ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಅಡಿಯಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣ ದಿನಕ್ಕೊಂದು ಅವಾಂತರ ಸೃಷ್ಠಿ ಮಾಡುತ್ತಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಾದ ಬೆನ್ನಲ್ಲೇ ಲಕ್ಷಾಂತರ ಮಂದಿ ಮಹಿಳೆಯರು ಪ್ರವಾಸೀ ಕ್ಷೇತ್ರಗಳಿಗೆ ತಂಡೋಪತAಡವಾಗಿ ತೆರಳುತ್ತಿದ್ದು, ಯಾವ ಬಸ್ ನೋಡಿದರೂ ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಪ್ರಮುಖವಾಗಿ, ತೀರ್ಥ ಕ್ಷೇತ್ರಗಳಿಗೆ ಮಹಿಳೆಯರು ವಾರಗಟ್ಟಲೆ ತೆರಳುತ್ತಿದ್ದು, ಇದು ಪುರುಷ ಪ್ರಯಾಣಿಕರಿಗೆ ಹಾಗೂ ಹಣ ನೀಡಿ ಪ್ರಯಾಣಿಸುವವರಿಗೆ ತೊಂದರೆಯಾಗಿ ಪರಿಣಮಿಸಿದೆ.
ಪ್ರಮುಖವಾಗಿ, ಬಸ್’ಗಳನ್ನು ಹತ್ತಲು ಬಹಳಷ್ಟು ನಿಲ್ದಾಣಗಳಲ್ಲಿ ಮಹಿಳೆಯರು ನೂಕುನುಗ್ಗಾಟ ನಡೆಸುತ್ತಿದ್ದು, ಪರಿಣಾಮವಾಗಿ ಸಿಬ್ಬಂದಿಗಳು ಮಾತ್ರ ಸುಸ್ತಾಗುತ್ತಿದ್ದಾರೆ.
Also read: ಗ್ಯಾರಂಟಿಗಳನ್ನು ಈಡೇರಿಸುವ ಶಕ್ತಿ, ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ: ಯಡಿಯೂರಪ್ಪ ವಾಗ್ದಾಳಿ
ಮುರಿದುಬಿತ್ತು ಬಾಗಿಲು
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಏಕಾಏಕಿ ನುಗ್ಗಿದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿಯಿತು. ಈ ವೇಳೆ ಮಹಿಳೆಯರ ಅಬ್ಬರಕ್ಕೆ ಬಸ್ ಬಾಗಿಲು ಸಂಪೂರ್ಣ ಕಿತ್ತು ಬಂದಿದ್ದು, ಸಿಬ್ಬಂದಿ ಹೈರಾಣಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post