No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Sunday, September 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಹಾವೀರ ಜಯಂತಿಗೆ ಅವರಷ್ಟೇ ಸುಂದರವಾದ ಒಂದು ಕಥೆ: ತಪ್ಪದೇ ಓದಿ

kalpa News by kalpa News
April 6, 2020
in Special Articles
0
ಮಹಾವೀರ ಜಯಂತಿಗೆ ಅವರಷ್ಟೇ ಸುಂದರವಾದ ಒಂದು ಕಥೆ: ತಪ್ಪದೇ ಓದಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಜೈನ ಧರ್ಮದ ವರ್ತಮಾನ ಕಾಲದ 24 ನೆಯ ತೀರ್ಥಂಕರರಾದ ಮಹಾವೀರ ಸ್ವಾಮಿಗೆ ಕೇವಲ ಜ್ಞಾನ ಪ್ರಾಪ್ತಿಯಾದರೂ ಅದೆಷ್ಟೋ ವರ್ಷಗಳ ಕಾಲ ಸ್ವಾಮಿಯ ಮುಖದಿಂದ ದಿವ್ಯ ಧ್ವನಿ ಮೊಳಗಿರಲಿಲ್ಲ. ಈ ಬಗ್ಗೆ ದೇವೇಂದ್ರನ ಗಮನಕ್ಕೆ ಬಂದಾಗ ಮಹಾವೀರ ಸ್ವಾಮಿಯ ಮುಖದಿಂದ ಹೊರಡುವ ದಿವ್ಯಧ್ವನಿಯನ್ನು ಅರ್ಥ ಮಾಡಿಕೊಂಡು ಪ್ರಪಂಚಕ್ಕೆ ವಿವರಿಸುವ ಮೇಧಾವಿಗಳು ಯಾರೂ ಇರಲಿಲ್ಲ. ಹಾಗಾಗಿ ದಿವ್ಯಧ್ವನಿ ಮೊಳಗಿರಲಿಲ್ಲ.

ಹಾಗಾದರೆ ಈ ದಿವ್ಯವಾಣಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಸಮರ್ಥರು ಯಾರು? ಹೀಗೆ ಯೋಚಿಸಿದಾಗ ಗೌತಮನೆಂಬ ಜ್ಞಾನಿ ಬ್ರಾಹ್ಮಣನೊಬ್ಬ ಈ ದಿವ್ಯವಾಣಿಯನ್ನು ಪ್ರಪಂಚಕ್ಕೆ ತಲುಪಿಸಬಲ್ಲ ಸಾಮರ್ಥ್ಯವಿದೆ ಎಂದು ತಿಳಿದುಬಂತು. ಆದರೆ ಗೌತಮ ಆತನ ಪಾಂಡಿತ್ಯದ ಬಗ್ಗೆ ಗರ್ವಿಯಾಗಿರುತ್ತಾನೆ. ಇದನ್ನರಿತ ದೇವೇಂದ್ರ ಬ್ರಾಹ್ಮಣನ ವೇಷದಲ್ಲಿ ಗೌತಮನಿದ್ದಲ್ಲಿಗೆ ಬರುತ್ತಾನೆ. ಒಂದು ಜಟಿಲವಾದ ಶ್ಲೋಕವನ್ನು ಹೇಳಿ ಅದರರ್ಥ ತಿಳಿಸುವಂತೆ ಹೇಳುತ್ತಾನೆ. ಆ ಶ್ಲೋಕ ಹೀಗಿದೆ..

ತ್ರೈಕಾಲ್ಯಂ ದ್ರವ್ಯ ಷಟ್ಕಂ ನವಪದ ಸಹಿತಂ
ಜೀವಷಟ್ಕಾಯ ಲೇಶಾಃ
ಪಂಚಾನ್ಯೇ ಚಾಸ್ತಿಕಾಯಾ ವ್ರತ ಸಮಿತಿ
ಗತಿರ್ಜ್ಞಾನಚಾರಿತ್ರ ಭೇದಾಃ
ಇತ್ಯೇತಾನ್ಮೋಕ್ಷ ಮೂಲಂ ತ್ರಿಭುವನಮಹಿತೈಃ
ಪ್ರೋಕ್ತಮರ್ಹದ್ಭಿರೀಶೈಃಈ
ಪ್ರತ್ಯೇತಿಶ್ರದ್ಧಧಾತಿಸ್ಮೃಶತಿಮತಿಮಾನ್ ಯಃ ಸವೈಃ ಶುದ್ಧದೃಷ್ಟಿಃ.

(ಇದರರ್ಥ ಹೀಗಿದೆ. ಶುದ್ಧ ದೃಷ್ಟಿಯಲ್ಲಿ ನೋಡುವುದಾರೆ 3 ಕಾಲದಲ್ಲಿ 6 ದ್ರವ್ಯ, 9 ತತ್ವ ಜೀವಾದಿ ಷಟ್ಕಾಯ ಅಸ್ತಿ ಕಾಯಗಳು 5, ವ್ರತ ಸಮಿತಿ ಭುಕ್ತಿಗಳು ಜ್ಞಾನ ಚಾರಿತ್ರ್ಯ ಭೇದಗಳು ಇದು ಮೋಕ್ಷದ ಮೂಲಗಳು.


ಇದೇ ಸಾಲುಗಳು ರತ್ನಾಕರವರ್ಣಿಯ ಶತಕದಲ್ಲಿ ಹೀಗೆ ಉಲ್ಲೇಖಿಸಲ್ಪಟ್ಟಿವೆ.

ಮಿಗೆ ಷಡ್ ದ್ರವ್ಯ ಮನಸ್ತಿಕಾಯಮೆನಿಪೈದಂ ತತ್ವವೇಳಂ ಮನಂ
ಬುಗಲೊಂಬತ್ತು ಪದಾರ್ಥಮಂ ತಿಳಿದೊಡಂ ತನ್ನಾತ್ಮನೀ ಮೆಯ್ಯ ದಂ
ದುಗದಿಂ ಬೇರೊಡಲೇನ ಚೇತನಮೆ ಜೀವಂ ಚೇತನಂ ಜ್ಞಾನರೂ
ಪಿಗಡಾಯೆಂದರಿದಿರ್ದನೇ ಸುಖಿಯಲಾ, ರತ್ನಾಕರಾಧೀಶ್ವರಾ….
(ಜೀವ ಪುದ್ಗಲ ಧರ್ಮ ಅಧರ್ಮ ಆಕಾಶ ಕಾಲ, ಈ ಆರಿ ದ್ರವ್ಯಗಳನ್ನೂ, ಜೀವಾಸ್ತಿ ಕಾಯ ಪುದ್ಗಲಾಸ್ತಿ ಕಾಯ, ಧರ್ಮಾಸ್ತಿ ಕಾಯ, ಅಧರ್ಮಾಸ್ತಿಕಾಯ, ಆಕಾಶಾಸ್ತಿಕಾಯ ಈ ಐದು ಅಸ್ತಿ ಕಾಯಗಳನ್ನೂ, ಜೀವ ಅಜೀವ, ಆಶ್ರವ, ಬಂಧ, ಸಂವರ, ನಿರ್ಜರ, ಮೋಕ್ಷ ಈ ಏಳು ತತ್ವಗಳನ್ನೂ ಜೀವಾಜೀವ, ಆಶದರವ, ಬಂಧ ಅಂವರ ನಿರ್ಜರ, ಮೋಕ್ಷ, ಪಾಪ ಪುಣ್ಯ ಈ ಒಂಬತ್ತು ಪದಾರ್ಥಗಳನ್ನು ಮನಸ್ಸಿಗೆ ಹೋಗುವಂತೆ ತಿಳಿದರೂ ತನ್ನ ಆತ್ಮನು ಈ ಶರೀರದ ಬಾಧೆಯಿಂದ ಬೇರೆಯಾಗಿರುವವನು. ಶರೀರವೇನು ಅಚೇತನವೇ??? ಜೀವವು, ಚೈತನ್ಯಸ್ವರೂಪವೂ, ಜ್ಞಾನರೂಪವೂ ಅಲ್ಲವೇ?? ಎಂದು ತಿಳಿದವನು ಸುಖಿಯಲ್ಲವೆ?? ಬೇಧವಿಜ್ಞಾನವು ಸುಖಿ ಎಂಬ ಭಾವವು..)

ಈ ಅರ್ಥ ವಿವರಣೆ ಗೌತಮನಿಂದ ಸಾಧ್ಯವಾಗುವುದಿಲ್ಲ. ಈ ವಾಕ್ಯದ ಮೇಲೆ ಆತನಿಗೆ ನಂಬಿಕೆ ಬರುವುದಿಲ್ಲ. ಆಗ ಬ್ರಾಹ್ಮಣನ ರೂಪದಲ್ಲಿದ್ದ ದೇವೇಂದ್ರ ಅವನಿಗೆ ಒಂದು ಸಲಹೆ ನೀಡುತ್ತಾನೆ. ಇಲ್ಲೇ ಸನಿಹದಲ್ಲಿ ಮಹಾವೀರ ಸ್ವಾಮಿಯ ಸಮವಸರಣಕ್ಕೆ ಹೋಗೋಣ. ಅವನಿಗೆ ಉತ್ತರ ಗೊತ್ತಿದೆಯೋ ತಿಳಿದುಕೊಳ್ಳೋಣ ಎಂದು.

ಗೌತಮ ಅವನಲ್ಲಿ ಇದಕ್ಕೆ ಉತ್ತರ ನೀಡೋ ಜ್ಞಾನ ಇದೆಯೋ ತಿಳಿಯೋಣ ಎಂದು ಮನವೊಲಿಸುತ್ತಾನೆ. ಅದಕ್ಕೊಪ್ಪಿ ಗೌತಮ ದೇವೇಂದ್ರನೊಡನೆ ಮಹಾವೀರರಿದ್ದಲ್ಲಿಗೆ ಹೊರಡುತ್ತಾನೆ. ಹೇಳಿದಾಗ ಮಹಾವೀರನಿದ್ದಲ್ಲಿಗೆ ಅವರು ಬರುತ್ತಾರೆ. ಸಮವಸರಣಕ್ಕೆ ಬರುತ್ತಲೇ ಅಲ್ಲಿ ಎದುರುಗಡೆಯಿದ್ದ ಮಾನಸ್ಥಂಭವನ್ನು ನೋಡಿದ ಕೂಡಲೇ ಗೌತಮನ ಅಹಂಕಾರವೆಲ್ಲ ಒಮ್ಮೆಗೇ ಇಳಿದು ಪರಿಶುದ್ಧನಾಗಿಬಿಡುತ್ತಾನೆ.

ಆ ಹೊತ್ತಿಗೆ ಮಹಾವೀರ ಸ್ವಾಮಿಯ ಮುಖದಿಂದ ದಿವ್ಯ ವಾಣಿ ಮೊಳಗುತ್ತದೆ. ನಂತರ ಗೌತಮ ಮಹಾವೀರ ಸ್ವಾಮಿಯ ಶಿಷ್ಯತ್ವ ಪಡೆದು ಗೌತಮ ಗಣಧರರಾಗಿ ಅವರ ಸಂದೇಶವನ್ನು ಜಗತ್ತಿಗೆ ಸಾರುತ್ತಾರೆ. ಎಪ್ರಿಲ್ 06 ರಂದು ದಿವ್ಯ ಪುರುಷ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ. ಭಗವಾನ್ ಮಹಾವೀರನ ಸಂದೇಶಗಳು ಜಗತ್ತಿಗೆ ಬೆಳಕಾಗಲಿ.. ಅಹಿಂಸಾ ಧರ್ಮ ವಿಶ್ವಧರ್ಮವಾಗಲಿ. ಎಲ್ಲೆಡೆ ಶಾಂತಿ ನೆಲೆಸಲಿ. ಜಗತ್ತಿಗೆ ಪ್ರಸಕ್ತ ಕಾಡುತ್ತಿರುವ ಸಮಸ್ಯೆಗಳು ಪರಿಹಾರವಾಗಲಿ ಎಂದು ದಿವ್ಯಜ್ಯೋತಿಯನ್ನು ಬೆಳಗಿಸಿ ಮಹಾವೀರ ಜಯಂತಿ ಆಚರಣೆ ಮಾಡೋಣ. ಎಲ್ಲರಿಗೂ ಮಹಾವೀರ ಜಯಂತಿ ಯ ಶುಭಾಶಯಗಳು.


Get in Touch With Us info@kalpa.news Whatsapp: 9481252093

Tags: GautamaJainKannadaNewsWebsiteLatestNewsKannadaLord MahaveeraShubhashaya Jainಗೌತಮಜೈನ ಧರ್ಮಮಹಾವೀರ ಜಯಂತಿ
Share215Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ವೀಡಿಯೋ: ಮಂತ್ರಾಲಯ, ಉಡುಪಿ ಸೇರಿದಂತೆ ಮಠ-ಮಂದಿರಗಳಲ್ಲಿ ಪ್ರಜ್ವಲಿಸಿದ ದೀಪ

Next Post

ಕೆಲಸ ತಡವಾಯಿತೆಂದು ಬ್ಯಾಂಕರ್’ಗಳನ್ನು ಬೈಯ್ಯುವ ಮುನ್ನ ಈ ಲೇಖನ ಓದಿ: ಎಷ್ಟು ವಿವರವಾಗಿ ಬರೆದಿದ್ದಾರೆ

kalpa News

kalpa News

Next Post
ಕೆಲಸ ತಡವಾಯಿತೆಂದು ಬ್ಯಾಂಕರ್’ಗಳನ್ನು ಬೈಯ್ಯುವ ಮುನ್ನ ಈ ಲೇಖನ ಓದಿ: ಎಷ್ಟು ವಿವರವಾಗಿ ಬರೆದಿದ್ದಾರೆ

ಕೆಲಸ ತಡವಾಯಿತೆಂದು ಬ್ಯಾಂಕರ್’ಗಳನ್ನು ಬೈಯ್ಯುವ ಮುನ್ನ ಈ ಲೇಖನ ಓದಿ: ಎಷ್ಟು ವಿವರವಾಗಿ ಬರೆದಿದ್ದಾರೆ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL