ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನದ-3ರ Chandrayana-3 ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಅಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಂತ್ರಾಲಯದ ಶ್ರೀ ಸುಬುದೇಂಧ್ರ ತೀರ್ಥ ಶ್ರೀಪಾದಂಗಳವರು, Subudendra Shri ದೇಶದ ಇತಿಹಾಸದಲ್ಲಿ ಇದು ಐತಿಹಾಸಿಕ ಮಹತ್ವದ ದಿನ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇಂದು ಭಾರತದ ತಂತ್ರಜ್ಞಾನದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ದಿನವಾಗಿದೆ. ನಮ್ಮ ಪ್ರಾಚೀನ ಭಾರತದ ಇತಿಹಾಸದಲ್ಲಿ, ವೇದ ಪುರಾಣಗಳಲ್ಲಿ, ಪ್ರಾಚೀನ ಋಷಿ ಮುನಿಗಳು ತಂತ್ರಜ್ಞಾನದ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಆ ಎಲ್ಲದರ ಶ್ರೀಮಂತಿಕೆ ನಮ್ಮ ದೇಶದ್ದಾಗಿದೆ ಎಂದಿದ್ದಾರೆ.
ಇಸ್ರೋ ISRO ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ನೌಕೆ ತುಂಬಾ ಯಶಸ್ವಿಯಾಗಿ ನಿಗದಿತ ಸ್ಥಳವನ್ನು ತಲುಪಿರುವುದು ಅಭಿನಂದನಾರ್ಹ ವಿಷಯವಾಗಿದೆ. ಆ ಭಗವಂತನ ಅನುಗ್ರಹ, ಹರಿ-ಗುರುಗಳ ವಿಶೇಷ ಕೃಪೆ, ವಿಜ್ಞಾನಿಗಳ ಪರಿಶ್ರಮ, ಭಾರತ ಸರ್ಕಾರದ ಪ್ರೋತ್ಸಾಹ ಜೊತೆಗೆ ಎಲ್ಲ ಜನರ ವಿಶೇಷ ಶುಭ ಹಾರೈಕೆಯ ಫಲವಾಗಿ ಚಂದ್ರಯಾನ-3 ಯಶಸ್ಸು ಕಂಡಿದೆ ಎಂದರು.
Also read: ಕಾಂಗೈಗೆ ಆಯನೂರು ಮಂಜುನಾಥ್, ನಾಗರಾಜ್ ಗೌಡ ಸೇರಿದಂತೆ ಹಲವರ ಸೇರ್ಪಡೆ
ಇನ್ನು ಮುಂದೆಯೂ ಸಹ ಇಂತಹ ಹತ್ತು ಹಲವು ಸಂಶೋಧನೆಗಳು ದೇಶದ ವಿಜ್ಞಾನಿಗಳಿಂದ ಮೂಡಿ ಬರಲಿ. ದೇಶಕ್ಕೆ ವಿಶ್ವ ವ್ಯಾಪ್ತಿಯ ಕೀರ್ತಿ ಪ್ರತಿಷ್ಠೆಗಳು ಪ್ರಾಪ್ತಿಗೊಳ್ಳಲಿ ಎಂದು ಭಗವಂತ ಹಾಗೂ ಶ್ರೀಗುರುರಾಯರಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post