ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ವಿವಾಹಿತ ಮಹಿಳೆಯೊಬ್ಬರ ಅಕ್ರಮ ಪ್ರೀತಿ ಇಬ್ಬರ ಪ್ರಾಣ ಬಲಿ ಪಡೆದಿರುವ ಪ್ರೇಮ ಪ್ರಕರಣ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.
ವಿವಾಹವಾಗಿದ್ದರೂ ಗೃಹಿಣಿಯೊಬ್ಬಳು ತನ್ನ ಪ್ರಿಯಕರನಿಗಾಗಿ ಆತ್ಮಹತ್ಯೆಗೆ #Suicide ಶರಣಾಗಿದ್ದು, ಈ ವಿಷಯ ತಿಳಿದು ಅತ್ತ ಪ್ರಿಯಕರನೂ ಸಹ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಮೃತ ಗೃಹಿಣಿಯನ್ನು ಸೃಷ್ಠಿ(20) ಹಾಗೂ ಆಕೆಯ ಪ್ರಿಯತಮನನ್ನು ಪ್ರಸನ್ನ(25) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಠಿ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರಸನ್ನ ಸೃಷ್ಠಿ ಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ ಅಂತಿಮವಾಗಿ ಪ್ರಸನ್ನ ಮತ್ತು ಸ್ಪಂದನಾ ಮದುವೆಯಾದರೆ ಒಂದೂವರೆ ವರ್ಷದ ಹಿಂದೆ ದಿನೇಶ್ ಜೊತೆ ಸೃಷ್ಠಿಯ ಮದುವೆ ನಡೆದಿತ್ತು.
ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಸೃಷ್ಠಿ ನಡುವೆ ಪ್ರೀತಿ ಮುಂದುವರೆದಿತ್ತಿತ್ತು. ಈ ವಿಚಾರಕ್ಕೆ ಸೃಷ್ಠಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ.

ಡಿ.16 ರಂದು ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಈ ಶವ ಯಾರದ್ದೂ ಎಂದು ಪರಿಶೀಲಿಸಿದಾಗ ನಾಪತ್ತೆಯಾದ ಸೃಷ್ಠಿಯದ್ದೇ ಎನ್ನುವುದು ದೃಢಪಟ್ಟಿತ್ತು.
ಸೃಷ್ಠಿಯ ಆತ್ಮಹತ್ಯೆ ವಿಚಾರ ತಿಳಿದು ದುಃಖಕ್ಕೀಡಾಗಿದ್ದ ಪ್ರಸನ್ನ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post