾಗೂ ಹಿತ ಚಿಂತನೆಗಾಗಿಯೇ ಹೊರತು ಆದಾಯ ಅಥವಾ ಸ್ಪರ್ಧೆಗಾಗಿ ಅಲ್ಲ. ಇದನ್ನು ಅರಿತಿದ್ದ ನಮ್ಮ ಪೂರ್ವಜರು ಕುಟುಂಬ – ಗುರುಕುಲ ತನ್ಮೂಲಕ ಸಮಾಜದ ಅಭಿವೃದ್ಧಿ ಎಂಬ ಸರಿಯಾದ ಹಾದಿಯಲ್ಲಿ ನಡೆಯುತ್ತಿದ್ದರು. ಆದರೆ ಅ-ಭಾರತೀಯರ ಜೀವನ ದೃಷ್ಟಿಯು ಕಾಲಾಂತರದಲ್ಲಿ ನಮ್ಮ ಮೇಲೆ ಪ್ರಭಾವ ಬೀರಿ, ಶಿಕ್ಷಣ ಆದಾಯದ ಮೂಲ ಹಾಗೂ ಸ್ಪರ್ಧೆಗಾಗಿ ಎಂದು ತಿಳಿದು ತಪ್ಪು ದಾರಿಯನ್ನು ಹಿಡಿಯುವಂತಾಗಿದ್ದು ಬಹಳ ಬೇಸರದ ಸಂಗತಿ.

ನಾವು ಜ್ಞಾನ ಸಂಪಾದನೆಯನ್ನು ನಮಗಾಗಿ ಮಾಡಬೇಕೇ ಹೊರತು ಬೇರೆಯವರಿಗಾಗಿ ಅಲ್ಲ, ಸ್ಪರ್ಧೆಗಾಗಿ ಅಲ್ಲ. ಜೀವನವು ಸಾಧನೆಗಾಗಿಯೇ ಹೊರತು ಪ್ರಸಿದ್ಧಿಗಾಗಿ ಅಲ್ಲ, ನಮ್ಮ ಸಾಮರ್ಥ್ಯ ಸೇವೆಗಾಗಿಯೇ ಹೊರತು, ದರ್ಪ ಮೆರೆಯುವುದಕ್ಕಾಗಿ ಅಲ್ಲ ಎಂಬಿತ್ಯಾದಿ ವಿಷಯಗಳನ್ನು ಮನಗಂಡರು. ಭಾರತೀಯ ಹಾಗೂ ಅ-ಭಾರತೀಯ ಜೀವನ ಶೈಲಿಯಲ್ಲಿ ವ್ಯತ್ಯಾಸವನ್ನು ಗುರುತಿಸಿ, ಭಾರತೀಯ ಜೀವನ ದೃಷ್ಟಿಯು ಅನೇಕ ವಿಷಯಗಳಲ್ಲಿ ಎತ್ತರದಲ್ಲಿ ನಿಲ್ಲುತ್ತದೆ ಎಂಬುದನ್ನು ಕಂಡುಕೊಂಡು, ಭಾರತೀಯರಾದ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದು, ಗೌರವಪೂರ್ವಕವಾಗಿ, ಪ್ರೀತಿಯಿಂದ ಅವುಗಳನ್ನು ಅಳವಡಿಸಿಕೊಂಡು ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ವಿಶ್ವಗುರುವಾಗುವತ್ತ ಭಾರತವನ್ನು ಕರೆದೊಯ್ಯಬೇಕಿರುವುದು ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaayurvedaBENGALURUIndian EducationIndian Traditional EducationPurnapramati GurukulaWestern Medicalಜ್ಞಾನ ಸಂಪಾದನೆಬೌದ್ಧಿಕ ವಸ್ತುವಿಶ್ವಗುರುಶಿಕ್ಷಣ
Share196Tweet123Send
Previous Post

ಸ್ಪೂರ್ತಿಯ ಚಿಲುಮೆ, ಪುಟಾಣಿಗಳ ವಂದನೀಯ ಶಿಕ್ಷಕಿ ವಂದನಾ ರೈ, ಕಾರ್ಕಳ

Next Post

ಭದ್ರಾವತಿ | ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಮಾದರಿ ಪ್ರದರ್ಶನ | ಪೊಲೀಸರಿಂದ ತೆರವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ | ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಮಾದರಿ ಪ್ರದರ್ಶನ | ಪೊಲೀಸರಿಂದ ತೆರವು

ಭದ್ರಾವತಿ | ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಮಾದರಿ ಪ್ರದರ್ಶನ | ಪೊಲೀಸರಿಂದ ತೆರವು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬೇಕರಿ ಪದಾರ್ಥ ತಂದವ ಜೈಲುಪಾಲು! ಆಗಿದ್ದೇನು?

April 15, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

ಅಶೋಕಪುರಂ – ಕೆಎಸ್ಆರ್ ಬೆಂಗಳೂರು ಮೆಮು ಸೇವೆ ಎರಡು ದಿನ ರದ್ದು

April 15, 2026
ಇರಾನ್ ಯುದ್ಧ ಅಂತಿಮ ಹಂತಕ್ಕೆ: ವಿಶ್ವದ ಗಮನ ಸೆಳೆದ ಟ್ರಂಪ್ ಹೇಳಿಕೆ

ಇರಾನ್ ಯುದ್ಧ ಅಂತಿಮ ಹಂತಕ್ಕೆ: ವಿಶ್ವದ ಗಮನ ಸೆಳೆದ ಟ್ರಂಪ್ ಹೇಳಿಕೆ

April 15, 2026
ಬಿಹಾರ | ಬಿಜೆಪಿಯ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

ಬಿಹಾರ | ಬಿಜೆಪಿಯ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

April 15, 2026
ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

April 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL